Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಮಿತಾ ಮಲ್ನಾಡ್ 'ಮಧುರಾ ಪಿಸು ಮಾತಿಗೆ'
ಅವರ ಸಂಗೀತ ನಿರ್ದೇಶನದಲ್ಲಿ ನಾನು ಹಾಡಿದ ಭಕ್ತಿಗೀತೆಗಳ ಮೂಲಕ ನನ್ನ ಎರಡನೇ ಕ್ಯಾಸೆಟ್ ಮಾರುಕಟ್ಟೆ ತಲುಪಿತು. ಜನರ ಬಾಯಲ್ಲಿ ನಾನು ಹಾಡಿದ ಹಾಡುಗಳು ಈ ಎರಡು ಧ್ವನಿಮುದ್ರಿಕೆಗಳ ಮೂಲಕ ನಲಿದಾಡತೊಡಗಿದ್ದವು. ನನಗೆ ಜನಪ್ರಿಯತೆ ತಾನಾಗಿಯೇ ದೊರಕತೊಡಗಿತ್ತು.
* ಸಿನಿಮಾ ಹಾಡು ಹಾಡುವ ಅವಕಾಶ ದೊರಕಿದ್ದು ಹೇಗೆ? 'ಜರ್ನಿ' ವಿವರಿಸಿ...
ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ರಾಧಿಕಾ-ವಿಜಯರಾಘವೇಂದ್ರ ಜೋಡಿಯ 'ನಿನಗಾಗಿ' ಚಿತ್ರದ ಹಾಡುಗಳು ಸಿದ್ಧವಾಗತೊಡಗಿದ್ದವು. ಸಂಗೀತ ನಿರ್ದೇಶಕ ಗುರುಕಿರಣ್ ಅವರು 'ನಿನಗಾಗಿ' ಚಿತ್ರದ 'ಶುಕ್ರಿಯಾ ಶುಕ್ರಿಯಾ...' ಹಾಡನ್ನು ನನ್ನಿಂದ ಹಾಡಿಸಿದರು. ಅದೇ ನಾನು ಸಿನಿಮಾಗೆ ಹಾಡಿದ ಮೊದಲು ಹಾಡು. ಚಿತ್ರಗೀತೆಗಳ ಹಿನ್ನೆಲೆ ಗಾಯನಕ್ಕೆ ನಾಂದಿ ಹಾಡಿದ ಹಾಡು.
ಅಲ್ಲಿಂದ ಮುಂದೆ 'ಕರಿಯಾ' ಚಿತ್ರದಲ್ಲಿ 'ನನ್ನಲಿ ನಾನಿಲ್ಲ...' ಗೀತೆ ಹಾಡಿದೆ. ನಂತರ, 'ಮಧುರಾ ಪಿಸು ಮಾತಿಗೆ...' ಎಂಬ ಹಾಡನ್ನು 'ಬಿರುಗಾಳಿ' ಚಿತ್ರಕ್ಕಾಗಿ ಹಾಡಿದೆ. ಆ ಹಾಡಿಗೆ ಶ್ರೇಷ್ಟ ಹಿನ್ನೆಲೆ ಗಾಯಕಿ 'ಸೌತ್ ಇಂಡಿಯಾ ಫಿಲಂ ಫೇರ್ ಪ್ರಶಸ್ತಿ', ಹಾಗೂ ಸುವರ್ಣ ಅವಾರ್ಡ್ ಬಂತು. ಅಲ್ಲಿಂದ ಮುಂದೆ ಒಂದಾದ ಮೇಲೆ ಇನ್ನೊಂದರಂತೆ ಸಾಕಷ್ಟು ಹಾಡುಗಳನ್ನು ಹಾಡುತ್ತಾ ಬಂದಿದ್ದೇನೆ. ಸುಮಾರು 500 ಕ್ಕೂ ಮೀರಿ ಕನ್ನಡದ ಚಿತ್ರಗಳಿಗೆ ಧ್ವನಿಯಾಗಿದ್ದೇನೆ. ಸುಮಾರು '5000' ದಷ್ಟು ಸಿನಿಮಾ ಹಾಗೂ ಸಿನಿಮೇತರ ಗೀತೆಗಳಿಗೆ ಧ್ವನಿಯಾದ ಖುಷಿ ನನಗಿದೆ.
ಗುರುಕಿರಣ್, ಹಂಸಲೇಖ, ವಿ ಹರಿಕೃಷ್ಣ, ಮನೋಮೂರ್ತಿ, ರಾಜೇಶ್ ಕೃಷ್ಣನ್, ಸಾಧು ಕೋಕಿಲ, ಕೆ ಕಲ್ಯಾಣ್, ವಿ ಮನೋಹರ್, ಆರ್ ಪಿ ಪಟ್ನಾಯಕ್, ಅರ್ಜುನ್ ಜನ್ಯಾ, ಸಂದೀಪ್ ಚೌಟ, ಯುವನ್ ಶಂಕರ್ ರಾಜಾ ಹಾಗು ಎಲ್ ಎನ್ ಶಾಸ್ತ್ರಿ ಮುಂತಾದ ಸಂಗೀತ ನಿರ್ದೇಶಕರ ಹಾಡುಗಳನ್ನು ಹಾಡಿದ್ದೇನೆ. ಮುಂದಿನ ಪುಟ ನೋಡಿ...