Don't Miss!
- News ಹಳೇ ಹುಲಿ ಪಿಸಿ ಮೋಹನ್ ಎದುರು ಮನ್ಸೂರ್ ಅಲಿ ಖಾನ್ ಕಣಕ್ಕೆ; ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಬಿಜೆಪಿ ಕಲಿ?
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಡ ರೈತ ಗೀತೆ ನೇಗಿಲ ಯೋಗಿ ಹಾಡು
1983ರಲ್ಲಿ ತೆರೆಕಂಡ 'ಕಾಮನಬಿಲ್ಲು' ಚಿತ್ರದಲ್ಲಿ ಒಂಚೂರು ಬದಲಾವಣೆಗಳನ್ನು ಮಾಡಿ 'ನೇಗಿಲ ಯೋಗಿ' ಹಾಡನ್ನು ಬಳಸಿಕೊಳ್ಳಲಾಗಿತ್ತು. ಮೇರು ನಟ ಡಾ. ರಾಜ್ ಕುಮಾರ್, ಅನಂತ್ ನಾಗ್ ನಟಿಸಿದ ಈ ಹಾಡಿಗೆ ಸಿ. ಅಶ್ವಥ್ ಎತ್ತರದ ಧ್ವನಿಯಲ್ಲಿ ಹಾಡಿದ್ದರು. ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಈ ಹಾಡು ಅಜರಾಮರವಾಗಿಲಿ. ಈ ಹಾಡಿನ ಪೂರ್ಣ ಚರಣಗಳು ಇಲ್ಲಿದೆ.
ನೇಗಿಲ
ಹಿಡಿದ
ಹೊಲದೊಳು
ಹಾಡುತ
ಉಳುವಾ
ಯೋಗಿಯ
ನೋಡಲ್ಲಿ
ಫಲವನು
ಬಯಸದೆ
ಸೇವೆಯ
ಪೂಜೆಯು
ಕರ್ಮವೆ
ಇಹಪರ
ಸಾಧನವು
ಕಷ್ಟದೊಳನ್ನವ
ದುಡಿವನೆ
ತ್ಯಾಗಿ
ಸೃಷ್ಟಿನಿಯಮದೊಳಗವನೇ
ಭೋಗಿ
ಉಳುವಾ
ಯೋಗಿಯ
ನೋಡಲ್ಲಿ
ಲೋಕದೊಳೇನೇ
ನಡೆಯುತಿರಲಿ
ತನ್ನೀ
ಕಾರ್ಯವ
ಬಿಡನೆಂದೂ
ರಾಜ್ಯಗಳುಳಿಸಲಿ
ರಾಜ್ಯಗಳಳಿಯಲಿ
ಹಾರಲಿ
ಗದ್ದುಗೆ
ಮುಕುಟಗಳು
ಮುತ್ತಿಗೆ
ಹಾಕಲಿ
ಸೈನಿಕರೆಲ್ಲ
ಬಿತ್ತುಳುವುದನವ
ಬಿಡುವುದೆ
ಇಲ್ಲ
ಉಳುವಾ
ಯೋಗಿಯ
ನೋಡಲ್ಲಿ
ಬಾಳಿತು
ನಮ್ಮೀ
ನಾಗರಿಕತೆ
ಸಿರಿ
ಮಣ್ಣೋಣಿ
ನೇಗಿಲಿನಾಶ್ರಯದಿ
ನೇಗಿಲ
ಹಿಡಿದ
ಕೈಯಾದಾರದಿ
ದೊರೆಗಳು
ದರ್ಪದೊಳಾಳಿದರು
ನೇಗಿಲ
ಬಲದೊಳು
ವೀರರು
ಮೆರೆದರು
ಶಿಲ್ಪಿಗಳೆಸೆದರು,
ಕವಿಗಳು
ಬರೆದರು
ಉಳುವಾ
ಯೋಗಿಯ
ನೋಡಲ್ಲಿ
ಯಾರೂ
ಅರಿಯದ
ನೇಗಿಲ
ಯೋಗಿಯೆ
ಲೋಕಕೆ
ಅನ್ನವನೀಯುವನು
ಹೆಸರನು
ಬಯಸದೆ
ಅತಿಸುಖ
ಗಳಿಸದೆ
ದುಡಿದವನು
ಗೌರವಕಾಶಿಸದೆ
ನೇಗಿಲ
ಕುಲದೊಳಗಡಗಿದೆ
ಕರ್ಮ
ನೇಗಿಲ
ಮೇಲೆಯೆ
ನಿಂತಿದೆ
ಧರ್ಮ
ಉಳುವಾ
ಯೋಗಿಯ
ನೋಡಲ್ಲಿ