Don't Miss!
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೀತಸಾಹಿತಿ ಕವಿರಾಜ್ ಅವರಿಗೆ ಹ್ಯಾಟ್ರಿಕ್ ಸಂಭ್ರಮ
ಕನ್ನಡ ಚಿತ್ರರಂಗದ ಜನಪ್ರಿಯ ಗೀತಸಾಹಿತಿ ಕವಿರಾಜ್ ಅವರು ಹ್ಯಾಟ್ರಿಕ್ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಮಿರ್ಚಿ ಮ್ಯೂಸಿಕ್ ಅವಾರ್ಡ್ ನಲ್ಲಿ ಅವರು ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಾಲೆಂಜಿಂಗ್
ಸ್ಟಾರ್
ದರ್ಶನ್
ಅಭಿನಯದ
'ಬುಲ್
ಬುಲ್'
ಚಿತ್ರದ
"ಜಗದಲ್ಲಿರೋ
ಹುಚ್ಚರಲಿ
ನಾನು
ಒಬ್ಬ"
ಹಾಡಿಗೆ
2013ನೇ
ಸಾಲಿನ
ವರ್ಷದ
ಅತ್ಯುತ್ತಮ
ಗೀತರಚನೆಕಾರ
ಪ್ರಶಸ್ತಿ
ದೊರಕಿದೆ.
ಇದಕ್ಕೂ
ಮುನ್ನ
ಅವರು
2009,
2011ರಲ್ಲೂ
ಮಿರ್ಚಿ
ಮ್ಯೂಸಿಕ್
ಅವಾರ್ಡ್
ಪ್ರಶಸ್ತಿ
ಪಡೆದಿದ್ದರು.
[ಬದುಕಿನ
ಹೊಸ
ಅಧ್ಯಾಯ
ಆರಂಭಿಸಿದ
ಕವಿರಾಜ್]
ಬುಲ್ ಬುಲ್ ಚಿತ್ರದ ಎಲ್ಲಾ ಹಾಡುಗಳನ್ನೂ ಕವಿರಾಜ್ ಅವರೇ ಬರೆದಿದ್ದಾರೆ. ಅವರು ಬರೆದಿರುವ 'ಮೈನಾ' ಚಿತ್ರವೂ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಪ್ರಶಸ್ತಿಗಳು ಸಹಜವಾಗಿ ಕವಿರಾಜ್ ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ.
ಪ್ರೇಮ್ ನಿರ್ದೇಶನದ 'ಕರಿಯ' (2003) ಚಿತ್ರದ "ನನ್ನಲಿ ನಾನಿಲ್ಲ, ಮನದಲಿ ಏನಿಲ್ಲ.." ಎಂಬ ಗೀತೆಯ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಕವಿರಾಜ್ ಅನತಿಕಾಲದಲ್ಲೇ ಖ್ಯಾತಿಯ ಉತ್ತುಂಗಕ್ಕೆ ತಲುಪಿದರು. ಅವರ ಲೇಖನಿಯಿಂದ ಪದೇಪದೇ ಗುನುಗುವಂತಹ ಹಲವಾರು ಗೀತೆಗಳು ಹೊರಹೊಮ್ಮಿವೆ.
ಕಣಕಣದೇ ಶಾರದೆ (ಆಪ್ತಮಿತ್ರ), ಜಿನುಜಿನುಗೋ ಜೇನಾ ಹನಿ (ಕಂಠಿ), ಸೂರ್ಯ ತಂಪು ಸೂಸು, ಗಾಳಿ ಮೆಲ್ಲ ಬೀಸು (ಸಿದ್ದು), ಗಗನವೆ ಬಾಗಿ (ಸಂಜು ವೆಡ್ಸ್ ಗೀತ), ನೀ ಓಡಿ ಬಂದಾಗ (ಶಿವ), ಪತ್ರ ಬರೆಯಲಾ ಚಿತ್ರ ಬಿಡಿಸಲಾ...(ಅರಮನೆ), ಮೊದಮೊದಲು ಭುವಿಗಿಳಿದಾ ಮಳೆ ಹನಿಯು...(ಯಶವಂತ್) ಮುಂತಾದವು. (ಒನ್ಇಂಡಿಯಾ ಕನ್ನಡ)