Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯ ಏರುಪೇರು ನಿಜ, ಸೀರಿಯಸ್ ಆಗಿಲ್ಲ: ಎಸ್ಪಿಬಿ
ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ದಕ್ಷಿಣ ಆಫ್ರಿಕಾದಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂದು ಫ್ಲಾಷ್ ನ್ಯೂಸ್ ನಿನ್ನೆ ಬರುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಉಂಟಾಗಿತ್ತು.
ಜೊಹಾನ್ಸ್
ಬರ್ಗ್ನಲ್ಲಿ
ನಡೆದ
International
Indian
Film
Festival
of
South
Africa
ಚಲನಚಿತ್ರೋತ್ಸವ
ಸಮಾರಂಭದಲ್ಲಿ
ಜೀವಮಾನ
ಸಾಧನೆ
ಪ್ರಶಸ್ತಿ
ಪಡೆದ
ಸ್ವಲ್ಪ
ಹೊತ್ತಿನಲ್ಲೇ
ಅಸ್ವಸ್ಥರಾದರು.ಆರೋಗ್ಯ
ಹದಗೆಟ್ಟ
ಹಿನ್ನೆಲೆಯಲ್ಲಿ
ಅವರನ್ನು
ಭಾರತಕ್ಕೆ
ಕಳುಹಿಸುವ
ಸಿದ್ಧತೆ
ನಡೆಸಿದ್ದಾರೆ.
ಪ್ರಶಸ್ತಿ
ಗೌರವ
ಸ್ವೀಕರಿಸಿದ
ಎಸ್ಪಿಬಿ
ಸುಮಾರು
15
ಭಾಷೆಗಳ
ಒಂದೊಂದು
ಸಾಲು
ಹಾಡನ್ನು
ಹಾಡಿ
ರಂಜಿಸಿದರು.
ಎಂಬ
ಸುದ್ದಿ
ಎಸ್ಪಿ
ಬಾಲಸುಬ್ರಮಣ್ಯಂ
ಅವರ
ಕಿವಿಗೂ
ಬಿದ್ದಿದೆ.
ಈ
ಸುದ್ದಿಗೆ
ತಕ್ಷಣದ
ಪ್ರತಿಕ್ರಿಯೆ
ನೀಡಿರುವ
ಗಾನ
ಗಂಧರ್ವ
ಆರೋಗ್ಯದಲ್ಲಿ
ಸ್ವಲ್ಪ
ಏರುಪೇರು
ಆಗಿದ್ದು
ನಿಜ
ಆದರೆ,
ಸೀರಿಯಸ್
ಆಗಿಲ್ಲ,
ಮಾಧ್ಯಮಗಳಲ್ಲಿ
ಬಂದಿರುವ
ರೋಚಕ
ಸುದ್ದಿ
ನಂಬಬೇಡಿ
ಎಂದು
ಅಭಿಮಾನಿಗಳಿಗೆ
ಹೇಳಿದ್ದಾರೆ.
67 ವರ್ಷದ ಗಾಯಕ ಬಾಲಸುಬ್ರಮಣ್ಯಂ ಅವರು ಇತ್ತೀಚೆಗೆ ಯಶಸ್ವಿ ಹಿಂದಿ ಚಿತ್ರ ಚೆನ್ನೈ ಎಕ್ಸ್ ಪ್ರೆಸ್ ನ ಶೀರ್ಷಿಕೆ ಗೀತೆ ಹಾಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಿದ್ದರು. ಐಎಫ್ ಎಫ್ ಎಸ್ ಎ ಕಾರ್ಯಕ್ರಮದ ನಂತರ ಆಯೋಜನೆಗೊಂಡಿದ್ದ ಡಿನ್ನರ್ ಕ್ಯಾನ್ಸಲ್ ಆಗಿದ್ದು ಬಾಲು ಅವರ ಆರೋಗ್ಯದ ಬಗ್ಗೆ ಇನ್ನಷ್ಟು ಆತಂಕ ಹೆಚ್ಚಿಸಿತ್ತು. ಆದರೆ, ಯಾವುದೇ ಗಾಳಿಸುದ್ದಿಗೆ ಅಭಿಮಾನಿಗಳು ಕಿವಿಗೊಡುವುದು ಬೇಡ ಎಂದು ಬಾಲು ಹೇಳಿದ್ದಾರೆ.
ಬೆಂಗಳೂರಿಗೆ ಬರುತ್ತಿದ್ದಾರೆ: ದಕ್ಷಿಣ ಆಫ್ರಿಕಾದಿಂದ ಹೊರಟು ಹೈದರಾಬಾದಿಗೆ ಹೋಗಿ ನಂತರ ಜ.26ಕ್ಕೆ ಬೆಂಗಳೂರಿಗೆ ಎಸ್ ಪಿ ಬಾಲಸುಬ್ರಮಣ್ಯಂ ಬರುತ್ತಿದ್ದಾರೆ. ಜ.26ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ 'ಸಂತೋಷಕ್ಕೆ.. ಹಾಡು ಸಂತೋಷಕ್ಕೆ' ಸಂಗೀತ ಕಾರ್ಯಕ್ರಮದಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಪಾಲ್ಗೊಳ್ಳಲಿದ್ದಾರೆ.
ಗಾಂಧಾರ್ ಸಂಸ್ಥೆ ಪರವಾಗಿ ಗಾಯಕಿ ಅರ್ಚನಾ ಉಡುಪ ಅವರು ಕಾರ್ಯಕ್ರಮದ ವಿವರ ನೀಡಿದ್ದು, ಸಂಗೀತ ಮಾಂತ್ರಿಕ 'ಇಳಯರಾಜ ಗೀತಧಾರೆ' ಸರಣಿಯಲ್ಲಿ ಪದ್ಮಭೂಷಣ ಡಾ. ಎಸ್.ಪಿ ಬಾಲಸುಬ್ರಮಣ್ಯಂ ಅವರು ನಮ್ಮೊಂದಿಗೆ ಹಾಡಲಿದ್ದಾರೆ.
ಜತೆಗೆ
ಶ್ರೀನಿವಾಸ
ಉಡುಪ,
ಅನುರಾಧಾ
ಭಟ,
ಮೋಹನ್,
ಶ್ರೀನಿವಾಸಮೂರ್ತಿ,
ಉದಯ್
ಅಂಕೋಲ,
ಉಷಾ
ಉಮೇಶ್,
ದಿವ್ಯಾ
ಜೈಶಂಕರ್,
ರಜನಿ,
ಪ್ರಾರ್ಥನಾ,
ಬಿಎಸ್
ರವಿಶಂಕರ್,
ಅಂತರ್ಧ್ವನಿ
ದನಿಗೂಡಿಸಲಿದ್ದಾರೆ.
ಸಂಗೀತ
ನಿರ್ವಹಣೆ:
ಡಿ.
ಶ್ರೀನಿವಾಸ್,
ಆಚಾರ್,
ಜಿಎಸ್
ವೇಣುಗೋಪಾಲ್,
ಅಂದ
ಹಾಗೆ
ಈ
ಸಂಗೀತ
ರಸಧಾರೆ
ಕಾರ್ಯಕ್ರಮಕ್ಕೆ
ಪ್ರವೇಶ
ಉಚಿತವಾಗಿದ್ದು,
ಎಸ್
ಪಿ
ಬಾಲಸುಬ್ರಮಣ್ಯ
ಗಾನಸುಧೆಯಲ್ಲಿ
ಅಭಿಮಾನಿಗಳು
ಮಿಂದೇಳಬಹುದು.