Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅನ್ನದಾತರ ಅನ್ನದಾತ' ಅಂತೆ ಕಿಚ್ಚ ಸುದೀಪ್.!
''ನಿರ್ಮಾಪಕರು ಅನ್ನದಾತರು'' ಅಂತ ಡಾ.ರಾಜ್ ಕುಮಾರ್ ಸದಾ ಹೇಳುತ್ತಿದ್ದರು. ಅದರಂತೆ ನಿರ್ಮಾಪಕರನ್ನ ಡಾ.ರಾಜ್ ಕುಮಾರ್ ಗೌರವದಿಂದ ಕಾಣುತ್ತಿದ್ದರು.
ಈ ವಿಷಯ ಈಗ ಯಾಕೆ ಅಂದ್ರೆ, ಕಿಚ್ಚ ಸುದೀಪ್ ಅವರಿಗೆ ಹೊಸ ಬಿರುದು ಸಿಕ್ಕಿದೆ. ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳು 'ಕಲಾಭೂಷಣ' ಅಂತ ಹೊಸ ಬಿರುದು ಕೊಟ್ಟಿರುವುದನ್ನ ಇಂದು ಬೆಳಗ್ಗೆಯಷ್ಟೇ ನಾವೇ ನಿಮಗೆ ಹೇಳಿದ್ವಿ. [ಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದು]
ಅದರೊಂದಿಗೆ ಸುದೀಪ್ ಗೆ ಮತ್ತೊಂದು ಟೈಟಲ್ ಸಿಕ್ಕಿದೆ. 'ಅನ್ನದಾತರ ಅನ್ನದಾತ' ಅಂತ.! ಹೀಗಂತ ಸುದೀಪ್ ಅವರಿಗೆ ನಾಮಕರಣ ಮಾಡಿರುವುದು ಕಾಲಿವುಡ್ ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರತಂಡ.
ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ರೆಡಿಯಾಗುತ್ತಿರುವ ಈ ಚಿತ್ರಕ್ಕೆ ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಅಂತ ಹೆಸರಿಡಲಾಗಿದೆ. ಕನ್ನಡಲ್ಲಿ 'ಕೋಟಿಗೊಬ್ಬ-2' ಅಂತಲೇ ಫೇಮಸ್ ಆಗಿರುವ ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫಿಕ್ಸ್ ಆಗಿಲ್ಲ.
ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಅದರಲ್ಲಿ ಸುದೀಪ್ ಅವರಿಗೆ 'ಅನ್ನದಾತರ ಅನ್ನದಾತ' ಅಂತ ಬಿರುದು ನೀಡಲಾಗಿದೆ. [ಕಿಚ್ಚನ ಬರ್ತ್ ಡೇ ಸ್ಪೆಷಲ್: ಫಸ್ಟ್ ಲುಕ್ ಟೀಸರ್ ಝಲಕ್]
ಡಾ.ರಾಜ್ ಕುಮಾರ್ ಹೇಳಿದಂತೆ ''ನಿರ್ಮಾಪಕರು ಅನ್ನದಾತರು''. ಸ್ಯಾಂಡಲ್ ವುಡ್ ನಲ್ಲಿ ಅನೇಕ ನಿರ್ಮಾಪಕರುಗಳಿಗೆ ಸುದೀಪ್ ಸಹಾಯ ಮಾಡಿದ್ದಾರೆ. ಕಷ್ಟದಲ್ಲಿದ್ದವರಿಗೆ ಆಪತ್ಭಾಂಧವರಾಗಿದ್ದಾರೆ. ಸುದೀಪ್ ಅವರ ಈ ಗುಣದಿಂದ ಈ ಬಿರುದು ನೀಡಲಾಗಿದ್ಯಾ ಅನ್ನುವುದಕ್ಕೆ ಚಿತ್ರತಂಡವೇ ಉತ್ತರಿಸಬೇಕು. [ನಿಮಗೆ ಗೊತ್ತಿಲ್ಲದ 'ನಲ್ಲ' ಸುದೀಪ್ ಇನ್ನೊಂದು ಮುಖ]