twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೊಂದು ರೀಮೇಕ್ ಚಿತ್ರಕ್ಕೆ ಶರಣ್ ನಾಯಕ.!

    By Bharath Kumar
    |

    ಸ್ಯಾಂಡಲ್ ವುಡ್ ಸ್ಟಾರ್ ನಟ ಶರಣ್ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳು ಮೂಲಕ ಕನ್ನಡ ಪ್ರೇಕ್ಷಕರನ್ನ ರಂಜಿಸುತ್ತಿದ್ದಾರೆ. ಸದ್ಯ, ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ರಾಜ್-ವಿಷ್ಣು' ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಮಧ್ಯೆ ಮತ್ತೊಂದು ರೀಮೇಕ್ ಚಿತ್ರಕ್ಕೆ ಶರಣ್ ನಾಯಕರಾಗುತ್ತಿದ್ದಾರೆ.

    ಹೌದು, 'ವಜ್ರಕಾಯ', 'ಚಿಂಗಾರಿ', 'ಭಜರಂಗಿ', 'ಬಿರುಗಾಳಿ' ಅಂತಹ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಯೋಗಾನಂದ್ ಮುದ್ದಾನ್ ಈಗ ನಿರ್ದೇಶಕರಾಗುತ್ತಿದ್ದು, ಇವರ ಮುಂದಿನ ಚಿತ್ರದಲ್ಲಿ ಶರಣ್ ನಾಯಕರಾಗುತ್ತಿದ್ದಾರಂತೆ.

    Actor Sharan Next Film Telugu Remake

    ಅಂದ್ಹಾಗೆ, ಈ ಚಿತ್ರ ತೆಲುಗಿನ ರೀಮೇಕ್ ಆಗಿದ್ದು, ಯಾವ ಚಿತ್ರ ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ಚಿತ್ರಕ್ಕೆ ತೆಲುಗು ನಿರ್ಮಾಪಕರೇ ಬಂಡವಾಳ ಹಾಕುತ್ತಿದ್ದು, ಕರ್ನಾಟಕ ಹಾಗೂ ಅಮೆರಿಕಾದಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.

    ಇನ್ನು ವಿ.ಹರಿಕೃಷ್ಣ ಸಂಗೀತ ನೀಡಲಿದ್ದು, ಕೆ.ಎಂ ಪ್ರಕಾಶ್ ಸಂಕಲನಕಾರರಾಗಿ ಕೆಲಸ ಮಾಡಲಿದ್ದಾರೆ. ಸದ್ಯ, ಪ್ರಿ-ಪ್ರೊಡಕ್ಷನ್ ಕೆಲಸಗಳನ್ನ ಮುಗಿಸಿರುವ ಚಿತ್ರತಂಡ, ಜುಲೈ ಅಂತ್ಯಕ್ಕೆ ಸಿನಿಮಾ ಶುರು ಮಾಡುವ ಯೋಚನೆಯಲ್ಲಿದೆಯಂತೆ.

    English summary
    Yoganand Muddan who has written dialogues for films like 'Mukunda Murari', 'Bhajarani', 'Vajrakaya', 'Chingari' and others is all set to turn director with a new untitled film. The film will have Sharan playing the lead role in the film.
    Thursday, June 8, 2017, 11:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X