Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೂ ಮುನ್ನ ಸದ್ದು ಮಾಡುತ್ತಿದೆ ಪವನ್ ರ 'ಯು-ಟರ್ನ್'
ಸದ್ಯಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಕ್ಷೇತ್ರದಲ್ಲಿ ಸಖತ್ ಬ್ಯುಸಿ ಶೆಡ್ಯೂಲ್ ಹಾಕಿಕೊಂಡಿರುವ ನಟಿ ಸಮಂತಾ ರುತು ಪ್ರಭು ಅವರು ಕನ್ನಡದ ನಿರ್ದೇಶಕ ಪವನ್ ಕುಮಾರ್ ಅವರ ಕನ್ನಡ 'ಯು-ಟರ್ನ್' ಚಿತ್ರದ ರೀಮೆಕ್ ನಲ್ಲಿ ನಟಿಸಲು ಆಸಕ್ತಿ ವಹಿಸಿದ್ದಾರೆ.
ಮಾರ್ಚ್ 18 ರಂದು ಬೆಂಗಳೂರಿಗೆ ಆಗಮಿಸಿದ್ದ ನಟಿ ಸಮಂತಾ ರುತು ಪ್ರಭು ಅವರು ಪವನ್ ಕುಮಾರ್ ಅವರ 'ಯು-ಟರ್ನ್' ಸಿನಿಮಾ ನೋಡಿದ್ದಾರಂತೆ. ಈ ಸಂದರ್ಭದಲ್ಲಿ ಇವರ ಜೊತೆ ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಅವರು ಕೂಡ ಹಾಜರಿದ್ದರು.[ಬಿಡುಗಡೆಗೂ ಮುನ್ನ ದಾಖಲೆ ಸೃಷ್ಟಿಸಿದ ಪವನ್ ರ 'ಯು ಟರ್ನ್']
ಸಮಂತಾ ರುತು ಸಿನಿಮಾ ನೋಡಿರುವುದನ್ನು ದೃಢೀಕರಿಸಿರುವ ನಿರ್ದೇಶಕ ಪವನ್ ಕುಮಾರ್ 'ಯು-ಟರ್ನ್' ಚಿತ್ರದ ಟ್ರೈಲರ್ ನೋಡಿದ ಸಮಂತಾ ಅವರು ನನ್ನ ಜೊತೆಗೆ ಮಾತನಾಡಿದರು. ಅವರು ಸ್ಕ್ರಿಪ್ಟ್ ಓದಿದ ನಂತರ ಇದೀಗ ಸಿನಿಮಾದ ಪ್ರಿವ್ಯೂ ಕೂಡ ವೀಕ್ಷಿಸಿದ್ದಾರೆ. ಸದ್ಯಕ್ಕೆ ಚಿತ್ರವನ್ನು ತಮಿಳು-ತೆಲುಗು ಭಾಷೆಗೆ ರೀಮೆಕ್ ಮಾಡಲು ಚರ್ಚೆ ನಡೆಸುತ್ತಿದ್ದೇವೆ' ಎನ್ನುತ್ತಾರೆ.
ತೆಲುಗು ನಟ ನಾಗಚೈತನ್ಯ ಅವರು ತಮ್ಮ ಹಿಂದಿನ ಸಿನಿಮಾ 'ಲೂಸಿಯಾ'ದ ಅಭಿಮಾನಿಯಾಗಿರುವುದರಿಂದ ಅವರು ನಟಿ ಸಮಂತಾ ಅವರ ಜೊತೆಗೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ ಎನ್ನುತ್ತಾರೆ 'ಲೂಸಿಯಾ' ನಿರ್ದೇಶಕ ಪವನ್ ಕುಮಾರ್.['ಯು ಟರ್ನ್' ಡಬ್ಬಲ್ ರೋಡ್ ಫ್ಲೈ ಓವರ್ ಮೇಲೆ ಏನಿರಬಹುದು?]
ಈಗಾಗಲೇ 'ಯು-ಟರ್ನ್' ನಿರ್ಮಾಪಕರ ಜೊತೆ ತೆಲುಗು ಮತ್ತು ತಮಿಳು ರೀಮೆಕ್ ಸಾಧ್ಯತೆಗಳನ್ನು ನಿರ್ದೇಶಕ ಪವನ್ ಅವರು ಚರ್ಚಿಸುತ್ತಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಕನ್ನಡ ಚಿತ್ರ ತೆಲುಗಿಗೂ 'ಯು-ಟರ್ನ್' ತೆಗೆದುಕೊಳ್ಳಲಿದೆ.
'ಸಮಂತಾ ಅವರು ನಮ್ಮ ಕನ್ನಡ ಸಿನಿಮಾವನ್ನು ತಮಿಳು ಮತ್ತು ತೆಲುಗಿನಲ್ಲಿ ಮಾಡಲು ಆಸಕ್ತಿ ತೋರಿರುವುದು ಒಳ್ಳೆಯ ಸುದ್ದಿ. ಆದರೆ ನಮಗೆ ನಿರ್ಮಾಪಕರು ಸಿಗಬೇಕು. ಎಲ್ಲವೂ ಅಂತಿಮವಾದ ಮೇಲಷ್ಟೇ ನಾನು ಅಧಿಕೃತವಾಗಿ ಘೋಷಣೆ ಮಾಡಲು ಸಾಧ್ಯ' ಎಂದಿದ್ದಾರೆ ನಿರ್ದೇಶಕ ಪವನ್ ಕುಮಾರ್.['ರಂಗಿ' ಆಯ್ತು ಇದೀಗ 'ಯೂ-ಟರ್ನ್' ತೆಗೆದುಕೊಂಡ ರಾಧಿಕಾ ಚೇತನ್.!]
ಚಿತ್ರದಲ್ಲಿ ನವ ಪ್ರತಿಭೆ ನಟಿ ಶ್ರದ್ಧಾ ಶ್ರೀನಾಥ್, ನಟ ದಿಲೀಪ್ ರಾಜ್, ನಟಿ ರಾಧಿಕಾ ಚೇತನ್ ಹಾಲಿವುಡ್ ನಟ ರೋಜರ್ ನಾರಾಯಣ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ಸದ್ಯದಲ್ಲೇ ತೆರೆ ಮೇಲೆ ಭರ್ಜರಿಯಾಗಿ ಅಪ್ಪಳಿಸಲಿದೆ. ದಕ್ಷಿಣ ಭಾರತದ ನಟಿ ಸಮಂತಾ ರುತು ಪ್ರಭು ಅವರ ಫೊಟೋ ಗ್ಯಾಲರಿ ನೋಡಲು ಸ್ಲೈಡ್ಸ್ ಗಳನ್ನು ಕ್ಲಿಕ್ಕಿಸಿ..