Don't Miss!
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- News Mysuru: ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್, ಕಾರಣ ಇಲ್ಲಿದೆ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊನ್ನೆ ಪ್ರಿಯಾಂಕಾ ಆಯ್ತು, ಈಗ ಚಾರ್ಮಿ ಕೌರ್; ಈ ನಟಿಯರೇಕೆ ಹೀಗೆ?
ಅದ್ಯಾಕೋ ಇತ್ತೀಚೆಗೆ ನಟಿಯರ ತೊಡುವ ಬಟ್ಟೆಗಳು ಹೆಚ್ಚು ಸುದ್ದಿ ಮಾಡುತ್ತಿವೆ. ಗ್ಲಾಮರ್ ಲೋಕದಲ್ಲಿ ಬಣ್ಣದ ಚಿಟ್ಟೆಗಳಂತೆ ಕಲರ್ ಫುಲ್ ಕಾಸ್ಟ್ಯೂಮ್ಸ್ ತೊಟ್ಟು ಎಲ್ಲರ ಕಣ್ಣುಕುಕ್ಕಿಸುವ ನಟಿಯರು, ಗೊತ್ತಿದ್ದೋ ಗೊತ್ತಿಲ್ಲದೇನೋ ವಿವಾದಕ್ಕೆ ಗುರಿಯಾಗುತ್ತಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಕಾಲು ಮೇಲೆ ಕಾಲು ಹಾಕ್ಕೊಂಡು ಕೂತಿದ್ದಲ್ಲದೇ, ತುಂಡುಡುಗೆ ತೊಟ್ಟು ಕಾಲು ತೋರಿಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.
ಪ್ರಿಯಾಂಕ ಪ್ರದರ್ಶನಕ್ಕಿಟ್ಟಳು ಕಾಲು, ಶುರುವಾಯ್ತು ಟ್ರೋಲ್
ಇದೀಗ, ಸೌತ್ ಸುಂದರಿ ಚಾರ್ಮಿ ಕೌರ್ ಕೂಡ ಬಟ್ಟೆಯ ವಿಚಾರದಲ್ಲಿ ಈಗ ವಿವಾದಕ್ಕೆ ಗುರಿಯಾಗಿದ್ದಾರೆ. ಸಿಖ್ ರ ಪವಿತ್ರ ಸ್ಥಳಕ್ಕೆ ಪ್ಯಾಂಟ್ ಲೆಸ್ ಆಗಿ ಭೇಟಿ ಕೊಟ್ಟು ಸುದ್ದಿಯಾಗಿದ್ದಾಳೆ. ಮುಂದೆ ಓದಿ.....
ಗುರುದ್ವಾರಕ್ಕೆ ಭೇಟಿ ವೇಳೆ ಘಟನೆ
ಚಿತ್ರವೊಂದರ ಶೂಟಿಂಗ್ ಗಾಗಿ ಪೋರ್ಚಗಲ್ ನಲ್ಲಿರುವ ನಟಿ ಚಾರ್ಮಿ ಕೌರ್, ಅಲ್ಲಿನ ಪವಿತ್ರ ಗುರುದ್ವಾರಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ತಾವು ಹಾಕಿಕೊಂಡಿದ್ದ ತುಂಡುಡುಗೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಪಿಗ್ಗಿ ಕಾಲು ಪ್ರದರ್ಶನ ವಿವಾದ ಕುರಿತು ಅಮಿತಾಬ್ ಬಚ್ಚನ್ ಹೇಳಿದ್ದೇನು?
ಪ್ಯಾಂಟ್ ಲೆಸ್ ಕಾಸ್ಟ್ಯೂಮ್
ಗುರುದ್ವಾರಕ್ಕೆ ಭೇಟಿ ಕೊಟ್ಟಿದ್ದ ಚಾರ್ಮಿ ಕೌರ್ ಕಪ್ಪು ಬಣ್ಣದ ನಿಲುವಂಗಿ ತೊಟ್ಟಿದ್ದರು, ಆದ್ರೆ, ಅದಕ್ಕೆ ಪ್ಯಾಂಟ್ ಧರಿಸಿರಲಿಲ್ಲ. ತೊಡೆಗಳು ಕಾಣುವ ಹಾಗೆ ಬಟ್ಟೆ ಧರಿಸಿ ಗುರುದ್ವಾರಕ್ಕೆ ಹೋಗಿದ್ದು ಸರಿಯಿಲ್ಲ ಎಂಬ ವಿವಾದಕ್ಕೆ ಚಾರ್ಮಿ ಸಿಲುಕಿದ್ದಾರೆ.
ಧಾರ್ಮಿಕತೆಗೆ ಧಕ್ಕೆ
ಯಾವುದೇ ದೇವಸ್ಥಾನ, ಪವಿತ್ರ ಸ್ಥಳಗಳಿಗೆ ಹೋಗಬೇಕಾದರೇ ವಸ್ತ್ರ ಸಂಹಿತೆ ಹೀಗೆ ಇರಬೇಕು ಎಂಬ ನಿಯಮಗಳಿವೆ. ಆದ್ರೆ, ಈ ನಿಯಮಗಳಿಗೆ ವಿರುದ್ಧವಾಗಿ ನಟಿ ಚಾರ್ಮಿ ಕೌರ್ ನಡೆದುಕೊಂಡಿದ್ದಾರೆ. ಇನ್ನು ಮೊಣಕಾಲ ಮೇಲೆ ಕೂತು ಪ್ರಸಾದ ತೆಗೆದುಕೊಂಡಿರುವುದು ಕೂಡ ಧಾರ್ಮಿಕತೆಗೆ ಧಕ್ಕೆ ತರುವಂತಿದೆ ಎಂಬ ಆರೋಪಗಳು ಚಾರ್ಮಿಯ ವಿರುದ್ಧ ಕೇಳಿ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್
ಚಾರ್ಮಿ ಕೌರ್ ಅವರು ಗುರುದ್ವಾರಕ್ಕೆ ಭೇಟಿ ಕೊಟ್ಟಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ತಿಕರು ನಟಿಯ ನಡವಳಿಕೆ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.