Don't Miss!
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಟ್ಟಿದ್ರೆ ಮುನಿ, ಸಿನಿಮಾದಲ್ಲೂ ರಾಜಕೀಯಾನಾ?
ಇತ್ತೀಚೆಗೆ ಒಂದು ಚಿತ್ರತಂಡ ನಗರದ ಮತ್ತಿಕೆರೆಯಲ್ಲಿರೋ ಜೆ.ಪಿ ಪಾರ್ಕ್ಗೆ ಬಂದಿದೆ. ಕರ್ನಾಟಕದ ಅತಿದೊಡ್ಡ ಉದ್ಯಾನವನ ಅನ್ನಿಸಿಕೊಂಡಿರೋ 87 ಎಕರೆಯ ಜೆ.ಪಿ ಪಾರ್ಕ್ ನಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ಹಲವು ನಟರ ಸಿನಿಮಾಗಳು ಸರಾಗವಾಗಿ ಸಂಗೀತ ಕಾರಂಜಿಯ ಸ್ಥಳದಲ್ಲಿ ಶೂಟಿಂಗ್ ನಡೆಸಿವೆ.
ಆದರೆ ಹೊಸಬರ ತಂಡವೊಂದು ಸಂಗೀತ ಕಾರಂಜಿಯ ಪ್ರದೇಶದಲ್ಲಿ ಶೂಟ್ ಮಾಡೋದಕ್ಕೆ ಹೊರಟಿದ್ದಕ್ಕೆ ನಿರ್ಮಾಪಕರ ಸಂಘದ ಅಧ್ಯಕ್ಷರು ನೋ ಅಂದಿದ್ದಾರಂತೆ. ಈ ಹಿಂದೆ ಹಲವು ಸಿನಿಮಾಗಳು ಶೂಟಿಂಗ್ ನಡೆಸೋಕೆ ಅವಕಾಶ ಕೊಟ್ಟಿದ್ರೂ ಈಗ್ಯಾಕೆ ಕೊಟ್ಟಿಲ್ಲ ಅನ್ನೋದು ಗೊತ್ತಿಲ್ಲ.
ತಮ್ಮ ಕ್ಷೇತ್ರದಲ್ಲಿ ಬರೋ ಪಾರ್ಕ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರೋ ಶಾಸಕರೂ ಆಗಿರೋ ಮುನಿರತ್ನ ಪರ್ಮಿಷನ್ ಕೇಳಿದ್ದಕ್ಕೆ ಯಾಕೆ ಮುನಿದರೋ ಗೊತ್ತಿಲ್ಲ. ಆದ್ರೆ ಹೊಸಬರ ಚಿತ್ರತಂಡ ಮಾತ್ರ ಎಲ್ಲರಿಗೂ ಒಂದು ರೂಲು ನಮಗೊಂದು ರೂಲಾ ಅಂತ ಬೇಸರ ಮಾಡಿಕೊಂಡಿದೆಯಂತೆ.
ಅಂದಹಾಗೆ ಮುನಿರತ್ನ ಅವರು ಕನ್ನಡದಲ್ಲಿ ಒಂದಷ್ಟು ಒಳ್ಳೆಯ ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಅವುಗಳಲ್ಲಿ ಕೀಚಕ, ಕಠಾರಿವೀರ ಸುರಸುಂದರಾಂಗಿ, ರಕ್ತಕಣ್ಣೀರು, ಆಂಟಿ ಪ್ರೀತ್ಸೆ ಚಿತ್ರಗಳು ಒಂದಷ್ಟು ಸದ್ದು ಮಾಡಿದಂತಹವು.
ಕನ್ನಡದ ಕೆಲವೇ ಕೆಲವು ಬುದ್ಧಿವಂತ ನಿರ್ಮಾಪಕರಲ್ಲಿ ಮುನಿರತ್ನ ಅವರು ಒಬ್ಬರು. ತಮ್ಮ ಚಿತ್ರಗಳನ್ನು ಅವರು ಪ್ರೊಮೋಟ್ ಮಾಡಿಕೊಳ್ಳುವ ರೀತಿ, ಅನುಸರಿಸುವ ತಂತ್ರಗಳಲ್ಲಿ ಅವರಿಗೆ ಅವರೇ ಸಾಟಿ. ಆದರೆ ಹೊಸಬರಿಗೆ ಅವರು ಈ ರೀತಿ ಅಡ್ಡಗಾಲು ಹಾಕಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.