Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಪೂರ್ವ'ದಲ್ಲಿ ಚಿರಯುವಕನಂತೆ ಕಂಗೊಳಿಸಲಿರುವ ರವಿಚಂದ್ರನ್
'ಕನಸುಗಾರ' ರವಿಚಂದ್ರನ್ ಅವರ ಕನಸಿನ ಕೂಸು 'ಅಪೂರ್ವ' ಸಿನಿಮಾ ಸೆನ್ಸಾರ್ ಆಗಿ ಬಿಡುಗಡೆಗೆ ಸಜ್ಜಾಗಿ ನಿಂತಿದ್ದು, ಈ ವಾರ (ಶುಕ್ರವಾರ, ಮೇ 27) ಬೆಂಗಳೂರಿನ 'ಕಪಾಲಿ' ಚಿತ್ರಮಂದಿರ ಸೇರಿದಂತೆ ಇಡೀ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ.
ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟನೆಯ ವಿಷಯಕ್ಕೆ ಬಂದರೆ ಇನ್ನೂ ಚಿರಯುವಕನಂತೆ ಕಾಣುತ್ತಾರೆ. 61 ವರ್ಷದ ಮುದುಕ ಮತ್ತು 19 ವರ್ಷದ ಯುವತಿಯ ಕಥೆಯಾಧರಿತ 'ಅಪೂರ್ವ' ಚಿತ್ರವನ್ನು ಪೂರ್ತಿಗೊಳಿಸಲು ರವಿಚಂದ್ರನ್ ಅವರಿಗೆ ಬರೋಬ್ಬರಿ 30 ತಿಂಗಳು ಹಿಡಿಯಿತಂತೆ.[ಅಂತೂ-ಇಂತೂ ರವಿಮಾಮನಿಗೆ ಕೂಡಿಬಂತು 'ಅಪೂರ್ವ' ಘಳಿಗೆ]
ಅಂದಹಾಗೆ ತುಂಬಾ ದಿನಗಳ ನಂತರ 'ಅಪೂರ್ವ' ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬಹಳ ಸಂತಸ ನೀಡಿದ ಸಿನಿಮಾ ಆಗಿದೆ. ಹಾಗೂ ಈ ಚಿತ್ರದಲ್ಲಿ ನಾನು 61 ವರ್ಷದವನಾದರೂ ಇನ್ನೂ ಸಣ್ಣ ಯುವಕನಂತೆ ಕಾಣಿಸುತ್ತೇನೆ ಎನ್ನುತ್ತಾರೆ ರವಿಮಾಮ.
'ಅಪೂರ್ವ' ಸಿನಿಮಾ ಅನುಭವದ ಮತ್ತು ಮುಗ್ದತೆಯ ಕಥೆ. ಇಲ್ಲಿ 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮ ಕಥೆಯ ಸನ್ನಿವೇಶಗಳನ್ನು ಹೆಣೆಯಲಾಗಿದೆ'.[ಅಭಿಮಾನಿಗಳು ಕೇಳಿದ 2 ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ]
'ಇಲ್ಲಿ ಪುರುಷ, ಜೀವನವನ್ನು ಸಾಕಷ್ಟು ಕಂಡಿದ್ದಾನೆ, ಯುವತಿ ಆಗಷ್ಟೇ ಹೊರ ಜಗತ್ತಿಗೆ ಕಾಲಿಡುತ್ತಿದ್ದಾಳೆ, ಇವರಿಬ್ಬರು ಒಟ್ಟಿಗೆ ಹೊರ ಜಗತ್ತಿಗೆ ಕಾಲಿಟ್ಟು, ಸಮಾಜದ ಸಂಪರ್ಕಕ್ಕೆ ಬಂದಾಗ ಏನಾಗುತ್ತದೆ ಅನ್ನೋದೇ ಇಡೀ 'ಅಪೂರ್ವ' ಚಿತ್ರದ ಕಥೆ' ಮತ್ತು ಇಬ್ಬರ ನಡುವಿನ ಸಂಬಂಧವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಎಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.[ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು]
'ಇದು ಹೊಸ ಪ್ರಕಾರದ ಸಿನಿಮಾ ಎಂದಿರುವ ರವಿಚಂದ್ರನ್ ಅವರು, ಈ ಚಿತ್ರದಲ್ಲಿ ಡ್ಯುಯೆಟ್ ಹಾಡು ಮತ್ತು ಹಾಸ್ಯ ದೃಶ್ಯಗಳನ್ನು ನಿರೀಕ್ಷಿಸಬೇಡಿ' ಎಂಬ ಎಚ್ಚರಿಕೆಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.
ನಟ ಕಮ್ ನಿರ್ದೇಶಕ ರವಿಚಂದ್ರನ್ ಅವರೇ ನಟಿಸಿ-ನಿರ್ದೇಶಿಸಿ-ಬಂಡವಾಳ ಹೂಡುತ್ತಿರುವ 'ಅಪೂರ್ವ' ಚಿತ್ರದಲ್ಲಿ ನವ ಪ್ರತಿಭೆ ಅಪೂರ್ವ ಅವರು ನಾಯಕಿಯಾಗಿ ಮಿಂಚಿದ್ದಾರೆ.