Don't Miss!
- Sports Virat Kohli vs Gautam Gambhir: ವಿರಾಟ್, ಗೌತಮ್ ನಡುವೆ ಬಿರುಕು ಹುಟ್ಟಲು ಕಾರವೇನು? ಇಲ್ಲಿದೆ ಮಾಹಿತಿ
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿರುವ ಕೋಮಲ್
ಹಾಸ್ಯ ನಟ ಕೋಮಲ್ ಕುಮಾರ್ ಗರಂ ಆಗಿದ್ದಾರೆ. ಸ್ಯಾಂಡಲ್ ವುಡ್ ಚಿತ್ರರಂಗದ ಬಗ್ಗೆ ಅವರು ಕಿಡಿಕಿಡಿಯಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಅವರು ಹಿಂದೆಮುಂದೆ ನೋಡುತ್ತಿಲ್ಲ. ಪಕ್ಕದ ತಮಿಳುನಾಡು ಚಿತ್ರರಂಗದಲ್ಲಿ ಸೆಟ್ಲ್ ಆಗುವ ಮಾತುಗಳನ್ನೂ ಆಡಿದ್ದಾರೆ.
ತಮ್ಮ ಇತ್ತೀಚಿನ ಚಿತ್ರಗಳು ಸಾಲುಸಾಲಾಗಿ ಮಕಾಡೆ ಮಲಗುತ್ತಿವೆ. ಸೋಲು ಎಂಬುದು ಯಾವ ನಾಯಕ ನಟನಿಗಿಲ್ಲ ಹೇಳಿ. ಅದೇ ರೀತಿ ನನ್ನ ಚಿತ್ರಗಳು ಉದ್ದಂಡ ಮಲಗಿದವು. ನಾನು ಸದಾ ನಿರ್ಮಾಪಕರ ಬೆನ್ನಿಗೆ ನಿಂತವನು. ಕಡೆಗೆ ನಿರ್ಮಾಪಕರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಕೋಮಲ್ ಕಣ್ಣೀರಿಟ್ಟಿದ್ದಾರೆ. [ಕನ್ನಡಕ್ಕೆ ಕೋಮಲ್ ಜೊತೆ ತೆಲುಗು ಹಾಸ್ಯನಟ ಆಲಿ]
ಕೊನೆಯ ಪ್ರಯತ್ನವಾಗಿ 'ನಮೋ ಭೂತಾತ್ಮ' ಚಿತ್ರ ಮಾಡುತ್ತಿದ್ದೇನೆ. ಇದೂ ಸೋತರೆ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ತಮಿಳು ಚಿತ್ರರಂಗದಲ್ಲಿ ಸೆಟ್ಲ್ ಆಗುತ್ತೇನೆ ಎಂದು ತುಂಬು ನೋವಿನಲ್ಲಿ ಕೋಮಲ್ ಹೇಳಿದ್ದಾರೆ.
ಕೋಮಲ್ ತಮಿಳಿಗೆ ಹೋದರೆ ನಿಜಕ್ಕೂ ಸೂಪರ್ ಡೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಅವರು ಮತ್ತೊಬ್ಬ ವಡಿವೇಲು ಆಗಿ ತಮಿಳು ಚಿತ್ರರಂಗ ಬೆಳಗುತ್ತಾರೆ. ಎಲ್ಲಾದರು ಇರು ಎಂತಾದರು ಇರು ಎಂದಿದೆಂದಿಗು ನೀ ಕನ್ನಡವಾಗಿರು ಎಂದು ಅಭಿಮಾನಿಗಳೂ ನೋವಿನಿಂದ ಹೇಳುತ್ತಿದ್ದಾರೆ. (ಫಿಲ್ಮಿಬೀಟ್ ಕನ್ನಡ)