Don't Miss!
- Automobiles ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
- News SSLC Result 2024: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಯಾವಾಗ? ಪರಿಶೀಲಿಸುವುದೇಗೆ?-ಮಾಹಿತಿ, ವಿವರ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಜಯ್ -ಅಮೂಲ್ಯ ಕೃಷ್ಣ ರುಕ್ಕು ಆಡಿಯೋ ವಿಮರ್ಶೆ
ಕೃಷ್ಣ ಅಲಿಯಾಸ್ ಅಜಯ್ ರಾವ್ ಮತ್ತು ಗೋಲ್ಡನ್ ಕ್ವೀನ್ ಅಮೂಲ್ಯ ಅಭಿನಯದ ಕೃಷ್ಣ ರುಕ್ಕು ಚಿತ್ರದ ಹಾಡುಗಳು ಬೆಂಗಳೂರಿನ ಸಿಟಡೆಲ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಫಿಲ್ಮಿ ಬೀಟ್ ನಲ್ಲಿ ಈ ಚಿತ್ರದ ಹಾಡುಗಳ ಬಗ್ಗೆ ವಿಮರ್ಶೆ ಓದಿ ..
ಉದಯ್ ಮೆಹ್ತಾ ರವರ ನಿರ್ಮಾಣದಲ್ಲಿ, ಅನಿಲ್ ಕುಮಾರ್ ರವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಒಟ್ಟು 5 ವಿಭಿನ್ನ ಹಾಡುಗಳನ್ನು ವಿ . ಶ್ರೀಧರ್ ಸಂಭ್ರಮ್ ರವರು ಸಂಯೋಜಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡುಗಳು ಲೋಕಾರ್ಪಣೆಗೊಳ್ಳುತ್ತಿದೆ.
1 - ಹೇಳಿಲ್ಲಾ ಯಾರಲ್ಲೂ ನಾನು
ಡಾ . ಜಯಂತ್ ಕಾಯ್ಕಿಣಿ ರವರು ರಚಿಸಿರುವ ಈ ಡುಯೆಟ್ ಹಾಡಿಗೆ ಸೋನು ನಿಗಮ್ ಮತ್ತು ಶ್ರೇಯಾ ಘೋಶಾಲ್ ದನಿ ಗೂಡಿಸಿದ್ದು ಕೆಲವು ಹಿಂದಿ ವಾಕ್ಯಗಳನ್ನು ಬಳಸಿ ಕವಾಲಿ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡು ಸಾಹಿತ್ಯ ಮತ್ತು ಸಂಗೀತದ ದೃಷ್ಟಿಯಲ್ಲಿ ಕೇಳುಗರ ಹೃದಯದಲ್ಲಿ ಮೊದಲ ಸ್ಥಾನ ಪಡೆಯುವುದರಲ್ಲಿ ಯಾವದೇ ಸಂಶಯ ಇಲ್ಲ.
2. ಲಿಪ್ ಸ್ಟಿಕ್ ಒಳಗಿನ ಲಿಪ್ಪಿನ
ಇತ್ತೀಚಿನ
ಬಹುಬೇಡಿಕೆಯ
ಗಾಯಕರ
ಲಿಸ್ಟ್
ನಲ್ಲಿ
ಟಾಪ್
ನಲ್ಲಿರುವ
ಪವರ್
ಸ್ಟಾರ್
ಪುನೀತ್
ರಾಜಕುಮಾರ್
ಮತ್ತು
ಉದಯೋನ್ಮುಖ
ಗಾಯಕಿ
ಶ್ವೇತ
ಪ್ರಭು
ಹಾಡಿರುವ
ಈ
ಹಾಡು
ಚಿತ್ರದ
ಒಂದು
ಪೆಪ್ಪಿ
ಸಾಂಗ್
ಆಗಿದ್ದು
ಆನಂದ್
ಪ್ರಿಯಾ
ರವರ
ಸಾಹಿತ್ಯವಿದೆ.
3. ಸಾಕು ಸಾಕಿನ್ನು
ಕಾರ್ತಿಕ್ ಮತ್ತು ಅನುರಾಧ ಭಟ್ ಧ್ವನಿಯಲ್ಲಿ ಹೊರಬಂದಿರುವ ಈ ಮಾಧುರ್ಯ ಪ್ರಧಾನವಾದ ವಿರಹ ಗೀತೆಗೆ ನಿರ್ದೇಶಕ ಅನಿಲ್ ಕುಮಾರ್ ರವರೆ ಪದ ಪೋಣಿಸಿದ್ದಾರೆ .
4. ಸಿ ಫಾರ್ ಕವ್ವು
ಈ
ಚಿತ್ರದ
ಒಂದು
ಫಾಸ್ಟ್
ಬೀಟ್
ಹಾಡು
ಇದಾಗಿದ್ದು
ಮೇಲ್ನೋಟಕ್ಕೆ
ಯುವಕರನ್ನು
ಗಮನದಲ್ಲಿ
ಇಟ್ಟುಕ್ಕೊಂಡು
ಈ
ಹಾಡನ್ನು
ಶ್ರೀಧರ್
ರವರು
ಸಂಯೋಜಿಸಿರುವಂತಿದೆ
ಅಲ್ಲದೆ
ಈ
ಹಾಡಿಗೆ
ಖುದ್ದು
ಅವರೇ
ಸಾಹಿತ್ಯ
ರಚಿಸಿರುವುದು
ವಿಶೇಷವಾದ
ಸಂಗತಿ.
5. ಸಾಕುಸಾಕಿನ್ನು ( ಸೋಲೋ )
ನಾಯಕಿ ತನ್ನ ವಿರಹದ ವೇದನೆಯನ್ನು ಹೇಳಿಕೊಳ್ಳುವ ಅನುರಾಧ ಭಟ್ ಧ್ವನಿಯಲ್ಲಿ ಮೂಡಿಬಂದಿದ್ದು ಚಿತ್ರದಲ್ಲಿ ಎರಡು ಬಾರಿ ಕೇಳಸಿಗುತ್ತದೆ.
ಒಟ್ಟಾರೆ ಕೃಷ್ಣ ಮತ್ತು ರುಕ್ಕುಗೆ ವಿ . ಶ್ರೀಧರ್ ಸಂಭ್ರಮ್ ರವರು ಒಂದೊಳ್ಳೆ ಅಲ್ಬಮ್ ಕೊಟ್ಟಿದ್ದು ಕೇಳುಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಲಿ ಎಂದು ನಾವು ಹಾರೈಸೋಣ. ನೀವು ಹಾಡುಗಳನ್ನು ಕೇಳಿ ಅಭಿಪ್ರಾಯ ಹಂಚಿಕೊಳ್ಳಿ...