Don't Miss!
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಲ ಕಳಕೊಂಡವರ ಕಥೆ ವ್ಯಥೆ ಪುಟ್ಟಕ್ಕನ ಹೈವೇ
ಅಭಿವೃದ್ಧಿ ಎಂಬುದು ಕಾಲಾಂತರದಲ್ಲಿ ಪಡೆದುಕೊಂಡಿರುವ ಅರ್ಥಗಳೇ ಬೇರೆ. ಈ ಅಭಿವೃದ್ಧಿ ಮಂತ್ರದಲ್ಲಿ ಲಾಭ 'ಪಡೆದು ಕೊಂಡವರಿಗೂ' ಎಲ್ಲಾ ಕಳೆದು ಕೊಂಡವರಿಗೂ ಇರುವ ಅಂತರ ದೊಡ್ಡದು. ಈ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆಗಾರರು ಆದ ನಾಗತಿಹಳ್ಳಿ ಚಂದ್ರಶೇಖರ್ ಅವರು ಬರೆದಿರುವ ಸಣ್ಣ ಕತೆಯೊಂದರ ಸ್ಪೂರ್ತಿಯನ್ನು ಇಟ್ಟುಕೊಂಡು ಬಿ.ಸುರೇಶ ಅವರು ಬರೆದಿರುವ ಚಿತ್ರ 'ಪುಟ್ಟಕ್ಕನ ಹೈವೇ'.
ಹೆದ್ದಾರಿಯ ಅಗತ್ಯ ಎಷ್ಟಿದೆಯೋ ಅದರಿಂದ ನೆಲ ಕಳಕೊಂಡವರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ. ಸರ್ಕಾರ ನೀಡುವ ಪರಿಹಾರಗಳು ಫಲಾನುಭವಿಗಳಿಗೆ ದೊರೆಯುವುದಕ್ಕಿಂತ ಮಧ್ಯವರ್ತಿಗಳಿಗೆ ತಲುಪುವುದೇ ಹೆಚ್ಚು. ಹೀಗೆ ಹೆದ್ದಾರಿಗಾಗಿ ನೆಲ ಕಳಕೊಳ್ಳುವ ಪುಟ್ಟಕ್ಕ, ತನ್ನ ನೆಲ ಮತ್ತು ಅದೇ ನೆಲದಲ್ಲಿ ಚಿರನಿದ್ರೆಯಲ್ಲಿರುವ ತನ್ನ ಗಂಡನ ಗೂಡನ್ನು ಉಳಿಸಿಕೊಳ್ಳಲು ಮಾಡುವ ಹೋರಾಟ ಈ ಚಿತ್ರದ ಕತೆ.
ಪುಟ್ಟಕ್ಕನಾಗಿ ಶ್ರುತಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರೈ, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್, ಅಚ್ಯುತಕುಮಾರ್, ವೀಣಾಸುಂದರ್ ಪ್ರಧಾನ ಪಾತ್ರಗಳಲ್ಲಿ ಇದ್ದಾರೆ. ಹಂಸಲೇಖ ಅವರು ಕರ್ನಾಟಕದ ಸೂಫಿ ಸಂಗೀತಗಾರರ ಮಟ್ಟುಗಳನ್ನು ಈ ಚಿತ್ರಕ್ಕಾಗಿ ಅಳವಡಿಸಿ ಸಂಗೀತ ಮಾಡಿದ್ದಾರೆ.
ಯೋಗರಾಜ ಭಟ್ ಮೂರು ಹಾಡುಗಳನ್ನು ಬರೆದಿದ್ದಾರೆ. ಎಚ್.ಎಂ.ರಾಮಚಂದ್ರ ಛಾಯಾಗ್ರಾಹಣ ಇರುವ ಈ ಚಿತ್ರಕ್ಕೆ ಜೋ.ನಿ.ಹರ್ಷ ಸಂಕಲನವಿದೆ. ಬಿ.ಸುರೇಶ ಅವರು ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಬರಲಿರುವ ಜನವರಿ, ಫೆಬ್ರವರಿಯಲ್ಲಿ ಈ ಚಿತ್ರ ಕನ್ನಡಿಗರೆದುರು ಬರಲಿದೆ.