Don't Miss!
- Automobiles ವಂದೇ ಭಾರತ್ ಸ್ಲೀಪರ್, ಸೂಪರ್ ಆಪ್.. ರೈಲ್ವೆಯಿಂದ ಬಿಗ್ ಪ್ಲ್ಯಾನ್: ನೀವು ತಿಳಿಯಬೇಕಾದ ವಿಚಾರಗಳಿವು!
- News Siddaramaiah campaign: ಬಾಗೇಪಲ್ಲಿಯಲ್ಲಿಂದು ಸಿಎಂ ಸಿದ್ದರಾಮಯ್ಯ ಪ್ರಚಾರ ಸಭೆ, ಡಿಕೆಶಿ ಭಾಗಿ
- Finance Real Estate: ಬೆಂಗಳೂರಿನ ಕೋರಮಂಗಲದಲ್ಲಿ ದುಬಾರಿ ಬೆಲೆಗೆ ಆಸ್ತಿ ಖರೀದಿಸಿದ ಅಜಿತ್ ಐಸಾಕ್
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪಿಕೆ' ಡೌನ್ಲೋಡ್ ಮಾಡಿ ಪೇಚಿಗೆ ಸಿಲುಕಿದ ಅಖಿಲೇಶ್
ಲಕ್ನೋ, ಜ. 2: ಭಾರೀ ನಿರೀಕ್ಷೆಯಿಂದ ಅಧಿಕಾರಕ್ಕೇರಿದ್ದ ಸದಾ ನಗುಮೊಗದ ಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಟೀಕೆ ಹಾಗೂ ಆರೋಪ ಎದುರಿಸಿದ್ದೇ ಹೆಚ್ಚು.
ಅಖಿಲೇಶ್ ಟೀಕೆಗೆ ಒಳಗಾಗುತ್ತಿರುವುದಕ್ಕೆ ಕಾರಣ ದೂರದೃಷ್ಟಿ ಕೊರತೆಯೋ ಅಥವಾ ಪ್ರಬುದ್ಧತೆ ಇಲ್ಲದಿರುವುದೋ ಗೊತ್ತಿಲ್ಲ. ಆದರೆ, ಅವರು ಮಾಡುವ ಕೆಲಸ, ಆಡುವ ಮಾತೆಲ್ಲವೂ ವಿವಾದಕ್ಕೊಳಗಾಗುತ್ತಿದೆ. ಈ ಎಲ್ಲ ಕಾರಣಗಳಿಂದ ರಾಜ್ಯದ ಜನತೆಯಲ್ಲಿ ಭರವಸೆ ಕಳೆದುಕೊಳ್ಳುತ್ತಿರುವ ಅಖಿಲೇಶ್ ಮತ್ತೆ ವಿವಾದಕ್ಕೆ ಈಡಾಗಿದ್ದಾರೆ. [ನೆಮ್ಮದಿ ಹಾಳುಗೆಡಹುವ ಚಲನಚಿತ್ರ ಯಾರಿಗೆ ಬೇಕು?]
ಆಗಿದ್ದೇನು? : ಅಮೀರ್ ಖಾನ್ ಅಭಿನಯದ ಪಿಕೆ ಹಿಂದಿ ಚಲನಚಿತ್ರ ಜನಪ್ರಿಯತೆ ಗಳಿಸುತ್ತಿರುವುದನ್ನು ಗಮನಿಸಿ ತೆರಿಗೆ ವಿನಾಯಿತಿ ಘೋಷಿಸಿದ್ದ ಅಖಿಲೇಶ್ ಎಡಪಂಥೀಯರಿಂದ ಶ್ಲಾಘನೆಗೊಳಗಾದಿದ್ದರು. ಆದರೆ, ಈಗ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳಲು ಹೋಗಿ ಪೇಚಿಗೆ ಸಿಲುಕಿದ್ದಾರೆ. ಅವರು ಹೇಳಿಕೊಂಡ ಮಾತೇ ವಿವಾದದ ಮೂಲ. [ಪಿಕೆ ಬೆಂಬಲಕ್ಕೆ ನಿಂತ ಅಖಿಲೇಶ್ ಯಾದವ್]
"ಅನೇಕರು ನನಗೆ ಪಿಕೆ ಚಲನಚಿತ್ರ ನೋಡುವಂತೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಆದ್ದರಿಂದ ಕೆಲವು ದಿನಗಳ ಹಿಂದೆ ಈ ಚಲನಚಿತ್ರವನ್ನು ಇಂಟರ್ನೆಟ್ನಿಂದ ಡೌನ್ಲೋಡ್ ಮಾಡಿಕೊಂಡಿದ್ದೆ. ಆದರೆ, ನೋಡಲು ಸಾಧ್ಯವಾಗಿರಲಿಲ್ಲ. ಬಿಡುವು ಸಿಕ್ಕಿದಾಗ ಆ ಚಲನಚಿತ್ರವನ್ನು ನೋಡಿದೆ. ಇದಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎನ್ನಿಸಿತು. ಕೂಡಲೇ ತೆರಿಗೆ ವಿನಾಯಿತಿ ಘೋಷಿಸಿದೆ" ಎಂದು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಇದೇ ಅವರಿಗೆ ತಿರುಗುಬಾಣವಾಗಿದೆ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಡಿ ಹಲವರಿಂದ ಟೀಕೆಗೊಳಗಾಯಿತು. "ಇಂಟರ್ನೆಟ್ನಿಂದ ಚಲಚನಚಿತ್ರ ಡೌನ್ಲೋಡ್ ಮಾಡುವುದು ಪೈರಸಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂಬುದು ಮುಖ್ಯಮಂತ್ರಿಯವರಿಗೆ ಗೊತ್ತಿಲ್ಲವೇ?" ಎಂದು ಹಲವರು ಪ್ರಶ್ನಿಸಿದ್ದಾರೆ. ಅಖಿಲೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದ್ದಾರೆ.
ಈ ವಿವಾದದಿಂದ ಅಖಿಲೇಶ್ ಹೇಗೆ ಪಾರಾಗ್ತಾರೆ ನೋಡಬೇಕು.