Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾರಾ ದಂಪತಿ ಸ್ನೇಹಾ ಪ್ರಸನ್ನ ಮಧುಚಂದ್ರಕ್ಕೆ ಬ್ರೇಕ್
ಒಂದು ವಾರದ ಹಿಂದಷ್ಟೇ ಪ್ರಸನ್ನ ಕೈಹಿಡಿದ ಕನ್ನಡ, ತೆಲುಗು ಹಾಗೂ ತಮಿಳು ತಾರೆ ಸ್ನೇಹಾ ಇನ್ನೇನು ಮಧುಚಂದ್ರಕ್ಕೆ ಯು.ಎಸ್ ವಿಮಾನ ಹತ್ತುವುದರಲ್ಲಿದ್ದರು. ಆದರೆ ಅಷ್ಟರಲ್ಲಾಗಲೇ ಆಕೆಯ ಮಧುಚಂದ್ರಕ್ಕೆ ಸಡನ್ನಾಗಿ ಬ್ರೇಕ್ ಬಿದ್ದಿದೆ.
ಹನಿಮೂನ್ಗೆ ಹೋಗುವುದನ್ನು ಬಿಟ್ಟು ಚಿತ್ರೀಕರಣಕ್ಕೆ ಆಗಮಿಸಿದ್ದಾರೆ ಸ್ನೇಹಾ. ಕನ್ನಡದ ಕಿಶೋರ್ ಮುಖ್ಯಭೂಮಿಕೆಯಲ್ಲಿರುವ ತಮಿಳು ಚಿತ್ರ ಹರಿದಾಸ್ ಚಿತ್ರೀಕರಣದಲ್ಲಿ ಸ್ನೇಹಾ ಈಗ ಬಿಜಿಯಾಗಿದ್ದಾರೆ. ತಮ್ಮ ಹೃದಯಕ್ಕೆ ಹತ್ತಿರವಾದ ಕಥಾಹಂದರ ಈ ಚಿತ್ರಕ್ಕಿದೆಯಂತೆ.
'ಹರಿದಾಸ್' ಚಿತ್ರದಲ್ಲಿ ಸ್ನೇಹಾ ಅವರದು ನಿರ್ಣಾಯಕ ಪಾತ್ರವಂತೆ. ಎಂಟು ವರ್ಷ ಬಾಲಕನೊಬ್ಬನ ಸುತ್ತ ಕತೆ ಸುತ್ತುತ್ತದೆ. ಹರಿದಾಸ್ ಚಿತ್ರಕ್ಕಾಗಿ ರಜನಿಕಾಂತ್ ಅವರ ಮಹತ್ವಾಕಾಂಕ್ಷಿ ಚಿತ್ರ 'ಕೋಚಡಯಾನ್'ನಿಂದಲೂ ಹೊರಬಂದಿದ್ದರು ಸ್ನೇಹಾ.
ಚಿತ್ರಕತೆ ಸಿಕ್ಕಾಪಟ್ಟೆ ಇಷ್ಟವಾಯಿತು. ಹಾಗಾಗಿ ಕೂಡಲೆ ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ತಾನು ಇದುವರೆಗೂ ಕೇಳಿರುವ 80 ಚಿತ್ರಕತೆಗಳಲ್ಲಿ ಹರಿದಾಸ್ನಷ್ಟು ಯಾವುದೂ ತಮ್ಮನ್ನು ಕಾಡಲಿಲ್ಲ ಎಂದಿದ್ದಾರೆ ಸ್ನೇಹಾ. ಅದೆಲ್ಲಾ ಸರಿ ಪಾಪ ಹನಿಮೂನ್ ಧ್ಯಾನದಲ್ಲಿದ್ದ ಪ್ರಸನ್ನ ಪ್ರಾಬ್ಲಂ ಯಾರಿಗೇಳೋಣ! (ಏಜೆನ್ಸೀಸ್)