Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ ಚುಂಬಿಸಿದ ಸೇಬು ಹತ್ತು ಸಾವಿರಕ್ಕೆ ಹರಾಜು!
ಪಬ್ಲಿಕ್ ಟಿವಿ ಸೋಮವಾರ ಸಂಜೆ ಪ್ರಸಾರ ಮಾಡಿದ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ವಿಶೇಷ ಕಾರ್ಯಕ್ರಮದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಿತು. ಚಿತ್ರದಲ್ಲಿ ಉಪೇಂದ್ರ ಹಾಗೂ ರಮ್ಯಾ ಸೇಬಿನ ಹಣ್ಣನ್ನು ಕಚ್ಚಿಕೊಳ್ಳುವ ಸನ್ನಿವೇಶವಿದೆ. ಇದೇ ಸನ್ನಿವೇಶವನ್ನು ರಮ್ಯಾ ಕಾರ್ಯಕ್ರಮದಲ್ಲಿ ಮಾಡಿತೋರಿಸಿದರು.
ಬಳಿಕ ಮುನಿರತ್ನ ಇದೇ ಸೇಬಿನ ಹಣ್ಣನ್ನು ಹರಾಜಿಗೆ ಇಟ್ಟರು. ವಿಶಾಲ್ ಎಂಬ ರಮ್ಯಾರ ಅಭಿಮಾನಿಯೊಬ್ಬ ಈ ಸೇಬಿನ ಹಣ್ಣನ್ನು ರು.10 ಸಾವಿರಕ್ಕೆ ಖರೀದಿಸಿದ. ತುಂಬಾ ಲೈವ್ಲಿಯಾಗಿ ಪ್ರಸಾರವಾದ ಈ ಕಾರ್ಯಕ್ರಮದ ವಿಡಿಯೋ ಇಲ್ಲಿದೆ ನೋಡಿ.
ಹರೀಶ್ ನಾಗರಾಜ್ ನಡೆಸಿಕೊಟ್ಟ ಈ ಕಾರ್ಯಕ್ರಮ ಸತತ 2 ಗಂಟೆಗಳಿಗೂ ಅಧಿಕ ಸಮಯ ನೇರ ಪ್ರಸಾರವಾಯಿತು. ಉಪೇಂದ್ರ ಅವರು ತಮ್ಮ ಬಾಲ್ಯ, ಕಾಲೇಜು ದಿನಗಳನ್ನು ಇಲ್ಲಿ ನೆನಪಿಸಿಕೊಂಡರು. ಅವರ ತಂದೆತಾಯಿ, ಮಡದಿ ಮಕ್ಕಳೊಂದಿಗೆ ನೇರ ಪ್ರಸಾರವೂ ವೀಕ್ಷಕರಿಗೆ ಮುದ ನೀಡಿತು.
ಚಿತ್ರದ ನಿರ್ಮಾಪಕ ಮುನಿರತ್ನ ಅವರು ಮಾತನಾಡುತ್ತಾ, ತಮ್ಮ 'ಕಠಾರಿವೀರ' ಚಿತ್ರವನ್ನು ಯಾವುದೇ ಚಿತ್ರದಿಂದ ಕದ್ದಿಲ್ಲ. ಇದೊಂದು ಒರಿಜಿನಲ್ ಸ್ಟೋರಿ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. 'ಕಠಾರಿವೀರ' ಚಿತ್ರದಲ್ಲಿನ "ಅಂಬಿಕಾ ಚಳಿ ತಾಳೆನು ಅಂಬಿಕಾ..ನೀನು ಭಲೆ ಡೇಂಜರ್ ಕಣೋ..." ಎಂಬ ಹಾಡಿನಲ್ಲಿ ರಮ್ಯಾ ಈ ರಸವತ್ತಾ ಸೇಬಿನ ಸೀನ್ ಬರುತ್ತದೆ. ಏನೇ ಆಗಲಿ ಗಿಳಿ ಕಚ್ಚಿದ ಮಾವಿನಕಾಯಿಯಂತೆ ರಮ್ಯಾ ಮುತ್ತಿಕ್ಕಿದ ಸೇಬಿಗೂ ಒಂದು ಭರ್ಜರಿ ಬೆಲೆ ಸಿಕ್ಕಿದೆ. (ಒನ್ಇಂಡಿಯಾ ಕನ್ನಡ)