Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡನೇ ಇನ್ನಿಂಗ್ಸ್ ಗೆ ಸಿದ್ಧವಾದ 'ಗಿರಿಬಾಲೆ' ಗೀತಾ
ಮಮತೆಯ ಮಡಿಲು, ಧೃವತಾರೆ, ಅರುಣರಾಗ, ಅನುರಾಗ ಅರಳಿತು, ಶೃತಿ ಸೇರಿದಾಗ, ದೇವತಾ ಮನುಷ್ಯ...ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿದ್ದ ಗೀತಾ ತಮ್ಮ ಪಾತ್ರಗಳ ಮೂಲಕ ಮನೆ ಮಾತಾಗಿದ್ದಾರೆ. ಈಗವರು ಕನ್ನಡದ 'ಮೀನಾಕ್ಷಿ' ಚಿತ್ರಕ್ಕೆ ಸಹಿಹಾಕುವ ಮೂಲಕ ಪುನರಾಗಮಿಸಿದ್ದಾರೆ.
'ಮೀನಾಕ್ಷಿ' ಚಿತ್ರವನ್ನು ನಿರ್ಮಿಸುತ್ತಿರುವ ವಜ್ರೇಶ್ವರಿ ರಮೇಶ್ ಅವರು ಕಥೆ ಹೇಳಿದ ಕೂಡಲೆ ಗೀತಾ ತಮ್ಮ ಒಪ್ಪಿಗೆ ಸೂಚಿಸಿದರಂತೆ. ಶುಭಾ ಪೂಂಜಾ ಹಾಗೂ ರಘು ಮುಖರ್ಜಿ ಅವರು ಮುಖ್ಯಪಾತ್ರಗಳಲ್ಲಿರುವ ಚಿತ್ರ ಇದಾಗಿದೆ.
ಶ್ರೀಧರ್ ಹೆಗಡೆ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ರಿಯಲ್ ಎಸ್ಟೇಟ್ ಮಾಫಿಯಾದ ಕಥಾಹಂದವರನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಗೀತಾ ಅವರು ನ್ಯಾಯಮೂರ್ತಿಯಾಗಿ ಗಮನಾರ್ಹ ಪಾತ್ರವನ್ನು ಪೋಷಿಸಲಿದ್ದಾರೆ. ಅವರ ಆಗಮನದಿಂದ ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ಪೋಷಕ ತಾರೆ ಸಿಕ್ಕಂತಾಗಿದೆ.
ಕೆಲವು ಕಾಲ ಕಿರುತೆರೆ ಧಾರಾವಾಹಿಗಳಲ್ಲೂ ಗೀತಾ ಅವರು ಬಿಜಿಯಾಗಿದ್ದರು. 1997ರಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ವಾಸನ್ ಅವರನ್ನು ವರಿಸಿದ ಬಳಿಕ ನ್ಯೂಯಾರ್ಕ್ ಗೆ ಸ್ಥಳಾಂತರವಾಗಿದ್ದರು. ಆ ಬಳಿಕ ಅವರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಅಪರೂಪ.
ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಅವರ ಆಗಮನವಾಗಿದೆ. ಡಾ.ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್ ಹಾಗೂ ಅನಂತನಾಗ್ ಅವರ ಜೊತೆ ಅಭಿನಯಿಸಿದ ಗೀತಾ ಅವರಿಗೆ ಈಗ ವಯಸ್ಸು 50 ಆಗಿದ್ದರೂ ಇನ್ನೂ ಪುಟಿಯುವ ಉತ್ಸಾಹ ಅವರದು. (ಏಜೆನ್ಸೀಸ್)