twitter
    For Quick Alerts
    ALLOW NOTIFICATIONS  
    For Daily Alerts

    ಈ ಹಾಡು ಕೇಳ್ಲೇಬೇಕು! ಇದು ಹುಚ್ಚ ವೆಂಕಟ್ ಆರ್ಡರ್!

    By Harshitha
    |

    ಒಂದ್ಕಡೆ 'ಹುಚ್ಚ ವೆಂಕಟ್' ಸಿನಿಮಾ ರೀ ರಿಲೀಸ್ ಆಗಿದೆ. ಅದರ ಜೊತೆಗೆ ಹುಚ್ಚ ವೆಂಕಟ್ ಗಾನ ಸುಧೆ ಹರಿಸಿರುವ 'ಪರಪಂಚ' ಚಿತ್ರದ ಸಾಂಗ್ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆ ಆಗಿದೆ.

    ಕ್ರಿಶ್ ಜೋಶಿ ನಿರ್ದೇಶನದ ಯೋಗರಾಜ್ ಭಟ್ ನಿರ್ಮಾಣದಲ್ಲಿ ರೆಡಿಯಾಗಿರುವ 'ಪರಪಂಚ' ಸಿನಿಮಾಗಾಗಿ ಹುಚ್ಚ ವೆಂಕಟ್ ಗಾಯಕರಾಗಿರುವ ಸುದ್ದಿಯನ್ನ ನಾವೇ ನಿಮಗೆ ಮೊದಲು ಹೇಳಿದ್ದು. ಈಗ ಆ ಹಾಡನ್ನ ನೋಡುವ ಟೈಮ್ ಬಂದಿದೆ.

    ಖುದ್ದು ಭಟ್ರು ಸಾಹಿತ್ಯ ಬರೆದಿರುವ 'ಬಾಯ್ ಬಸಳೆ ಸೊಪ್ಪು..ಆಲೂಗೆಡ್ಡೆ ಈರುಳ್ಳಿ...'' ಹಾಡಿಗೆ ಹುಚ್ಚ ವೆಂಕಟ್ ಹಾಡಲಿದ್ದಾರೆ ಅಂತ ಈ ಹಿಂದೆ ಸುದ್ದಿ ಆಗಿತ್ತು. [ಭಟ್ರ ಸಾಹಿತ್ಯಕ್ಕೆ ಗಾನ ಸುಧೆ ಹರಿಸಿದ ಹುಚ್ಚ ವೆಂಕಟ್.!]

    ಆದ್ರೆ, ಹುಚ್ಚ ವೆಂಕಟ್ ಹಾಡಿರುವ ಹಾಡೇ ಬೇರೆ. ಅದಕ್ಕೂ ಯೋಗರಾಜ್ ಭಟ್ ಲಿರಿಕ್ಸ್ ಬರೆದಿದ್ದಾರೆ. ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಹಾಗಾದ್ರೆ, ಹುಚ್ಚ ವೆಂಕಟ್ ಹೇಗೆ ಹಾಡಿದ್ದಾರೆ ಅಂತ ನೀವೇ ನೋಡ್ಬಿಡಿ ಈ ವಿಡಿಯೋದಲ್ಲಿ.........

    ಹುಟ್ಟಿದ ಊರು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ....
    ಮಾಡೋದೆಲ್ಲಾ ಮಾಡಿ ಅಳಬೇಡ ಪರದೇಸಿ, ಎದ್ದೇಳು ಕೊನೆ ಬಸ್ಸು ಟೈಮ್ ಆಗಿದೆ....
    ಪೂರ್ವ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು....
    ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನು....
    ನಿಂಗಿದು ಬೇಕಿತ್ತಾ ಮಗನೇ....
    ವಾಪಸ್ಸು ಒಂಟೋಗು ಶಿವನೇ....
    ಬ್ಯಾಗು ಹಿಡಿ....ಸೀದಾ ನಡಿ....
    ಬೋರ್ಡು ನೋಡಿ....ಬಸ್ಸು ಹಿಡಿ....

    English summary
    YouTube Star Huccha Venkat has turned singer for Yogaraj Bhat productional Kannada Movie 'Parapancha'. Watch the making video here.
    Friday, December 18, 2015, 13:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X