Don't Miss!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- News ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಶ್ರುತಿ ಮನೆಯಲ್ಲಿ ರಾತ್ರಿ ತಂಗಿದ್ದ ನಟನ್ಯಾರು?
ನಟಿ ಶ್ರುತಿ ಹಾಸನ್ ಮೇಲಿನ ದಾಳಿ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಹೊಸ ಎಪಿಸೋಡ್ ನಲ್ಲಿ ಎರಡು ಹೊಸ ಪಾತ್ರಗಳು ಇಣುಕಿವೆ. ಅಪರಿಚಿತನೊಬ್ಬ ಶ್ರುತಿ ಹಾಸನ್ ಮೇಲೆ ದಾಳಿ ಮಾಡಿದ್ದು, ತಪ್ಪಿಸಿಕೊಂಡದ್ದು, ಬಳಿಕ ಪೊಲೀಸರ ಅತಿಥಿಯಾಗಿದ್ದು ಗೊತ್ತೇ ಇದೆ.
ಇದರ ಹಿಂದೆ ಬಾಲಿವುಡ್ ನ ಬೊಂಬಾಟ್ ನಟಿಯೊಬ್ಬಳ ಕೈವಾಡ ಇದೆ ಎಂಬ ಸುದ್ದಿ ಇದೀಗ ಫಿಲಂಸಿಟಿಯಲ್ಲಿ ಹರಿದಾಡುತ್ತಿದೆ. ಆ ನಟಿ ಬೇರಾರು ಅಲ್ಲ. ಇತ್ತೀಚೆಗಷ್ಟೇ 'ಖಾನ್' ಒಬ್ಬರನ್ನು ವರಿಸಿದವರು. ಬಹಳ ಸುದೀರ್ಘ ಸಮಯ ಲಿವ್ ಇನ್ ಸಂಬಂಧ ಇಟ್ಟುಕೊಂಡು ಮದುವೆಯಾದವರು.
ಅದೆಲ್ಲಾ ಸರಿ ಶ್ರುತಿ ಹಾಸನ್ ಮೇಲೆ ಆಕೆಗೆ ಯಾಕೆ ದ್ವೇಷ ಎಂದು ತಲೆಕೆಡಿಸಿಕೊಂಡವರಿಗೆ ಒಂದು ಮಜಬೂತಾದ ಉತ್ತರವೂ ಸಿಕ್ಕಿದೆ. ಅದೇನೆಂದರೆ ಈ ಛೋಟಾ ಖಾನ್ ಸಾಹೇಬರು ದಾಳಿ ನಡೆದ ರಾತ್ರಿ ಶ್ರುತಿ ಹಾಸನ್ ಮನೆಯಲ್ಲೇ ತಂಗಿದ್ದರಂತೆ. ಮುಂದಿನ ಊಹೆ ನಿಮಗೇ ಬಿಟ್ಟದ್ದು.
[ಶ್ರುತಿ ಹಾಸನ್ ಬಗ್ಗೆ ಮೌನ ಮುರಿದ ತಾಯಿ ಸಾರಿಕಾ]
ಇತ್ತೀಚೆಗೆ ಅವರ ಮನೆಯಲ್ಲೇ ಹೆಚ್ಚಾಗಿ ಉಳಿಯುತ್ತಿರುವ ಖಾನ್ ಸಾಹೇಬರ ವ್ಯವಹಾರನ್ನು ಬಯಲಿಗೆಳೆಯಲು ಕಪೂರ್ ಖಾಂದಾನಿನ ಬೆಡಗಿ ಬಿಟ್ಟ ಅಸ್ತ್ರವೇ ಈ ಆಸಾಮಿ ಎನ್ನಲಾಗಿದೆ. ಆದರೆ ವ್ಯವಹಾರ ಬಯಲಾದರೆ 'ಖಾನ್'ದಾನ್ ನಲ್ಲಿ ಇನ್ನೇನು ರಾದ್ಧಾಂತವಾಗುತ್ತದೋ ಎಂದು ಭಯಪಟ್ಟ ನವಾಬರು ಕಥೆಗೆ ದಾಳಿಯ ಟ್ವಿಸ್ಟ್ ಕೊಟ್ಟಿದ್ದಾರಷ್ಟೇ ಎನ್ನುತ್ತವೆ ಮೂಲಗಳು.
ಇಷ್ಟಕ್ಕೂ ಶ್ರುತಿ ಮೇಲೆ ದಾಳಿ ಮಾಡಿದಾತನನ್ನು ಅಶೋಕ್ ಶಂಕರ್ ತ್ರಿಮುಖೇ (45) ಎಂದು ಗುರುತಿಸಲಾಗಿದೆ. ಫಿಲಂ ಸಿಟಿಯಲ್ಲಿ ಸ್ಪಾಟ್ ಬಾಯ್ ಆಗಿ ಬಂಧಿತ ಆರೋಪಿ ಕೆಲಸ ಮಾಡುತ್ತಿದ್ದ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಿದೆ.
ತನ್ನ ಸಹೋದರನಿಗೆ ಉದ್ಯೋಗ ಕೊಡಿಸುವ ಸಲುವಾಗಿ ಶ್ರುತಿ ಹಾಸನ್ ಮನೆಗೆ ಹೋಗಿದ್ದೆ. ತಾನು ಅವರಿಗೆ ಈ ವಿಷಯ ಹೇಳಲು ಪ್ರಯತ್ನಿಸುತ್ತಿದ್ದಂತೆ ಅವರು ರಫ್ ಎಂದು ಡೋರ್ ಹಾಕಿದರು. ಅಷ್ಟೇ ಹೊರತು ಅವರನ್ನು ಬೆದರಿಸಬೇಕೆಂಬ ಉದ್ದೇಶ ತಮಗಿರಲಿಲ್ಲ ಎಂದು ಪೊಲೀಸರಿಗೆ ಆತ ಹೇಳಿಕೊಂಡಿದ್ದಾನೆ. ಆದರೆ ಕಥೆ ಈಗ ಟ್ರ್ಯಾಕ್ ಗೆ ಬಂದಿರುವುದು ಆತನಿಗೆ ಇನ್ನೂ ಗೊತ್ತಗಿಲ್ಲವೋ ಏನೋ.