Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎನ್ ಟಿ ರಾಮಾರಾವ್ ಗೆ ಗುಡಿ ಕಟ್ಟಿಸಿದ ಅಭಿಮಾನಿ
ನಟರತ್ನ ನಂದಮೂರಿ ತಾರಕ ರಾಮರಾವ್ ಅವರ ಅಭಿಮಾನಿಯೊಬ್ಬ ಅವರ ಹೆಸರಿನಲ್ಲಿ ಗುಡಿಯೊಂದನ್ನು ಕಟ್ಟಿಸಿದ್ದಾನೆ. ಎನ್ಟಿಆರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಅಭಿಮಾನಿಗೆ ಸಹಾಯ ಮಾಡಿದ್ದರಂತೆ. ಈಗ ಗುಡಿ ಕಟ್ಟಿಸಿ ಕೃತಾರ್ಥರಾಗಿದ್ದಾರೆ.
"ತೊಂದರೆಯಲ್ಲಿರುವವರಿಗೆ ಸಹಾಯ ಮಾಡಿದವರನ್ನು ಕೊನೆ ಉಸಿರಿರುವವರೆಗೂ ಮರೆಯ ಬಾರದು" ಎಂಬ ತನ್ನ ತಾಯಿಯ ಮಾತಿಗೆ ಆತ ಬೆಲೆಕೊಟ್ಟು ಎನ್ಟಿಆರ್ ಗುಡಿ ಕಟ್ಟಿಸಿದ್ದಾಗಿ ಆಂಧ್ರದಲ್ಲಿ ಸುದ್ದಿಯಾಗಿದೆ. ಈ ಹಿಂದೆ ತಮಿಳುನಾಡಿನಲ್ಲಿ ತಾರೆಗಳಾದ ನಮಿತಾ, ಖುಷ್ಬು ಅವರಿಗೆ ಮಂದಿರ ಕಟ್ಟಿಸಲಾಗಿತ್ತು. ಬಳಿಕ ರಜನಿಕಾಂತ್ ಹೆಸರಲ್ಲೂ ಗುಡಿ ಕಟ್ಟಿಸಿದರು.
ಚಿತ್ತೂರು ಜಿಲ್ಲೆಯ ಕಂಚೆನಪಲ್ಲಿಯ ಪೆನುಮಚ್ಚ ಶ್ರೀನಿವಾಸುಲು ಅವರೇ ಈ ಸಾಹಸ ಮಾಡಿರುವುದು. ಈಗಾಗಲೆ ಗುಡಿಯೂ ಸಿದ್ಧವಾಗಿದ್ದು ಎನ್ಟಿಆರ್ ಅವರ ಹೆಸರಲ್ಲಿ ನಿತ್ಯ ಅರ್ಚನೆ, ಕ್ಷೀರಾಭಿಷೇಕ, ಅಷ್ಟೋತ್ತರ ನಡೆಯುತ್ತಿದೆಯಂತೆ.
ಶ್ರೀನಿವಾಸುಲು ಅವರು ಆರ್ಥಿಕವಾಗಿ ಬಡವರಾದರೂ ಅಭಿಮಾನಿದಲ್ಲಿ ಆಗರ್ಭ ಶ್ರೀಮಂತ. 1985ರಲ್ಲಿ ಬೀಸಿದ ಚಂಡಮಾರುತಕ್ಕೆ ಇವರ ಮನೆಮಠ ಎಲ್ಲವೂ ನೆಲಸಮವಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎನ್ಟಿಆರ್ ಅವರು ಭೇಟಿ ನೀಡಿ ನಿರಾಶ್ರಿತರಿಗೆ ಬಟ್ಟೆ, ಅಕ್ಕಿ, ಅಡುಗೆ ಪಾತ್ರೆಗಳು, ಪಡಿತರ ಪದಾರ್ಥಗಳನ್ನು ಸರಬರಾಜು ಮಾಡಿದ್ದರಂತೆ.
"ಕಷ್ಟದಲ್ಲಿದ್ದ ತಮ್ಮನ್ನು ಆಪದ್ಭಾಂಧವರಂತೆ ಎನ್ಟಿಆರ್ ರಕ್ಷಿಸಿದ್ದರು. ಅಂದಿನಿಂದ ಇಂದಿನವರೆಗೂ ಅವರನ್ನು ಆರಾಧಿಸುತ್ತಿದ್ದೇನೆ. ನಮ್ಮ ಪಾಲಿಗೆ ಅವರೇ ದೇವರು. ಪ್ರತಿದಿನ ಕೂಲಿ ಮಾಡಿದ ದುಡ್ಡಿನಲ್ಲಿ ಸ್ವಲ್ಪ ಭಾಗವನ್ನು ಉಳಿಸಿ ಈ ಗುಡಿ ಕಟ್ಟಿಸಿದ್ದೇನೆ" ಎನ್ನುತ್ತಾರೆ ಶ್ರೀನಿವಾಸುಲು.
ಇವರ ಸಾಹಸವನ್ನು ನೋಡಿದ ಯಾರೋ ಒಬ್ಬರು ತಮ್ಮ ಕೈಲಾದ ಧನಸಹಾಯ ಮಾಡಿ ಎನ್ಟಿಆರ್ ವಿಗ್ರಹವನ್ನು ಪ್ರತಿಷ್ಠಾಪಿಸಿದರಂತೆ. ಪ್ರತಿದಿನ ಇಲ್ಲಿ ಪೂಜೆಗಳು ನಡೆಯುತ್ತಿದ್ದು, ದಿನ ಕಳೆದಂತೆ ಈ ದೇವಸ್ಥಾನಕ್ಕೆ ಬರುವ ಭಕ್ತ ಮಹಾಶಯರು ಸಂಖ್ಯೆಯೂ ಹೆಚ್ಚುತಿದೆಯಂತೆ.