Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆರಂಭ' ಚಿತ್ರದಲ್ಲೇನಿದು ಬಳುಕುವ ಸೊಂಟದ ನಂಟು
ಆರಂಭ ಚಿತ್ರದ ನಿರ್ದೇಶಕರಾದ ಎಸ್ ಅಭಿ ಹನಕೆರೆ ಯವ್ರು,ತಮ್ಮ ಚಿತ್ರದ ಹಾಡುಗಳು ಹುಟ್ಟಿದ ಬಗ್ಗೆ ಈ ಮೊದಲೇ ಹಂಚಿಕೊಂಡಿದ್ದರು. ಈ ಬಾರಿ ಅವರು ಚಿತ್ರದ ಇನ್ನೊಂದು ಸೂಪರ್ ಹಿಟ್ ಆದ ಹಾಡಿನ ಬಗ್ಗೆ ಹೇಳಿದ್ದಾರೆ.
ಲಾಂಗು,ಮಚ್ಚು,ಹಿಡಿದುಕೊಂಡು
ಓಡಾಡಿದ್ದನ್ನ,
ಅನಾಥ
ಮಕ್ಕಳ
ಸೇವೆ
ಮಾಡೋದನ್ನ,
ರೇಪ್
ನಡೆಯುವಾಗ,
ದಿಢೀರನೆ
ಬಂದು
ಕಾಪಾಡುವ,
ಇನ್ನೂ
ಏನೇನೋ
ರೀತಿಯಲ್ಲಿ,
ತೋರಿಸೋದು
ಹೀರೋಹಿಸಂ
ಅಲ್ಲ.
ಎಂತಹ
ಕಷ್ಟ
ಪರಿಸ್ಥಿತಿಯಲ್ಲೂ,
ಪಾಸಿಟಿವ್
ಅಗಿರೊದನ್ನ,
ತೋರಿಸೋದು
ಹೀರೋಹಿಸಂ!
ಎಂಬ
ಸಂದರ್ಭಕ್ಕೆ
ಹಾಡೊಂದು
ಬೇಕು,
ಅನ್ನೋದನ್ನ
ಗುರುಕಿರಣ್
ಹತ್ತಿರ
ಚರ್ಚಿಸಿದಾಗ,
ಅವರು
ಯಾವತ್ತೋ,
ಇವರ
ಮುಂದೆ
ಗುನುಗಿದ್ದ
ಹಾಡಿನ
ಪಲ್ಲವಿ,"ಹಾಡಿ
ಹಾಡಿ
ರೇಡಿಯೋಗೆ,
ಬೋರು
ಆಗೋದಿಲ್ಲ,
ಕೂಡಿ
ಕೂಡಿ
ಪ್ರೇಮಿಗಳಿಗೆ
ಸುಸ್ತೆ
ಆಗೋದಿಲ್ಲ"
ಪಾಸಿಟಿವ್
ಲೈನ್ಸ್
ಚೆನ್ನಾಗಿವೆ,
ಇದನ್ನು
ಕಂಪೋಸ್
ಮಾಡಿ
ಚೆನ್ನಾಗಿ
ಇರುತ್ತೆ
ಎಂದು
ತಮ್ಮ
ಇಂಗಿತ
ವ್ಯಕ್ತಪಡಿಸಿದ್ದಾರೆ.
['ಆರಂಭ'
ಚಿತ್ರದ
ಟೀಸರ್
ನಲ್ಲಿ
ಇದೇನಿದು
'ಆ'
ದೃಶ್ಯ?]
ನಮ್ಮ ಆರಂಭ ಚಿತ್ರದಲ್ಲಿ, ನಿಮ್ಮ ಬಿನ್ನವಾದ ಆ ಹಾಡು ಕೂಡ 'ಆರಂಭ' ಆಗಲಿ, ಈ ಹಾಡನ್ನು ನೀವೇ ಬರೆದು, ಹಾಡಬೇಕು ಎಂದು ಪಟ್ಟು ಹಿಡಿದು ಕುಳಿತಾಗ, ಗುರುಕಿರಣ್ ಹಾಡನ್ನು ಬರೆದು, ಹಾಡಿಬಿಟ್ರಂತೆ. ಗುರುಕಿರಣ್ ಮೊದಲ ಬಾರಿಗೆ ಬರೆದಂತಹ, ಲವ್ ಹಾಡು ಇದಾಗಿದೆ.
ಈ ಹಾಡನ್ನು,ತುಂಬಾ ಸ್ಟೈಲಿಶ್ ಆಗಿ, ಮತ್ತು ಕಲರ್ ಫುಲ್ ಆಗಿ ಚಿತ್ರೀಕರಿಸುವ ದೃಷ್ಟಿಯಿಂದ, ಈ ಹಾಡಿನ ಡ್ಯಾನ್ಸ್ ಮಾಸ್ಟರ್ ಸಂದೀಪ್ ರವರನ್ನ ಭೇಟಿ ಮಾಡಿ, ಸಹ ನೃತ್ಯಗಾರ್ತಿಯರ ಆಯ್ಕೆ ಮಾಡಿ, ಆವ್ರಿಗೆಲ್ಲ ಪ್ರ್ಯಾಕ್ಟೀಸ್ ಮಾಡಿಸಿ, ಶೂಟಿಂಗ್ ಸ್ಪಾಟ್ ಗೆ ಕರೆದೊಯ್ದುರು. ಇದಕ್ಕೆ ಬೇಕಾದ ರೇಡಿಯೋ ಮಾಡೆಲ್ನಾ,ಕಲಾ ನಿರ್ದೇಶಕ ಆರೋಗ್ಯ ಸ್ವಾಮಿ ಯವ್ರು ಅದ್ಭುತವಾಗಿ ಮಾಡಿಕೊಟ್ಟಿದ್ದರು.
(ನೀವು
ಹಾಡಿನ
ವೀಡಿಯೋ
ಸಾಂಗ್
ನೋಡಿದ್ರೆ
ಗೊತ್ತಾಗುತ್ತೆ)
ಹಾಡಿನಲ್ಲಿ
ಎಲ್ಲ
ನೃತ್ಯಗಾರ್ತಿಯರ
ಕೈಯಲ್ಲಿ
ಎಲ್ಸಿಡಿ
ಟಿವಿ
ಹಿಡಿಸಿ,
ಅದರಲ್ಲಿ
ನಾಯಕಿಯ
ಚಿತ್ರ
ಬರುವಂತೆ,
ಚಿತ್ರಿಸುವ
ಉಪಾಯ,
ಹೊಳೆದಿದ್ದ
ಅಭಿಯವ್ರಿಗೆ,
ನಿರ್ಮಾಪಕರ
ಸಹಕಾರ
ಸಿಗಲಿಲ್ಲ.
ಆ ಬೇಸರದಲ್ಲಿ ಇದ್ದಾಗ, ಅದಕ್ಕೆ ತಕ್ಷಣ ಅವ್ರಿಗೆ ಹೊಳೆದಿದ್ದು,ಬಿಸಿಲಲ್ಲೂ ಹೊಳೆಯುತ್ತಿದ್ದ, ನೃತ್ಯಗಾರ್ತಿಯರ ಬಿಳಿ ಸೊಂಟದ ಮೇಲೆನೇ, ಟೀವೀ ಚ್ಯಾನೆಲ್ ಲೋಗೋ ಬಿಡಿಸಿ ತೋರಿಸೋದು ಅಂತಾ! ಅದಕ್ಕೆ ನೃತ್ಯಗಾರ್ತಿಯರು ಒಪ್ಪಲಿಲ್ಲ,"ಚಿತ್ರ ಮಾಡುವುದು ನಟ ನಟಿಯರಿಗೆ ಸಂಭಾವನೆ ಕೊಡೋಕೆ ಅಲ್ಲ, ಜನಗಳಿಗೆ ಮನರಂಜನೆ ನೀಡುವುದಕ್ಕೆ" ಎಂದು ಅಭಿಯವ್ರು ಹೇಳಿ ಒಪ್ಪಿಸಿ,ಆರೋಗ್ಯ ಸ್ವಾಮಿ ಎಲ್ಲರ ಸೊಂಟದ ಮೇಲೆ ಟಿವಿ ಚ್ಯಾನೆಲ್ ಗಳ ಲೋಗೋ ಚಿತ್ತಾರ ಬಿಡಿಸಿದರು.
ನಂತರ ಎಲ್ಲರೂ ಸಂತೋಷವಾಗಿ ಹಾಡಿನ ಚಿತ್ರೀಕರಣಕ್ಕೆ ಸಹಕರಿಸಿದರು, ಹಾಡಿನ ಕೊನೆಯಲ್ಲಿ ಬಾಟಲ್ ಹೊಡೆಯುವ ದೃಶ್ಯದಲ್ಲಿ ಕೆಲ ನೃತ್ಯಗಾರ್ತಿಯರಿಗೆ, ಗಾಯಗಳು ಸಹ ಆಯಿತಂತೆ. ಕೊನೆಗೆ ಹಾಡಿನ ವೀಡಿಯೋ ನೋಡಿ, ಸಣ್ಣ ಪುಟ್ಟ ಲೋಪ ದೋಷಗಳಿದ್ದರೂ, ತುಂಬಾ ಖುಷಿಪಟ್ಟ ಅಭಿಯವರು ತಮ್ಮ ಅನುಭವ ಮೆಲುಕು ಹಾಕಿದ್ದಾರೆ.
ಗುರುಕಿರಣ್ ತಮ್ಮ, ಶೋಗಳಲ್ಲಿ, ಈ ಹಾಡನ್ನು ಹಾಡುವುದರ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ. ಹೊಸಬರೊಂದಿದೆ ಗುರುಕಿರಣ್ ಹೆಚ್ಚು ಉತ್ಸಾಹದಿಂದ, ಒಂಚೂರು ಬೇಧವಿಲ್ಲದೆ, ಸಂಗೀತ ಸಂಯೋಜನೆ ಮಾಡಿ ಕೊಟ್ಟಿದ್ದಕ್ಕೆ,ತುಂಬಾ ಖುಷಿಯಿದೆ ಎನ್ನುತ್ತಾರೆ ಅಭಿ.
"ಹೊಸಬರೊಂದಿಗೆ ನಾನು ಹೊಸಬನಾಗಿ ಕೆಲಸ ಮಾಡಲು ಇಚ್ಚಿಸುವುದರಿಂದ, ಹೊಸತನ ತುಂಬಾ ಖುಷಿ ಕೊಡುತ್ತೆ"ಅಂತಾ ಗುರುಕಿರಣ್ ಸಹ ಕಣ್ಣು ಮಿಟುಕಿಸಿ ಹೇಳುತ್ತಾರೆ! ಹಾಡಿನ ವೀಡಿಯೋ ನೋಡಿದ ಯಾರೋ ಪತ್ರಿಕಾ ಸಿಬ್ಬಂದಿ,"ಏನ್ರೀ ಟಿವಿ ಚಾನಲ್ ರವರನ್ನ ಸೊಂಟದ ಮೇಲೆ ಕೂರಿಸಿದಿರಾ?" ಎಂದು ಛೇಡಿಸಿದ್ದನ್ನ ನೆನಪು ಮಾಡಿಕೊಳ್ಳುತ್ತಾರೆ.
ಹಾಡನ್ನು ನೋಡಿದವ್ರೆಲ್ಲ ತಮ್ಮ ಮನೆಯಲ್ಲಿದ್ದ ಹಳೆಯ ರೇಡಿಯೋ ಗಳನ್ನು ನೆನಪು ಮಾಡಿಕೊಳ್ಳೋದು ಗ್ಯಾರೆಂಟೀ....ನೀವು ಸಾಂಗ್ ನೋಡಿಲ್ಲ ಅಂದ್ರೆ,ಒಂದ್ಸಲ ನೋಡ್ಕೊಂಡು ಅಭಿಪ್ರಾಯ ತಿಳಿಸಿ. ಚಿತ್ರ ಎಲ್ಲಾ ಹಂತಗಳನ್ನು ಪೂರೈಸಿ, ಮುಂದಿನ ತಿಂಗಳಲ್ಲಿ ಬಿಡುಗಡೆ ಕಾಣಲಿದೆ.