Don't Miss!
- News Neha Murder Case: ವೈಯಕ್ತಿಕ ಕಾರಣಕ್ಕೆ ವಿದ್ಯಾರ್ಥಿನಿ ನೇಹಾ ಕೊಲೆ ಎಂದ ಸಿಎಂ ಸಿದ್ದರಾಮಯ್ಯ
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಾಗರಹಾವು' ತಂಡವನ್ನ ಹಾಡಿ ಹೊಗಳಿದ ಎ.ಆರ್.ರೆಹಮಾನ್
ಕಷ್ಟ ಎಂದವರಿಗೆ ಸಹಾಯ ಮಾಡಲೂ ಹಿಂದು ಮುಂದು ನೋಡುವ ಕಾಲ ಇದು. ಅಂಥದ್ರಲ್ಲಿ, ಡಾ.ವಿಷ್ಣುವರ್ಧನ್ ಹೆಸರಲ್ಲಿ ಜನರಿಗೆ ಸಹಾಯ ಮಾಡಬೇಕು ಅಂತ ಮುಂದೆ ಬಂದವರು 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ.
'ನಾಗರಹಾವು' ಚಿತ್ರದ ಆಡಿಯೋ ರಿಲೀಸ್ ಹೆಸರಿನಲ್ಲಿ ದುಂದು ವೆಚ್ಚ ಮಾಡದೆ, ಅದೇ ದುಡ್ಡನ್ನ ಅಸಹಾಯಕ ಬಡ ರೋಗಿಗಳಿಗೆ ನೀಡುವ ಉದಾರ ಮನೋಭಾವ ತೋರಿದ ಸಾಜಿದ್ ಖುರೇಶಿ ಹಾಗೂ 'ನಾಗರಹಾವು' ಚಿತ್ರತಂಡವನ್ನ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹೊಗಳಿದ್ದಾರೆ. ['ಸಿಂಹ ಹಸ್ತ' ತಂಡದಿಂದ ಬಡ ರೋಗಿಗಳಿಗೆ ಸಹಾಯ ಹಸ್ತ]
ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೆ, ಸರ್ಕಾರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿರುವ ಬಡ ರೋಗಿಗಳಿಗೆ ಹಣ ಸಹಾಯ ಮಾಡುವ 'ನಾಗರಹಾವು' ಚಿತ್ರತಂಡದ 'ಸಿಂಹ ಹಸ್ತ' ಕಾರ್ಯಕ್ರಮಕ್ಕೆ ಎ.ಆರ್.ರೆಹಮಾನ್ ಕೂಡ ಕೈ ಜೋಡಿಸಿದ್ದಾರೆ. ಮುಂದೆ ಓದಿ....
50 ಸಾವಿರ ರೂಪಾಯಿ ನೀಡಿದ ಎ.ಆರ್.ರೆಹಮಾನ್
'ನಾಗರಹಾವು' ಚಿತ್ರತಂಡದ ಸಾಮಾಜಿಕ ಕಳಕಳಿ ಕಂಡು 'ಸಿಂಹ ಹಸ್ತ' ತಂಡದ ಮುಖಾಂತರ ಬಡ ರೋಗಿಗಳಿಗೆ 50 ಸಾವಿರ ರೂಪಾಯಿ ನೀಡಿದ್ದಾರೆ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್. [ಡಾ.ವಿಷ್ಣುವರ್ಧನ್ ಹೆಸರಿಗೆ ಅಕ್ಷರಶಃ ಶೋಭೆ ತರುವ ಕೆಲಸ ಇದು.!]
ಚೆಕ್ ಕೊಟ್ಟಿದ್ದಾರೆ
ತಮಗೆ ಎ.ಆರ್.ರೆಹಮಾನ್ ನೀಡಿರುವ 50 ಸಾವಿರ ರೂಪಾಯಿ ಚೆಕ್ ನ ನಿರ್ಮಾಪಕ ಸಾಜಿದ್ ಖುರೇಶಿ ಪ್ರೆಸ್ ಮೀಟ್ ನಲ್ಲಿ ತೋರಿಸಿದರು.
ರೆಹಮಾನ್ ಟ್ವೀಟ್ ಕೂಡ ಮಾಡಿದ್ದಾರೆ
'ಸಿಂಹ ಹಸ್ತ' ಕಾರ್ಯಕ್ರಮಕ್ಕೆ ಸಪೋರ್ಟ್ ಮಾಡಿರುವ ಕುರಿತು ಎ.ಆರ್.ರೆಹಮಾನ್ ಟ್ವೀಟ್ ಕೂಡ ಮಾಡಿದ್ದಾರೆ.
ಧನ್ಯವಾದ ಕೋರಿದ್ದಾರೆ ರಮ್ಯಾ
'ಸಿಂಹ ಹಸ್ತ' ಗೆ ಸಪೋರ್ಟ್ ಮಾಡಿರುವ ಎ.ಆರ್.ರೆಹಮಾನ್ ಗೆ ಧನ್ಯವಾದ ಅರ್ಪಿಸಿ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.
ಸಹಾಯ ಮಾಡಿರುವ ಇತರರು
'ಸಿಂಹ ಹಸ್ತ' ಕಾರ್ಯಕ್ರಮಕ್ಕೆ ಪೆನ್ ಮೂವೀಸ್ ವತಿಯಿಂದ 1 ಲಕ್ಷ, ಸುದೀಪ್ ಅಭಿಮಾನಿ ಜಗ್ಗಿ ಕಡೆಯಿಂದ 10 ಸಾವಿರ, ಸಲ್ಲಾಹುದ್ದೀನ್ ರಿಂದ 25 ಸಾವಿರ, ವಿಷ್ಣು ಸೇನಾ ಸಮಿತಿ ರಾಜಾಜಿನಗರ ದಿಂದ 11 ಸಾವಿರ ಹಾಗೂ ಕಿರಣ್ ಕುಮಾರ್ ಎಂಬುವವರಿಂದ 25 ಸಾವಿರ ರೂಪಾಯಿ ಸಂದಾಯವಾಗಿದೆ.
ನೀವೂ ಸಹಾಯ ಮಾಡಬಹುದು
ನಿಮಗೂ ಸಹಾಯ ಮಾಡುವ ಮನಸ್ಸು ಇದ್ದರೆ, ಕೆಳಕಂಡ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ...
Account Name : SIMHA HASTHA (Current ACC)
Bank Name : DCB Bank
Account Number : 07121300000480
IFSC CODE : DCBL0000071
Branch Name : Rajaji Nagar, Bengaluru
Number - +91 8197269231