Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬೆಳಕು 'ಸರಿತಾ'ಗೆ ತಮಿಳಿನಲ್ಲಿ ಹೊಸ ಇನಾಮ್
ಚಲಿಸುವ ಮೋಡಗಳು, ಹೊಸ ಬೆಳಕು, ಮೌನಗೀತೆ, ಕಾಮನಬಿಲ್ಲು, ಮುಗಿಲ ಮಲ್ಲಿಗೆ, ಭಕ್ತ ಪ್ರಹ್ಲಾದ, ಎರಡು ರೇಖೆಗಳು ಸೇರಿದಂತೆ ಮುಂತಾದ ಚಿತ್ರಗಳ ಮೂಲಕ ಜನಮನ ಸೂರೆಗೊಂಡ ತಾರೆ ಸರಿತಾ ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ತನ್ನ ಪತಿ ಮುಕೇಶ್ ಎರಡನೇ ಮದುವೆಯಾಗಿದ್ದು, ನೃತ್ಯಪಟು ಮಿಥಿಲ್ ದೇವಿಕಾ ಅವರ ಕೈಹಿಡಿದದ್ದು ಸರಿತಾ ಸಾಂಸಾರಿಕ ಜೀವನ ತಾಳತಪ್ಪಿತ್ತು. ಈಗವರು ಸ್ವಲ್ಪ ರಿಲ್ಯಾಕ್ಸ್ ಆದಂತೆ ಕಾಣುತ್ತಿದ್ದಾರೆ. ತಮಿಳಿನ 'ಇನಾಂ' ಚಿತ್ರಕ್ಕೆ ಸಹಿಹಾಕಿದ್ದು ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ. ['ಕಾಮನಬಿಲ್ಲು' ಸರಿತಾ ಸಂಸಾರದಲ್ಲಿ 'ತಪ್ಪಿದ ತಾಳ']
ಚಿತ್ರದಲ್ಲಿ ಸರಿತಾ ಅವರು ಸುನಾಮಿಕಾ ಪಾತ್ರ ಪೋಷಿಸಲಿದ್ದಾರೆ. ಸುನಾಮಿಯ ಕಾರಣ ತನ್ನೆಲ್ಲಾ ಬಂಧು ಬಳಗ ಕಳೆದುಕೊಂಡು ಅನಾಥೆಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಶ್ರೀಲಂಕಾ ಯುದ್ಧದಲ್ಲಿ ತಂದೆತಾಯಿಯನ್ನು ಕಳೆದುಕೊಂಡ ಅನಾಥರಾದ ಮಕ್ಕಳಿಗೆ ತಾಯಿಯಾಗಿ ಅವರ ಪಾತ್ರ ಇರುತ್ತದೆ.
ಅನಾಥ ಮಕ್ಕಳನ್ನು ತಾನು ಹೆತ್ತ ಮಕ್ಕಳಂತೆ ನೋಡಿಕೊಳ್ಳುವ ಸುನಾಮಿಕಾ ಮತ್ತೆ ಶ್ರೀಲಂಕಾ ಅಂತರ್ಯುದ್ಧದಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು. 204ರಲ್ಲಿ ತೆಲುಗಿನ ಅರ್ಜುನ್ ಚಿತ್ರದಲ್ಲಿ ಸರಿತಾ ಅಭಿನಯಿಸಿದ್ದರು. ಅದಾದ ಬಳಿಕ ಅವರು ಬಣ್ಣಹಚ್ಚಲಿಲ್ಲ. ಇದೀಗ ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ.