twitter
    For Quick Alerts
    ALLOW NOTIFICATIONS  
    For Daily Alerts

    ತಪ್ಪಿದ ಮಾತಿಗೆ ಕ್ಷಮೆ ಕೇಳಿದ ಓಂ ಪ್ರಕಾಶ್ ರಾವ್

    |

    ಆ ಪದವನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿಲ್ಲ. ಆ ಸಮಯಕ್ಕೆ ಬಾಯಲ್ಲಿ ಬಂದಿದ್ದನ್ನು ಹೇಳಿದ್ದು ನಿಜ. ನನ್ನ ಆ ಪದದ ಬಳಕೆಯಿಂದ ಆ ಜನಾಂಗಕ್ಕೆ ನೋವಾಗಿದೆ ಎಂಬುದು ಗೊತ್ತಾಗಿದೆ. ನನ್ನಿಂದ ದೊಡ್ಡ ತಪ್ಪಾಗಿದೆ ಕ್ಷಮಿಸಿ" ಹೀಗೆಂದು ಕೊರಮ ಜನಾಂಗದವರ ಕ್ಷಮೆ ಕೇಳಿದ್ದಾರೆ ನಿರ್ದೇಶಕ ಓಂ ಪ್ರಕಾಶ್ ರಾವ್. ಆದ ತಪ್ಪಿಗೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ.

    ಆಗಿದ್ದಿಷ್ಟು. ಇತ್ತೀಚಿಗೆ ಅಣಜಿ ನಾಗರಾಜ್ ನಿರ್ಮಾಣದ ಬೀಮಾ ತೀರದಲ್ಲಿ ಚಿತ್ರದ ಆಡಿಯೋ ಬಿಡುಗಡೆ ವೇಳೆ ಆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಕೊಡುತ್ತಾ ನಿರ್ದೇಶಕ ಓಂ ಪ್ರಕಾಶ್ ರಾವ್ ಹಿರಿಯ ನಟ ಲೋಕನಾಥ್ ಬಗ್ಗೆ ಹೇಳುತ್ತಾ "ಏಲ್ಲರೂ ಲೋಕನಾಥ್ ಅಂಕಲ್ ರನ್ನು ತಾತ, ಅಪ್ಪ, ಅಂಕಲ್, ಮಾವ ಈ ತರಹದ ಪಾತ್ರಗಳಲ್ಲೇ ಗುರುತಿಸುತ್ತಿದ್ದಾರೆ. ಆದರೆ ನಾನು ಅವರಿಗೆ ಕಳ್ಳ, ಕೊರಮನ ಪಾತ್ರ ಕೊಟ್ಟು ನೋಡೋಣವೆಂದು ಈ ಚಿತ್ರದಲ್ಲಿ ಕೊಟ್ಟಿದ್ದೇನೆ" ಎಂದಿದ್ದಾರೆ.

    ಆದರೆ ಆಗ ಅವರಿಗೆ ಕೊರಮ ಎಂಬ ಹೆಸರಿನ ಜನಾಂಗವೊಂದಿದೆ ಎಂಬ ಸಂಗತಿ ತಿಳಿದಿರಲಿಲ್ಲವಂತೆ. ಕೊರಮ ಜನಾಂಗಕ್ಕೆ ಆದ ಅವಮಾನವನ್ನು ಕುರಿತು ಕೆಲವು ಸ್ನೇಹಿತರು ಬಂದು ಓಂ ಅವರಿಗೆ ಹೇಳಿದ ಮೇಲೆ ಅವರಿಗೆ ಜ್ಞಾನೋದಯವಾಗಿದೆಯಂತೆ. ಅದಕ್ಕಾಗಿ ಅವರು ಕೊರಮ ಜನಾಂಗದವರಲ್ಲಿ ಕ್ಷಮೆ ಕೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)

    English summary
    Director Om Prakash Rao asked Apology to Koram Comunity for his words against their Respect. He spoke that words at the stage of Bheema Thiradalli Movie Audio Release.
    Tuesday, March 20, 2012, 12:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X