Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳ್ಳಿಪರದೆಗೆ ಓಂ ಪ್ರಕಾಶ್ ರಾವ್, ರೇಖಾದಾಸ್ ಕುಡಿ
ಈ ಶ್ರಾವ್ಯಾ ನಟಿಸುತ್ತಿರುವ ಚಿತ್ರದ ಹೆಸರು ಲೂಸುಗಳು. ಇತ್ತೀಚಿಗಷ್ಟೇ ಸುದ್ದಿಯಾಗಿದ್ದ ಈ ಹೆಸರಿನ ಚಿತ್ರದಲ್ಲಿ ನಾಯಕರಾಗಿ ಶ್ರೀಮುರಳಿ, ಶ್ರೀಕಾಂತ್ (ಶ್ರೀಕಿ) ಹಾಗೂ ಅಕುಲ್ ಬಾಲಾಜಿ ಇದ್ದಾರೆ. ಮೂವರು ನಾಯಕಿಯರಲ್ಲಿ ಶ್ರಾವ್ಯಾ ಕೂಡ ಒಬ್ಬರು. ಅರುಣ್ ಎಂಬ ಹೊಸಬರು ಈ ಚಿತ್ರಕ್ಕೆ ನಿರ್ದೇಶಕರು. ಅಪ್ಪ ಓಂ ಪ್ರಕಾಶ್ ರಾವ್ ನಿರ್ದೇಶಕರಾದರೂ, ಮಗಳು ಶ್ರಾವ್ಯಾ ಬೇರೊಬ್ಬ ನಿರ್ದೇಶಕ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
ತಾಯಿ ರೇಖಾದಾಸ್ ಖ್ಯಾತ ನಟಿ, ತಂದೆ ಓಂ ಪ್ರಕಾಶ್ ರಾವ್ ಪ್ರಖ್ಯಾತ ನಿರ್ದೇಶಕ. ಹೀಗಾಗಿ ಶ್ರಾವ್ಯಾ ಚಿತ್ರರಂಗಕ್ಕೆ ಕಾಲಿಟ್ಟಿದ್ದರಲ್ಲಿ ಅಚ್ಚರಿಯೇನಿಲ್ಲ. ಆದರೆ ತಮ್ಮ ತಂದೆಯ ನಿರ್ದೇಶನದ ಎಲ್ಲಾ ಚಿತ್ರಗಳನ್ನು ತಾವು ಬಹಳಷ್ಟು ಮೆಚ್ಚುವುದಾಗಿ ಹೇಳಿಕೊಳ್ಳುವ ಶ್ರಾವ್ಯಾಗೆ, ಅಪ್ಪನ ಚಿತ್ರದ ಮೂಲಕವೇ ಬರಲು ಸಾಧ್ಯವಾಗಿಲ್ಲ ಎಂಬುದಷ್ಟೇ ಗಮನಿಸಬೇಕಾದ ಅಂಶ.
ಆದರೆ, ಶ್ರಾವ್ಯಾ ತಮ್ಮ ತಂದೆಯ ಚಿತ್ರದಲ್ಲಿ ನಟಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. "ನನಗೆ ನನ್ನ ತಂದೆಯ ನಿರ್ದೇಶನದ ಚಿತ್ರದಲ್ಲಿ ನಟಿಸಲು ಆಸೆ" ಎಂದಿರುವ ಶ್ರಾವ್ಯಾಗೆ ಆ ಕಾಲ ಯಾವಾಗ ಕೂಡಿಬರಲಿದೆ ಎಂಬುದು ಸ್ವತಃ ಅವರಿಗೂ ಗೊತ್ತಿಲ್ಲ. ಅದು ಅಮ್ಮ ರೇಖಾದಾಸ್ ಅವರೂ ಅರಿಯಲಾಗದ ವಿಷಯ. ಒಟ್ಟಿನಲ್ಲಿ ಕಲಾವಿದರ ಕುಡಿಯೊಂದು ಚಿತ್ರರಂಗ ಪ್ರವೇಶಿಸಿದೆ, ಮುಂದಿನದೆಲ್ಲಾ ಭವಿಷ್ಯಕ್ಕೆ ಬಿಟ್ಟ ವಿಷಯ. (ಒನ್ ಇಂಡಿಯಾ ಕನ್ನಡ)