Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋನಮ್ ಸ್ವಾಗತಕ್ಕೆ ಮಹೇಶ್ ಸುಖಧರೆ ಸಜ್ಜು!
ನಾಲ್ಕಾರು ತಿಂಗಳುಗಳ ಹಿಂದೆ ಆದ ಈ ಸುದ್ದಿಗೆ ಯಾವುದೇ ರೆಕ್ಕೆ-ಪುಕ್ಕ ಇರಲಿಲ್ಲವಾಗಿ ಅದು ಸ್ಯಾಂಡಲ್ ವುಡ್ ತುಂಬಾ ಹಾರಾಡುವ ಬದಲು ಎಲ್ಲೋ ಮರೆಯಾಗಿತ್ತು. ಆದರೆ ಈಗ ಸ್ವತಃ ಅದೇ ನಿರ್ದೇಶಕ ಮಹೇಶ್ ಸುಖಧರೆ, ಈ ಮಾತನ್ನು ದೃಢೀಕರಿಸಿದ್ದಾರೆ. ಸದ್ಯದಲ್ಲೇ ಸೋನಮ್ ಕರೆತರುವ ವಗ್ಗೆ ಖಾತ್ರಿಪಡಿಸಿದ್ದಾರೆ. ದರ್ಶನ್ ಅವರಿಗೆ ಸೋನಮ್ ನಾಯಕಿ ಎಂದಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ 'ಭೈರವ' ಎಂದು ಹೆಸರಿಡಲಾಗಿದ್ದರೂ ಅದು ಅಂತಿಮವಾಗಿಲ್ಲ ಎಂದಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಅವರನ್ನು ಕಂಡು ಮಾತನಾಡಿಸಿ ಬಂದಿದ್ದ ಮಹೇಶ್ ಸುಖಧರೆ ಅವರಿಗೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ, ಮಹೇಶ್ ಸುಖಧರೆ ಹೇಳಿದ ಕಥೆಯನ್ನು ಇಷ್ಟಪಟ್ಟಿದ್ದರು ಸೋನಮ್. ಅಷ್ಟೇ ಅಲ್ಲ, ನಿರೂಪಣೆ ಶೈಲಿಯೂ ಅವರಿಗೆ ಇಷ್ಟವಾಗಿತ್ತು. ಆದರೆ ಆಗ ಅವರು ಸಾಕಷ್ಟು ಬಿಜಿಯಾಗಿದ್ದರು, ಇತ್ತ ದರ್ಶನ್ ಕೂಡ ಬಿಜಿಯಾಗಿದ್ದರು.
ಈಗಲೂ ಅಷ್ಟೇ, ಧನುಷ್ ನಾಯಕತ್ವದ ತಮಿಳು ಚಿತ್ರವೊಂದರ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸೋನಮ್, ಆನಂತರವಷ್ಟೇ ಕನ್ನಡದ ಚಿತ್ರದಲ್ಲಿ ನಟಿಸಲು ಸಾಧ್ಯವಾಗಬಹುದು. ಜೊತೆಗೆ ದರ್ಶನ್ ಕೂಡ ಇತ್ತೀಚಿಗಷ್ಟೇ 'ಸಂಗೊಳ್ಳಿ ರಾಯಣ್ಣ' ಚಿತ್ರ ಮಗಿಸಿ 'ಬುಲ್ ಬುಲ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಇಬ್ಬರೂ ಈಗಿರುವ ಕಮಿಟ್ ಮೆಂಟ್ ಮುಗಿಸಿ ಮಹೇಶ್ ಸುಖಧರೆ ಚಿತ್ರಕ್ಕೆ ಜೋಡಿಯಾಗಬಹುದು.
ದರ್ಶನ್ ಅಭಿನಯಿಸಲಿರುವ ತೆಲುಗು 'ಬೃಂದಾವನಂ' ರಿಮೇಕ್ ನಿರ್ದೇಶನದ ಹೊಣೆಯೂ ಈಗ ಮಹೇಶ್ ಸುಖಧರೆ ಅವರದೇ. ಈ ಮೊದಲು ಇದನ್ನು ಕೆ ಮಾದೇಶ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿತ್ತಾದರೂ ಅದೀಗ ಮಹೇಶ್ ಹೆಗಲೇರಿದೆ. ಅಂದರೆ, 'ಭೈರವ' (ಶೀರ್ಷಿಕೆ ಅಂತಿಮವಾಗಿಲ್ಲ!) ಹಾಗೂ 'ಬೃಂದಾವನಂ' ರಿಮೇಕ್ ಎರಡನ್ನೂ ಇವರೇ ನಿರ್ಧಶಿಬೇಕಾಗಿದೆ. ಸದ್ಯದಲ್ಲೇ ಸೋನಂ ಕಪೂರ್ ನಾಯಕಿಯನ್ನಾಗಿಸಿ ಭೈರವ ನಿರ್ದೇಶಿಸಲಿದ್ದೇನೆ ಎಂಬುದು ಸುಖಧರೆ ಮಾತು. ಮುಂದಿನ ಪುಟ ನೋಡಿ...