Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಲಿವುಡ್ ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ ಕನ್ನಡದ ಜಿಂಕೆಮರಿ ಬೆಡಗಿ
ಸ್ಯಾಂಡಲ್ ವುಡ್ ನಲ್ಲಿ 'ಜಿಂಕೆ ಮರೀನಾ, ನೀ ಜಿಂಕೆ ಮರೀನಾ, ಅಂತ ಲೂಸ್ ಮಾದ ಯೋಗೇಶ್ ಅವರ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದ ನಟಿ ಜಿಂಕೆಮರಿ ನಂದಿತಾ ಶ್ವೇತಾ ಅವರು ಇದೀಗ ತಮಿಳಿನಲ್ಲಿ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಕನ್ನಡ ಚಿತ್ರರಂಗದಿಂದ ಬಹುತೇಕ ದೂರ ಸರಿದಿದ್ದ ಈ ಸಿಂಪಲ್ ಬೆಡಗಿ ನಂದಿತಾ ಶ್ವೇತಾ ಅವರು ಇತ್ತೀಚೆಗೆ ಇಳೆಯದಳಪತಿ ವಿಜಯ್ ಅವರ 'ಪುಲಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ನಿರ್ದೇಶಕ ರಾಧಾ ಮೋಹನ್ ಆಕ್ಷನ್-ಕಟ್ ಹೇಳಿರುವ 'ಉಪ್ಪು ಕರುವಾಡು' ಎಂಬ ತಮಿಳು ಸೂಪರ್ ಕಾಮಿಡಿ ಚಿತ್ರದಲ್ಲಿ ನಮ್ಮ ಕನ್ನಡತಿ ನಂದಿತಾ ಶ್ವೇತಾ ಅವರು ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ನಟ ಕರುಣಾಕರನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ಚಿತ್ರ ವಿತರಣಾ ಸಂಸ್ಥೆ 'ಔರಾ ಸಿನಿಮಾಸ್' ಅರ್ಪಿಸುವ 'ಉಪ್ಪು ಕರುವಾಡು' ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಇದೇ ವಾರ (ನವೆಂಬರ್ 27) ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸಲಿದೆ.
'ನಾನು ನಿರ್ದೇಶಕ ರಾಧಾ ಮೋಹನ್ ಅವರ ದೊಡ್ಡ ಅಭಿಮಾನಿ, ಜೊತೆಗೆ ಇದೀಗ ನನ್ನ ಕಂಪೆನಿಯ ಪ್ರಾಯೋಜಕತ್ವದಲ್ಲಿ 'ಉಪ್ಪು ಕರುವಾಡು' ಪ್ರಾಜೆಕ್ಟ್ ಮೂಡಿಬರುತ್ತಿರುವುದಕ್ಕೆ, ನನಗೆ ತುಂಬಾ ಸಂತೋಷವಾಗುತ್ತಿದೆ. 'ಉಪ್ಪು ಕರುವಾಡು' ಫುಲ್ ಫ್ಯಾಮಿಲಿ ಪ್ಯಾಕೇಜ್ ನ ಜೊತೆಗೆ ಪಕ್ಕಾ ಕಾಮಿಡಿ ಸಿನಿಮಾ' ಎಂದು ಔರಾ ಸಿನಿಮಾ ಕಂಪೆನಿಯ ಸಿಇಓ ಮಹೇಶ್ ಗೋವಿಂದರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಇಷ್ಟು ದಿನ ಪತ್ತೆ ಇಲ್ಲದ ಕನ್ನಡತಿ ನಂದಿತಾ ಶ್ವೇತಾ ಅವರು ದಿಢೀರ್ ಅಂತ ಮತ್ತೆ ತಮಿಳಿನಲ್ಲಿ ಪ್ರತ್ಯಕ್ಷ ಆಗಿದ್ದು, ಇದೇ ಖುಷಿಗೆ ತಮಿಳು ಭಾಷೆಯಲ್ಲೇ, 'ನನ್ನ ಚಿತ್ರವನ್ನು ನೋಡಿ ನನಗೆ ಸಪೋರ್ಟ್ ಮಾಡಿ' ಅಂತ ತಮ್ಮ ಫೇಸ್ ಬುಕ್ಕಿನಲ್ಲಿ, ಅಭಿಮಾನಿಗಳಿಗೆ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.
Posted by Nandita Swetha on Tuesday, November 24, 2015