Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಈ ದಿಲ್ ಹೇಳಿದೆ ನೀ ಬೇಕಂತ' ಹೊಸ ದಾಖಲೆ
ನರಸಿಂಹರಾಜು ಮೊಮ್ಮಗ ಅವಿನಾಶ್ ಅಭಿನಯದ ಚಿತ್ರವೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದೆ. ಆಡಿಯೋ ರಿಲೀಸ್ ಮಾಡಿದ ಸಿನಿಮಾ ತಂಡ ಸಿಡಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಮಾರಾಟವಾದ್ರೆ ಪ್ಲಾಟೀನಂ ಡಿಸ್ಕ್ ಕೊಡೋದು ಮಾಮೂಲು. ಆದ್ರೆ 'ಈ ದಿಲ್ ಹೇಳಿದೆ ನೀ ಬೇಕಂತ' ಚಿತ್ರತಂಡ ಆಡಿಯೋ ರಿಲೀಸ್ ದಿನಕ್ಕೂ ಮೊದಲೇ 25 ಸಾವಿರ ಆಡಿಯೋ ಸಿಡಿ ಮಾರಾಟ ಮಾಡಿದೆ.
ಮೂಲತಃ ಚಿತ್ರದುರ್ಗದವರಾದ ನಿರ್ಮಾಪಕ ಶ್ರೀಧರ್ ಆಡಿಯೋ ಸಿಡಿ ಮಾರಾಟದ ಜೊತೆಗೆ ಚಿತ್ರದ ಪ್ರಚಾರಕ್ಕೆ ಜಿಲ್ಲೆ ಜಿಲ್ಲೆಗಳನ್ನ ಸುತ್ತಾಡಿದ್ದಾರೆ. ಈಗ ಈ ದಿಲ್ ಹೇಳಿದೆ ನೀ ಬೇಕಂತ ಚಿತ್ರತಂಡ 25 ಸಾವಿರ ಆಡಿಯೋ ಸಿಡಿಗಳನ್ನ ಮಾರಾಟ ಮಾಡಿದೆ. [ಲಿರಿಕ್ಸ್ ಬರೆಯೋಕೆ 2 ಕೋಟಿ ಖರ್ಚು ಮಾಡಿದ ಟೆಕ್ಕಿ]
ಈ ಹಿಂದೆ 'ಪದೇ ಪದೇ' ಸಿನಿಮಾಗೆ ಸಂಗೀತ ನೀಡಿ ಯಶಸ್ವಿಯಾಗಿದ್ದ ಸತೀಶ್ ಆರ್ಯನ್ ಸಂಗೀತದ ಹಾಡುಗಳು ಸಿನಿಪ್ರೇಮಿಗಳಿಗೆ ಇಷ್ಟವಾಗ್ತಿವೆ. ವಿಶೇಷ ಅಂದ್ರೆ ಸಾಹಿತ್ಯ ಪ್ರಿಯ ನಿರ್ಮಾಪಕ ಎಸ್ ಶ್ರೀಧರ್ ಎಲ್ಲ ಹಾಡುಗಳನ್ನ ಬರೆದಿದ್ದು ಸಾಹಿತ್ಯ ಕೂಡ ಸಂಗೀತಕ್ಕೆ ತಕ್ಕ ಸಾಥ್ ಕೊಡ್ತಿದೆ.
ಇಂದು (ಜು.24) ಆಡಿಯೋ ರಿಲೀಸ್ ಮಾಡಿಕೊಳ್ತಿರೋ ಚಿತ್ರತಂಡ ಈಗಾಗ್ಲೇ 25,000 ಸಿಡಿ ಮಾರಾಟ ಮಾಡಿರೋದು ನಿಜಕ್ಕೂ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಬೆಳವಣಿಗೆ. ಜಿಲ್ಲೆ ಜಿಲ್ಲೆಗಳಿಗೆ ಹೋಗಿ ಆಡಿಯೋ ಸಿಡಿ ಮಾರಾಟ ಮಾಡಿ ವಿಭಿನ್ನ ಪ್ರಯತ್ನ ಮಾಡ್ತಿರೋ ಚಿತ್ರತಂಡಕ್ಕೆ ನಾವು ಮೆಚ್ಚುಗೆ ಸೂಚಿಸಲೇಬೇಕು.
ಕೆ.ಟಿ.ಎಂ ಶ್ರೀನಿವಾಸ ಆಕ್ಷನ್ ಕಟ್ ಹೇಳಿರುವ ಚಿತ್ರದ ಪಾತ್ರವರ್ಗದಲ್ಲಿ ಅವಿನಾಶ್ ನರಸಿಂಹರಾಜು, ಶ್ರೀ ಶ್ರುತಿ, ಸುರೇಶ್ ಮಂಗಳೂರು, ವಿದ್ಯಾ ಮೂರ್ತಿ, ನಾಗೇಂದ್ರ ಶಾ, ಕುಮುದಾ ಹಾಗೂ ಮಿತ್ರ ಮುಂತಾದವರಿದ್ದಾರೆ. ಹೊಸಬರ ರೊಮ್ಯಾಂಟಿಕ್ ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.