Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರ್ನಾಟಕ ಗಡಿ ದಾಟಿದ ಅಪ್ಪು ಪಪ್ಪುವಿನ ರಥಯಾತ್ರೆ
ಅದೇನೇ ಸರ್ಕಸ್ ಮಾಡಿದರೂ ಕನ್ನಡದಲ್ಲಿ ಈ 'ಅಪ್ಪು ಪಪ್ಪು' ಚಿತ್ರ ಗೆಲ್ಲಲೇ ಇಲ್ಲ. ಜನರು ಚಿತ್ರಮಂದಿರದ ಕಡೆ ಮುಖ ಹಾಕಲೇ ಇಲ್ಲ. ಒರಾಂಗ್ಟಾನ್ ಚಿತ್ರವನ್ನು ಪೋಸ್ಟರಿನಲ್ಲಿ ನೋಡಿಯೇ ಜನ ಖುಷಿಪಟ್ಟರೋ ಏನೋ, ಚಿತ್ರಮಂದಿರ ತುಂಬಲಿಲ್ಲ. ಮಾ ಸ್ನೇಹಿತ್ ನನ್ನು ಪ್ರೇಕ್ಷಕರು ಸ್ನೇಹಿತನನ್ನಾಗಿ ಮಾಡಿಕೊಳ್ಳಲೇ ಇಲ್ಲ.
ಮಾಸ್ಟರ್ ಸ್ನೇಹಿತ್ ಕನ್ನಡದಲ್ಲಿ ಇನ್ನೊಬ್ಬ ಮಾ ಕಿಶನ್ ಆಗುವ ಛಾನ್ಸ್ ಮಿಸ್ ಆಗಿಹೋಯಿತು. ಈಗ ಇದೇ ಚಿತ್ರ ತಮಿಳು, ತೆಲುಗು ಹಾಗೂ ಹಿಂದಿಯತ್ತ ಹೊರಟಿದೆ. ನಿರ್ಮಾಪಕ ಸೌಂದರ್ಯ ಜಗದೀಶ್, ಅಪ್ಪು-ಪಪ್ಪುವಿನ ತಮಿಳು ಡಬ್ಬಿಂಗ್ ಮುಗಿಸಿ, ಇದೇ ವಾರ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.
ಅಪ್ಪು ಎಂದರೆ ಮಾಸ್ಟರ್ ಸ್ನೇಹಿತ್. ಪಪ್ಪು ಎಂದರೆ ಒರಾಂಗ್ಟಾನ್. ಇವರಿಬ್ಬರೂ ಸೇರಿಕೊಂಡು ಚಿತ್ರದಲ್ಲಿರುವ ಇತರ ಪಾತ್ರಗಳಿಗೆ ಚಳ್ಳೇಹಣ್ಣು ತಿನ್ನಿಸುವುದೇ ಚಿತ್ರದ ಕಥೆ. ಕಥೆಗಿಂತಲೂ ಹೆಚ್ಚಾಗಿ ಇಲ್ಲಿ ಗಮನ ಸೆಳೆದದ್ದು ಒರಾಂಗ್ಟನ್ ಮತ್ತು ಸ್ನೇಹಿತ್ ಆಟ-ಒಡನಾಟ. ನಿರ್ದೇಶಕ ಅನಂತರಾಜು ಈ ಚಿತ್ರವನ್ನು ನಿರ್ದೇಶಿಸಿದ್ದರು.
ಇದರ ತಮಿಳು ಡಬ್ಬಿಂಗ್ ಹಕ್ಕುಗಳನ್ನು ನಿರ್ದೇಶಕ, ನಿರ್ಮಾಪಕ ರಾಮನಾರಾಯಣ್ ಖರೀದಿಸಿದ್ದರು. ಈಗ ಅವರು ಅಂದಕೊಂಡಂತೆ ಎಲ್ಲಾ ಮುಗಿಸಿ ಬಿಡುಗಡೆ ಮಾಡುತ್ತಿದ್ದಾರೆ. ಜೂನ್ 8, 2012 ರಂದು 'ಅಪ್ಪು ಪಪ್ಪು' ತಮಿಳುನಾಡಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂಬಂಧ ತಮಿಳು ಪತ್ರಿಕೆಗಳಲ್ಲಿ ಜಾಹೀರಾತು ಕಣ್ಣುಕುಕ್ಕುತ್ತಿದೆ.
ತಮಿಳು ಆವೃತ್ತಿಯ ಬಿಡುಗಡೆ ನಂತರ ತೆಲುಗು ಮತ್ತು ಹಿಂದಿ ಆವೃತ್ತಿಗಳೂ ಬಿಡುಗಡೆಯಾಗಲಿವೆ. ಹಿಂದಿ ಆವೃತ್ತಿಯಲ್ಲಿ ಕೆಲವು ದೃಶ್ಯಗಳನ್ನು ಮರು ಚಿತ್ರೀಕರಣ ಮಾಡುವ ಮಾತುಕತೆಯೂ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಅಂತಿಮಗೊಳ್ಳುವ ನಿರೀಕ್ಷೆಯಿದ್ದು ಎಲ್ಲೆಡೆಯಲ್ಲೂ ಅಪ್ಪು ಪಪ್ಪು ಕಾಣಿಸಲಿದ್ದಾರೆ.
ಚಿತ್ರದ ಪ್ರಮುಖ ಆಕರ್ಷಣೆ ಎನ್ನಿಸಿರುವ ಕಾಂಬೋಡಿಯಾದ ಒರಾಂಗ್ಟನ್ ಭಾರತಕ್ಕೆ ಸ್ಥಳಾಂತರಗೊಳ್ಳುವುದು ಸಾಧ್ಯವಿಲ್ಲದ ಕಾರಣ, ಅಲ್ಲೇ ಚಿತ್ರೀಕರಣ ಮಾಡಲಾಗಿತ್ತು. ಬಹಳ ವರ್ಷಗಳ ತರುವಾಯ ಈ ಚಿತ್ರದ ಮೂಲಕ 'ಅಬ್ಬಾಸ್' ಕನ್ನಡಕ್ಕೆ ಮರಳಿದ್ದರು.
ಮಾ ಸ್ನೇಹಿತ್ ಹೊರತಾಗಿ ಜಿಂಕೆಮರಿ ರೇಖಾ, ಕೋಮಲ್, ರಂಗಾಯಣ ರಘು, ಜೆನ್ನಿಫರ್ ಕೊತ್ವಾಲ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಒಟ್ಟಿನಲ್ಲಿ, ಕನ್ನಡದಲ್ಲಿ ಮ್ಯಾಜಿಕ್ ಮಾಡಲಾಗದ ಈ ಅಪ್ಪು ಪಪ್ಪು, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಏನಾಗುವುದೋ ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಕನ್ನಡ)