Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕಿಂಗ್ ಸ್ಟಾರ್ ಇಲ್ಲದ 'ರಾಜಧಾನಿ 2'ಕ್ಕೆ ಮುಹೂರ್ತ ಫಿಕ್ಸ್
ರಾಕಿಂಗ್ ಸ್ಟಾರ್ ಯಶ್ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿದ ಚಿತ್ರಗಳಲ್ಲಿ 'ರಾಜಧಾನಿ' ಚಿತ್ರವೂ ಒಂದು. ಇದೀಗ ಈ ಚಿತ್ರ ಎರಡನೇ ಭಾಗ ಸೆಟ್ಟೇರಲು ಸಜ್ಜಾಗಿದೆ. ಮೂಲ ಚಿತ್ರಕ್ಕೆ ರಘುಜಯ ಆಕ್ಷನ್ ಕಟ್ ಹೇಳಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರತಂಡದಿಂದ ಹೊರಬಂದ ಮೇಲೆ ಆ ಚಿತ್ರ ಇನ್ಯಾರದ್ದೋ ಹೆಸರಿನಲ್ಲಿ ಬಿಡುಗಡೆಯಾಗಿತ್ತು.
ನಾಲ್ಕು ಹುಡುಗರು ರೌಡಿಯಿಸಂನಿಂದ ಆಕರ್ಷಣೆಗೊಳ್ಳುವ ಚಿತ್ರ ಇದು. ಈ ಚಿತ್ರಕ್ಕೆ ಉತ್ತಮ ವಿಮರ್ಶೆ ವ್ಯಕ್ತವಾದರೂ ಬಾಕ್ಸ್ ಆಫೀಸಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದರೆ ಯಶ್ ವೃತ್ತಿಬದುಕಿನಲ್ಲಿ ಒಂದು ಮೈಲಿಗಲ್ಲಾಯಿತು. [ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರ 'ಮೈಸೂರು ಹುಲಿ']
ಇದೀಗ ರಾಜಧಾನಿ 2 ಚಿತ್ರವನ್ನು ಮೂಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರಘುಜಯ ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಯಶ್ ಅವರಿಗೆ ಬದಲಾಗಿ ಪ್ರೀತಮ್ ಅವರನ್ನು ಕರೆತರುತ್ತಿದ್ದಾರೆ. ರಾಜಧಾನಿಯಲ್ಲಿ ನಾಲ್ವರು ಹುಡುಗರ ಪೈಕಿ ಒಬ್ಬ ಉಳಿದುಕೊಳ್ಳುತ್ತಾನೆ. ಆ ಪಾತ್ರ ರಾಜಧಾನಿ 2ರಲ್ಲಿ ಮುಂದುವರೆಯುತ್ತದೆ.
ಮೂಲಚಿತ್ರದ ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರದಲ್ಲಿ ಪ್ರೀತಮ್ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಇಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಬದಲಾಗಿದ್ದಾರೆ. ಎಚ್ ಪ್ರವೀಣ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರ ಆಕ್ಷನ್, ಲವ್, ಸೆಂಟಿಮೆಂಟ್ ನಿಂದ ಕೂಡಿರುತ್ತದಂತೆ.
ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಇದೇ ಏಪ್ರಿಲ್ 6ರಂದು ಚಿತ್ರ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ.
ಈ ಚಿತ್ರಕ್ಕೆ ನಾಯಕಿಯಾಗಿ ಹರಿಪ್ರಿಯಾ ಆಯ್ಕೆಯಾಗಿದ್ದು ಉಳಿದಂತೆ ರಾಜಧಾನಿ ಒಂದರಲ್ಲಿ ಇರುವ ಬಹುತೇಕ ತಾಂತ್ರಿಕ, ಪಾತ್ರವರ್ಗ ಇರುತ್ತದೆ. ಮೂಲ ಚಿತ್ರದಲ್ಲಿ ಅಭಿನಯಿಸಿರುವ ಪ್ರಕಾಶ್ ರೈ, ರಘು ಅವರಿಗೆ ಅಡ್ವಾನ್ಸ್ ಕೊಡಲಾಗಿದ್ದು ಅವರನ್ನೂ ಕರೆತರಲಾಗುತ್ತಿದೆ ಎನ್ನುತ್ತಿದೆ ಚಿತ್ರತಂಡ. (ಏಜೆನ್ಸೀಸ್)