Don't Miss!
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- News ಹಳೇ ಹುಲಿ ಪಿಸಿ ಮೋಹನ್ ಎದುರು ಮನ್ಸೂರ್ ಅಲಿ ಖಾನ್ ಕಣಕ್ಕೆ; ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಬಿಜೆಪಿ ಕಲಿ?
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಭಿಮನ್ಯು' ಡಬ್ಬಿಂಗ್ ಅಂದವರಿಗೆ ಅರ್ಜುನ್ ಸರ್ಜಾ ತಿರುಗೇಟು
ಬಹುಭಾಷಾ ನಟ ಕನ್ನಡಿಗ ಅರ್ಜುನ್ ಸರ್ಜಾ ಅವರು ತಮ್ಮದೇ ನಿರ್ದೇಶನ ಮತ್ತು ನಿರ್ಮಾಣದಲ್ಲಿ 2014 ರಲ್ಲಿ 'ಅಭಿಮನ್ಯು' ಎಂಬ ದೇಶಪ್ರೇಮವನ್ನು ಸಾರುವ ಸಿನಿಮಾ ಮಾಡಿದ್ದರು. ಅಂದಹಾಗೆ ಈ ಸಿನಿಮಾ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆ ಕಂಡಿತ್ತು.
ಕನ್ನಡದಲ್ಲಿ 'ಅಭಿಮನ್ಯು', ತಮಿಳು ಮತ್ತು ತೆಲುಗಿನಲ್ಲಿ 'ಜೈ ಹಿಂದ್' ಎಂಬ ಹೆಸರಿನಲ್ಲಿ ತೆರೆ ಕಂಡಿತ್ತು. ತದನಂತರ ಹಿಂದಿ ಭಾಷೆಗೆ 'ಅರ್ಜುನ್ ಕ ಬದ್ಲಾ' ಎಂದು ಡಬ್ ಆಗಿತ್ತು.[ಅಕ್ಟೋಬರ್ ನಲ್ಲಿ ಅರ್ಜುನ್ ಸರ್ಜಾ 'ಅಭಿಮನ್ಯು' ]
ಈ ಚಿತ್ರಕ್ಕೆ 2014 ರಲ್ಲಿ ಎರಡನೇ ಅತ್ಯುತ್ತಮ ಪ್ರಶಸ್ತಿ ಸಂದ ಸಂದರ್ಭದಲ್ಲಿ ಹಲವಾರು ಮಂದಿ ಅದೊಂದು ಡಬ್ಬಿಂಗ್ ಸಿನಿಮಾ ಆಗಿದೆ. ಆದ್ರಿಂದ ಅದಕ್ಕೆ ಪ್ರಶಸ್ತಿ ಕೊಟ್ಟಿರುವುದು ಸರಿಯಲ್ಲ ಎಂದು ಆರೋಪ ಮಾಡಿದ್ದರು.
ಇದೀಗ
ನಟ
ಅರ್ಜುನ್
ಸರ್ಜಾ
ಅವರು
ಈ
ಸಿನಿಮಾ
ಡಬ್ಬಿಂಗ್
ಅಲ್ಲ
ಎನ್ನುವ
ಎಲ್ಲಾ
ಆರೋಪಗಳಿಗೆ
ಸ್ಪಷ್ಟನೆ
ನೀಡುವ
ಮೂಲಕ
ತಿರುಗೇಟು
ನೀಡಿದ್ದಾರೆ.
'ನಾನು
ಅಭಿಮನ್ಯು
ಚಿತ್ರವನ್ನು
ಕನ್ನಡ,
ತಮಿಳು
ಮತ್ತು
ತೆಲುಗಿನಲ್ಲಿ
ಏಕಕಾಲಕ್ಕೆ
ಮಾಡಿದ್ದೆ.
ಮೂರು
ಭಾಷೆಗಾಗಿ
ಬೇರೆ
ಬೇರೆಯೇ
ಶೂಟಿಂಗ್
ಮಾಡಿದ್ದೆ.[ಅಪ್ಪನ
ಲವ್
ಸ್ಟೋರಿಗೆ,
ಮಗಳು
ನಾಯಕಿ..!]
'ಆದರೆ ಕೆಲವರು ಇದು ಡಬ್ಬಿಂಗ್ ಸಿನಿಮಾ ಎಂದೆಲ್ಲಾ ಹೇಳಿದರು. ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ ನಾನು ತಮಿಳು ಮತ್ತು ತೆಲುಗು ಚಿತ್ರಗಳನ್ನು ಹೆಚ್ಚಾಗಿ ಮಾಡುತ್ತಿರುತ್ತೇನೆ ಮತ್ತು ಜನ ಆ ಸಿನಿಮಾಗಳ ಪೋಸ್ಟರ್ ಗಳನ್ನು ನೋಡುತ್ತಾರೆ. ಹಾಗಾಗಿ ಇದು ಡಬ್ಬಿಂಗ್ ಸಿನಿಮಾ ಅಂತ ಅಂದುಕೊಂಡಿದ್ದರೆ ಆಶ್ಚರ್ಯವಿಲ್ಲ' ಎಂಬ ಉತ್ತರ ನೀಡಿದ್ದಾರೆ.[ಅರ್ಜುನ್ ಸರ್ಜಾ ಅವರ ಹೆಂಡತಿಯಾದ ಲೂಸಿಯಾ ಬೆಡಗಿ]
'ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಬೇಕಾದರೆ ಒಂದು ಒಳ್ಳೆಯ ಕಥೆಗಾಗಿ ಹುಡುಕುತ್ತಿದ್ದೆ. ಕಮರ್ಷಿಯಲ್ ಸಿನಿಮಾವಾದರೂ ಅದರಲ್ಲೊಂದು ಸಂದೇಶ ಇರಬೇಕೆಂದು ಆಸೆ ಆಗಿತ್ತು, ಅದರಂತೆ 'ಅಭಿಮನ್ಯು' ಚಿತ್ರದಲ್ಲಿ ಶಿಕ್ಷಣದ ಕುರಿತಾಗಿ ಹೇಳಿದ್ದೇನೆ. ಜನ ಕೂಡ ಇಷ್ಟಪಟ್ಟಿದ್ದಾರೆ. ಆ ಬಗ್ಗೆ ನನಗೆ ಸಂತೋಷ ಇದೆ. ಇದೀಗ ನನ್ನ ಆಸೆ ಎಲ್ಲಾ 'ಅಭಿಮನ್ಯು' ಚಿತ್ರದಿಂದ ಈಡೇರಿದೆ' ಎಂದು ನಟ ಅರ್ಜುನ್ ಸರ್ಜಾ ನುಡಿಯುತ್ತಾರೆ.[ಅರ್ಜುನ್ ಸರ್ಜಾ, ಮನಿಷಾ 'ಗೇಮ್' ಟ್ರೈಲರ್ ನೋಡಿದ್ರಾ?]
'ಒಳ್ಳೆಯ ಸಿನಿಮಾ ಮಾಡಬೇಕು ಅನ್ನೋದಷ್ಟೆ ನನ್ನ ಉದ್ದೇಶವಾಗಿತ್ತೇ, ಹೊರತು ಪ್ರಶಸ್ತಿಗಾಗಿ ಅಲ್ಲ, ಪ್ರಶಸ್ತಿಯನ್ನು ನಿರೀಕ್ಷಿಸಿಯೂ ಇರಲಿಲ್ಲ. ಆದರೆ ಪ್ರಶಸ್ತಿ ಬಂದಿದ್ದಕ್ಕೆ ಖುಷಿ ಇದೆ ಎಂದು ಅರ್ಜುನ್ ಸರ್ಜಾ ಸಂತಸ ವ್ಯಕ್ತಪಡಿಸಿದ್ದಾರೆ.