Don't Miss!
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- News Heavy Rain: ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಬ್ಭಾಗ: ಭೂಕುಸಿತದಿಂದ ರಸ್ತೆ ಸಂಪರ್ಕ ಬಂದ್-ಎಲ್ಲಿ?
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸತ್ಯ ಬಿಚ್ಚಿಡಲು ಮುಂದಾದ ದುನಿಯಾ ವಿಜಯ್
ನನ್ನ ಜೀವನದಲ್ಲಿ ನನ್ನ ತಂದೆತಾಯಿಯೇ ಸರ್ವಸ್ವ. ಮಾಧ್ಯಮಗಳು ನನಗೆ ಮಾರ್ಗದರ್ಶಕರಿದ್ದಂತೆ. ನನ್ನ ತಂದೆತಾಯಿ ಸಮ್ಮುಖದಲ್ಲಿ ಏನಾಯಿತು ಎಂಬ ವಿವರಗಳನ್ನು ಬಹಿರಂಗಪಡಿಸುವುದಾಗಿ ವಿಜಯ್ ತಿಳಿಸಿದ್ದಾರೆ. ವಿಜಯ್ ಎಂಟರ್ ಪ್ರೈಸಸ್ ಹಾಗೂ ದುನಿಯಾ ಟಾಕೀಸ್ ಎಂದಿರುವ ಲೆಟರ್ ಹೆಡ್ ನಲ್ಲಿ ಅವರು ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.
ಭಕ್ತಿ ( Devotion), ಶಿಸ್ತು (Discipline), ಸಂಕಲ್ಪ (Decision), ಛಲ (Determination) ಹಾಗೂ ಸಮರ್ಪಣ (Dedication) ಭಾವದ ವ್ಯಕ್ತಿತ್ವ ತನ್ನದು ಎಂದಿರುವ ವಿಜಿ, ತನ್ನ ಜೀವನದಲ್ಲಿ ಮೇಲಿನ 5Dಗಳು ಪ್ರಮುಖ ಪಾತ್ರವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಪತ್ನಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದ ವಿಜಿ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು ಗೊತ್ತೇ ಇದೆ.
ನನಗಾಗಿರುವ ನೋವು ಇನ್ಯಾರಿಗೂ ಆಗಬಾರದು. ನನ್ನ ತಾಯಿ ನನಗೆ ಮುಖ್ಯ. ಎರಡು ವರ್ಷಗಳ ಹಿಂದೆ ನನ್ನ ತಾಯಿ ಇನ್ನೇನು ಸಾಯುವ ಹಂತಕ್ಕೆ ಹೋಗಿದ್ದರು. ಆಗ ಈ ಸೊಸೆ ಅನ್ನಿಸಿಕೊಂಡವರು ಎಲ್ಲಿ ಹೋಗಿದ್ದರು ಎಂದು ಕೇಳಿದ್ದ ವಿಜಿ ಮಾಧ್ಯಮಗಳ ಮುಂದೆ ಇನ್ನೇನು ಹೇಳುತ್ತಾರೋ ಏನೋ? (ಏಜೆನ್ಸೀಸ್)