twitter
    For Quick Alerts
    ALLOW NOTIFICATIONS  
    For Daily Alerts

    ಕೃತಿಚೌರ್ಯ ಆರೋಪಕ್ಕೆ ಮುನಿರತ್ನ ಖಡಕ್ ಪ್ರತಿಕ್ರಿಯೆ

    By Rajendra
    |

    ಯುವ ನಟ ಹಾಗೂ ಲೇಖಕ ನಿರಂಜನ್ ಶೆಟ್ಟಿ ಎಂಬುವವರು ಕಠಾರಿವೀರ ಸುರಸುಂದರಾಂಗಿ ಚಿತ್ರದ ಮೇಲೆ ಕೃತಿಚೌರ್ಯ ಆರೋಪ ಮಾಡಿದ್ದಾರೆ. ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕ ಮುನಿರತ್ನ ತಾವು ಬಹಿರಂಗ ಚರ್ಚೆಗೆ ಈಗಲೇ ಸಿದ್ಧನಿದ್ದೇನೆ ಎಂದಿದ್ದಾರೆ.

    ಕಠಾರಿವೀರ ಚಿತ್ರ ಶೇಕಡ ನೂರಕ್ಕೆ ನೂರರಷ್ಟು ನನ್ನದು. ಇನ್ನೊಬ್ಬರ ಕತೆ ಕದ್ದು ಸಿನಿಮಾ ಮಾಡುವ ದುರ್ಗತಿ ನನಗೆ ಬಂದಿಲ್ಲ. ನ್ಯಾಯಾಲಯದ ಬಗ್ಗೆ ತಮಗೆ ಅಪಾರ ಗೌರವವಿದೆ. ನ್ಯಾಯಾಲಯ ಏನು ತೀರ್ಪು ನೀಡುತ್ತದೋ ಅದಕ್ಕೆ ಬದ್ಧನಾಗಿರುತ್ತೇನೆ. ನಿರಂಜನ್ ಶೆಟ್ಟಿ ಎಂಬುವವರ ಹೆಸರನ್ನು ನಾನು ಇದೇ ಮೊದಲು ಕೇಳುತ್ತಿರುವುದು. ಅವರ ಮುಖ ಕೂಡ ನೋಡಿಲ್ಲ ಎಂದಿದ್ದಾರೆ.

    ಅವರು ನ್ಯಾಯಾಲಯದ ಮೆಟ್ಟಿಲೇರಿರುವುದು ತುಂಬ ಸಂತೋಷ. ಈ ಕತೆ ಅವರದೇ ಎಂದು ಸಾಬೀತಾದರೆ ಸ್ಥಳದಲ್ಲೇ ಒಂದೇ ಒಂದು ಸೆಕೆಂಡು ತಡ ಮಾಡದೆ ಕಠಾರಿವೆರ ಚಿತ್ರವನ್ನು ಅವರಿಗೆ ಒಪ್ಪಿಸುತ್ತೇನೆ ಎಂಬ ಸವಾಲನ್ನೂ ಮುನಿರತ್ನ ಹಾಕಿದ್ದಾರೆ. ಅವರು ಇಷ್ಟು ದಿನ ಸುಮ್ಮನಿದ್ದು ಈಗ್ಯಾಕೆ ಆರೋಪ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

    ಉಪೇಂದ್ರ ಅವರಿಗೆ ನಿರಂಜನ್ 2006ರಲ್ಲಿ ಕತೆ ಹೇಳಿದ್ದಾರಂತೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಉಪೇಂದ್ರ ಅವರಿಗೆ ದಿನಕ್ಕೆ ನೂರು ಜನ ಕತೆ ಹೇಳ್ತಾರೆ. ಅದೇ ರೀತಿ ಇವರೂ ಕತೆ ಹೇಳಿರಬಹುದು. 2006ರಿಂದ ಬಂದಂತಹ ಯಮಲೋಕದ ಕತೆಗಳೆಲ್ಲಾ ಬಹುಶಃ ಇವರೇ ಬರೆದಿರಬಹುದು ಎಂದು ಲೇವಡಿ ಮಾಡಿರುವ ಮುನಿರತ್ನ, ಇಷ್ಟಕ್ಕೂ ಇವರು ತಮ್ಮ ಕತೆಯನ್ನು ಚೆನ್ನೈನಲ್ಲಿ ಯಾಕೆ ರಿಜಿಸ್ಟರ್ ಮಾಡಿಸಿಕೊಂಡರು ಎಂದು ಪ್ರಶ್ನಿಸಿದ್ದಾರೆ. ವಿವಾದ ಈಗಷ್ಟೇ ಶುರುವಾಗಿದೆ...(ಒನ್‍ಇಂಡಿಯಾ ಕನ್ನಡ)

    English summary
    Kannada producer Munirathna denies Plagiarism charge against his film Katari Veera Surasundarangi. A young hero and writer Niranjan Shetty has filed a case of plagiarism against the Munirathnam claiming that the story of ‘karati Veera’ was apparently stolen from him.
    Saturday, May 5, 2012, 16:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X