Don't Miss!
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಯನದಲ್ಲಿ ಮೂರನೇ ಇನ್ನಿಂಗ್ಸ್ ಆರಂಭಿಸಿದ ರೋರಿಂಗ್ ಸ್ಟಾರ್
ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಕುಂದಾಪುರ ಬಾಷೆಯಲ್ಲಿ 'ಬಿಲಿಂಡರ್' ಅಂತ ವಿಭಿನ್ನ ಸಿನಿಮಾ ಮಾಡುತ್ತಿದ್ದಾರೆ ಅಂತ ನಾವು ನಿಮಗೆ ಈ ಮೊದಲೇ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ.
ಮಾತ್ರವಲ್ಲದೇ ಆ ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಧ್ವನಿ ನೀಡಿದ್ದಾರೆ ಅಂತಾನೂ ನಾವು ನಿಮಗೆ ಹೇಳಿದ್ವಿ. ಇದೀಗ ಅದೇ ಚಿತ್ರದ ಮತ್ತೊಂದು ಸೂಪರ್ ಹಿಟ್ ಸಾಂಗ್ ಗೆ 'ಉಗ್ರಂ' ಹಾಗೂ 'ರಥಾವರ' ಖ್ಯಾತಿಯ ಕನ್ನಡ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ತಮ್ಮ ಧ್ವನಿ ನೀಡಿದ್ದಾರೆ.['ಟಕರ್ ಟಕರ್ ಟಂವ್ ಟಂವ್' ಅಂತಾವ್ರೆ ಪವರ್ ಸ್ಟಾರ್ ಪುನೀತ್]
ಪಕ್ಕಾ ಕುಂದಾಪುರ ಭಾಷೆ ಶೈಲಿಯಲ್ಲಿ ಮೂಡಿ ಬರುತ್ತಿರುವ 'ಬಿಲಿಂಡರ್' ಚಿತ್ರದ ನಾಯಕ 'ಬಿಲಿಂಡರ್' ಎಂಟ್ರಿ ಆಗುವಾಗ ಅವನಿಗೆ ಹಾಡಿನ ಮೂಲಕ ಬಿಲ್ಡಪ್ ಕೊಡಲಾಗುತ್ತದೆ. ನಾಯಕ 'ಬಿಲಿಂಡರ್' ಎಂಟ್ರಿ ಹಾಡನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಸಖತ್ತಾಗಿ ಕುಂದಾಪುರ ಭಾಷೆಯಲ್ಲಿ ಹಾಡಿದ್ದಾರೆ.
ಹಾಡುಗಾರಿಕೆಯಲ್ಲಿ ಮೂರನೇ ಇನ್ನಿಂಗ್ಸ್ ಆರಂಭಿಸಿರುವ ನಟ ಶ್ರೀಮುರಳಿ ಅವರು ಮೊಟ್ಟ ಮೊದಲು ಹಾಡಿದ್ದು ಅವರದೇ 'ರಥಾವರ' ಚಿತ್ರದ 'ಹುಡುಗಿ ಕಣ್ಣು' ಎಂಬ ಹಾಡಿಗೆ. ಇದೀಗ ಕುಂದಾಪುರ ಭಾಷೆಯಲ್ಲಿ ಹಾಡಿ, ನಟನೆಗೂ ಸೈ, ಹಾಡಲೂ ಸೈ ಅಂತ ಎನಿಸಿಕೊಂಡಿದ್ದಾರೆ.['ZOOಮ್' ಚಿತ್ರಕ್ಕೆ 'ಗಾನ ಕೋಗಿಲೆ' ಆದರು ನಟಿ ರಾಧಿಕಾ ಪಂಡಿತ್!]
ಶ್ರೀಮುರಳಿ ಅವರ 'ಉಗ್ರಂ' ಮತ್ತು 'ರಥಾವರ' ಚಿತ್ರಕ್ಕೆ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಇದೀಗ ರವಿ ಅವರ ವಿನೂತನ ಪ್ರಯತ್ನಕ್ಕೆ ಶ್ರೀಮುರಳಿ ಅವರು ಕೈ ಜೋಡಿಸಿದ್ದಾರೆ.
ಶ್ರೀಮುರಳಿ ಅವರು ಎನರ್ಜಿಟಿಕ್ ಆಗಿ ಡೈಲಾಗ್ ಸಮೇತ ಹಾಡಿರುವ ಬಿಲಿಂಡರ್ ಚಿತ್ರದ ಹಾಡಿನ ಮೇಕಿಂಗ್ ವಿಡಿಯೋ ಕೇವಲ ನಿಮಗಾಗಿ ನೋಡಿ ಆನಂದಿಸಿ..