Don't Miss!
- News Actress Harshika Poonacha: ಪ್ರಹ್ಲಾದ್ ಜೋಶಿ ಭೇಟಿಯಾಗಿ ಧನ್ಯವಾದ ತಿಳಿಸಿದ ನಟಿ ಹರ್ಷಿಕಾ ದಂಪತಿ: ಸಚಿವರ ಅಭಯ
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖಡಕ್ ಅಗ್ನಿ ಶ್ರೀಧರ್ ಮತ್ತೆ ಎದೆಗಾರಿಕೆಯೊಂದಿಗೆ ಹಾಜರ್
ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ'ಯನ್ನು ನಿರ್ದೇಶಿಸಲಿದ್ದಾರೆ ಡಿ. ಸುಮನಾ ಕಿತ್ತೂರ್. ಈ ಮೊದಲು ಅವರು ದುನಿಯಾ ವಿಜಯ್ ನಾಯಕತ್ವದಲ್ಲಿ 'ಸ್ಲಂ ಬಾಲಾ' ನಿರ್ದೇಶಿಸಿದ್ದರು. ಇದೀಗ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮಗ 'ಡೆಡ್ಲಿ' ಖ್ಯಾತಿಯ ಆದಿತ್ಯ ಈ ಎದೆಗಾರಿಕೆ ಚಿತ್ರಕ್ಕೆ ನಾಯಕ. ನಾಯಕನ ಸಖಿಯಾಗಿ 'ಚಂದ್ರಮುಖಿ ಪ್ರಾಣಸಖಿ' ಭಾವನಾ ಆಯ್ಕೆಯಾಗಿದ್ದಾರೆ.
'ಮೇಘ ಮೂವೀಸ್' ಲಾಂಛನದಲ್ಲಿ ತಯಾರಿಸಲಾಗುವ ಎದೆಗಾರಿಕೆಗೆ ಕಥೆ-ಸಂಭಾಷಣೆ ಅಗ್ನಿ ಶ್ರೀಧರ್ ಅವರದು. ಚಿತ್ರಕಥೆಗೆ ಇವರೊಂದಿಗೆ ಪೆನ್ನು ಹಿಡಿದಿದ್ದಾರೆ ಸುಮನಾ ಕಿತ್ತೂರ್. ಅಮಾನುಲ್ಲಾ ಬಚ್ಚನ್ ಹಾಗೂ ಎಂ ಎಸ್ ರವೀಂದ್ರ ಈ ಚಿತ್ರಕ್ಕೆ ನಿರ್ಮಾಪಕರು. ದೀಪಕ್ ಪಂಡಿತ್ ಸಂಗೀತ ಹಾಗೂ ಆಂಟನಿ ಎಲ್ ರೂಬೆನ್ ಸಂಕಲನವಿದೆ. ಬಿ. ರಾಕೇಶ್ ಕ್ಯಾಮೆರಾ ಕೈಚಳಕ ತೋರಿಸಲಿದ್ದಾರೆ.
ಸಹಜವಾಗಿಯೇ ಈ ಚಿತ್ರ ಸಾಕಷ್ಟು ಸಂಚಲನ ಮೂಡಿಸಿದೆ. ಕಾರಣ ಅಗ್ನಿ ಶ್ರೀಧರ್ ಈ ಮೊದಲು ಸ್ಯಾಂಡಲ್ ವುಡ್ ಗೆ ಕೊಟ್ಟ ಯಶಸ್ವೀ ಕಾಣಿಕೆ "ಆ ದಿನಗಳು" ಚಿತ್ರ. ಚೈತನ್ಯ ನಿರ್ದೇಶನದ ಆ ದಿನಗಳು, ಅಗ್ನಿ ಶ್ರೀಧರ್ ಅವರ ಹರಿತವಾದ ಸಂಭಾಷಣೆ ಹಾಗೂ ಬಿಗಿಯಾದ ಚಿತ್ರಕಥೆಯಿಂದ ಜನರಿಗೆ ಮರೆಯಲಾಗದ ಮೋಡಿ ಮಾಡಿತ್ತು. ಈಗ ಎದೆಗಾರಿಕೆ ಇನ್ನೂ ಹೆಚ್ಚಿನ ನಿರೀಕ್ಷೆ ಮೂಡಿಸಿದೆ, ನಿರಾಶೆ ಆಗಲಾರದು ಖಂಡಿತ...