Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಪ್ರಕಾಶ್ ರೈಗೆ ಮೂರು ದಿನಗಳ ಕಾಲ ಬೆಡ್ ರೆಸ್ಟ್
ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಅಭಿಮಾನಿಗಳನ್ನು ನಿರಂತರ ಕನೆಕ್ಟ್ ಆಗುತ್ತಿರುವ ತಾರೆಗಳಲ್ಲಿ ನಟ, ನಿರ್ದೇಶಕ ಪ್ರಕಾಶ್ ರೈ ಸಹ ಒಬ್ಬರು. ಟ್ವಿಟ್ಟರ್ ಮೂಲಕ ತಮ್ಮ ಚಿತ್ರಗಳು ಹಾಗೂ ತಮ್ಮ ಬಗ್ಗೆ ತಾಜಾ ಸಮಾಚಾರ ನೀಡುತ್ತಲೇ ಇರುತ್ತಾರೆ.
ಇದೀಗ
ಅವರು
ಟ್ವೀಟ್
ಮಾಡಿದ್ದು,
ಹದಗೆಟ್ಟ
ತಮ್ಮ
ಆರೋಗ್ಯದ
ಬಗ್ಗೆ
ಸ್ಫುಟವಾಗಿ
ಹೇಳಿಕೊಂಡಿದ್ದಾರೆ.
ಈ
ಬಗ್ಗೆ
ಟ್ವೀಟಿಸಿರುವ
ಅವರು,
"ಕೋಲ್ಡ್...
ಫೀವರ್...
ಡಾಕ್ಟರ್ಸ್...
ಮೂರು
ದಿನಗಳ
ಕಾಲ
ಬೆಡ್
ರೆಸ್ಟ್
ತೆಗೆದುಕೊಳ್ಳುವಂತೆ
ಸೂಚಿಸಿದ್ದಾರೆ..."
ಎಂದಿದ್ದಾರೆ.
[ಪ್ರಕಾಶ್
ರೈ
ಪುತ್ರಿ
ಈಗ
ಕುಹೂ
ಕುಹೂ
ಕೋಗಿಲೆ]
ಸದ್ಯಕ್ಕೆ ಅವರು ಹೈದರಾಬಾದಿನ ತನ್ನ ಫಾಮ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಿಡುವಿಲ್ಲದ ಚಿತ್ರೀಕರಣದಲ್ಲಿ ಪ್ರಕಾಶ್ ರೈ ತೊಡಗಿಕೊಂಡಿದ್ದೇ ಅವರ ಶೀತ ಜ್ವರಕ್ಕೆ ಕಾರಣವಾಗಿದೆ. ಸದ್ಯಕ್ಕೆ ಜೂನಿಯರ್ ಎನ್ಟಿಆರ್ ನಾಯಕನಟನಾಗಿರುವ 'ಟೆಂಪರ್' ಎಂಬ ಚಿತ್ರದಲ್ಲಿ ಪ್ರಕಾಶ್ ರೈ ಬಿಜಿಯಾಗಿದ್ದಾರೆ.
ಕಿಚ್ಚ ಸುದೀಪ್ ಅವರ 'ರನ್ನ' ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಐರಾವತ' ಚಿತ್ರಗಳಲ್ಲೂ ಪ್ರಕಾಶ್ ರೈ ಅವರು ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ 'ಮಂಜಿನಹನಿ' ಸೇರಿದಂತೆ ಸಾಗುವ ದಾರಿಯಲ್ಲಿ, ದೇವರ ನಾಡಿನಲ್ಲಿ ಹಾಗೂ ಝಾನ್ಸಿ ಐಪಿಎಸ್ ಚಿತ್ರಗಳು ಪ್ರಕಾಶ್ ರೈ ಕೈಯಲ್ಲಿರುವ ಕನ್ನಡ ಸಿನಿಮಾಗಳು. [ಒಗ್ಗರಣೆ ಚಿತ್ರ ವಿಮರ್ಶೆ]
Cold
..fever
..doctors
order
3
day
bed
rest
.This
winters
camp
fire's
Chilly
misty
nights
by
my
pond.
And
yesssss
...my
cigarette
s
grrrrrrr
—
Prakash
Raj
(@prakashraaj)
January
27,
2015
ಪ್ರಕಾಶ್ ರೈ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ 'ಒಗ್ಗರಣೆ' ಚಿತ್ರದ ಬಳಿಕ ಅವರು ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸದಭಿರುಚಿಯ ಕಥೆಯ 'ಒಗ್ಗರಣೆ' ಚಿತ್ರ ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದು ಗೊತ್ತೇ ಇದೆ. ಪ್ರಕಾಶ್ ರೈ ಆದಷ್ಟು ಬೇಗ ಚೇತರಿಕೊಳ್ಳಲಿ ಎಂಬ ಹಾರೈಸೋಣ.