Don't Miss!
- News ನೇಹಾ ಕೊಲೆ ಪ್ರಕರಣ: ಆರೋಪಿಯನ್ನ ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮರಿ ಟೈಗರ್ ಹಾಡು ಹಾಡಲಿರುವ 'ಜೋಗಿ' ಪ್ರೇಮ್
'ಮರಿ ಟೈಗರ್' ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಹಾಡಲಿರುವ ಹಾಡು ಇಂದು (13 ಸೆಪ್ಟೆಂಬರ್) ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ರೆಕಾರ್ಡ್ ಆಗಲಿದೆ. ಈ ಹಾಡನ್ನು ಯುವ ಗೀತಸಾಹಿತಿ ಕಮಲ್ ಸಾರಥಿ ರಚಿಸಿದ್ದಾರೆ. 'ಯಾವ ಕವಿಯು ತಂದೆ ತಾಯಿಯ ದೇವರೆಂದು ಕರೆದುಬಿಟ್ಟನೋ...' ಎಂದು ಪ್ರಾರಂಭವಾಗುವ ಹಾಡಿನ ಸಾಲು ಇದಾಗಿದ್ದು, ಪ್ರೇಮ್ ಅದನ್ನು ಹಾಡಲಿರುವುದು ವಿಶೇಷ.
ಈ ಮೊದಲು ನಿರ್ದೇಶಕ ಪ್ರೇಮ್ ತಮ್ಮ ನಿರ್ದೇಶನ ಹಾಗೂ ಶಿವರಾಜ್ ಕುಮಾರ್ ನಾಯಕತ್ವದ 'ಜೋಗಿ' ಚಿತ್ರದಲ್ಲಿ 'ಬೇಡುವೆನು ವರವನ್ನು ಕೊಡು ತಾಯೆ ಜನ್ಮವನು...' ಹಾಡನ್ನು ಹಾಡಿದ್ದರು. ಆ ಚಿತ್ರ ಸೂಪರ್ ಹಿಟ್ ಆದ ಕಾರಣಕ್ಕೋ ಅಥವಾ ಹಾಡನ್ನು ಪ್ರೇಮ್ ಹಾಡಿದ್ದಕ್ಕೋ, ಒಟ್ಟಿನಲ್ಲಿ ಹಾಡೂ ಕೂಡ ಜನರ ಬಾಯಲ್ಲಿ ನಲಿದಾಡಿ ಭಾರಿ ಪ್ರಶಂಸೆ ಗಳಿಸಿತ್ತು. ಆ ನಂತರ ಕೂಡ ಪ್ರೇಮ್ ತಮ್ಮ ನಟನೆಯ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರಕ್ಕಾಗಿ ಹಾಡಿದ್ದರು.
ಇದೀಗ ಆರ್ ಚಂದ್ರು ನಿರ್ದೇಶನದ 'ಚಾರ್ಮಿನಾರ್' ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಹಾಡಲಿರುವ ಹಾಡು ಹಾಗೂ ಸಾಹಿತ್ಯ ಸಾಕಷ್ಟು ಗಮನಸೆಳೆದಿದೆ. ಅವರು ಹಾಡುತ್ತಾರೆ ಎಂದರೆ ಸುದ್ದಿಯಾಗುವುದಂತೂ ಗ್ಯಾರಂಟಿ ಎಂಬುದು ಇಡೀ ಸ್ಯಾಂಡಲ್ ವುಡ್ ಗೇ ಗೊತ್ತಿದೆ. ಪ್ರೇಕ್ಷಕರಂತೂ ಪ್ರೇಮ್ ಕುಂತರೂ ನಿಂತರೂ ಗಮನಿಸುತ್ತಾರೆ ಎನ್ನಬಹುದು. ಅದಿರಲಿ, ಹಾಡು ಹಿಟ್ ಆಗಬಹುದೇ ಎಂಬುದಷ್ಟೇ ಸದ್ಯದ ಪ್ರಶ್ನೆ! (ಒನ್ ಇಂಡಿಯಾ ಕನ್ನಡ)