Don't Miss!
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಲೋಕಸಭಾ ಚುನಾವಣೆ 2024: ಟಾಪ್ 10 ಶ್ರೀಮಂತ ಅಭ್ಯರ್ಥಿಗಳು ಇವರು
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತ್ಯಾಚಾರಿಗಳ ಮೂಳೆ ಮುರೀತೀನಿ: ಅರ್ಜುನ್ ಸರ್ಜಾ
ದಿನ ಬೆಳಗಾದ್ರೆ ಒಂದಲ್ಲೊಂದು ಅತ್ಯಾಚಾರ ಪ್ರಕರಣಗಳು ದೇಶವ್ಯಾಪಿ ವರದಿಯಾಗುತ್ತಲೇ ಇವೆ. ವಿದ್ಯೆಯನ್ನ ಬೋಧಿಸೋ ಶಿಕ್ಷಣ ಸಂಸ್ಥೆಗಳಲ್ಲೇ ಇಂತಹ ನೀಚ ಕೃತ್ಯಗಳು ನಡೆಯುತ್ತಿರುವುದು ದುರಂತವೇ ಸರಿ. ಶಿಕ್ಷಣ ಸಂಸ್ಥೆಗಳ ಇಂತಹ ದುರ್ಗತಿ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ವಿಫಲವಾಗ್ತಿರೋ ಶಿಕ್ಷಣ ವ್ಯವಸ್ಥೆ ಕುರಿತಾಗೇ ವರ್ಷಗಳ ಕಾಲ ಅಧ್ಯಯನ ಮಾಡಿ ನಟ ಅರ್ಜುನ್ ಸರ್ಜಾ 'ಅಭಿಮನ್ಯು' ಚಿತ್ರವನ್ನ ನಿರ್ದೇಶಿಸಿದ್ದಾರೆ.
ನಾಳಿನ
ಪ್ರಜೆಗಳಾಗೋ
ಮಕ್ಕಳ
ಶಿಕ್ಷಣಕ್ಕಾಗಿ
ಹೋರಾಡೋ
ಪ್ರತಿನಿಧಿಯಾಗಿ
ಅರ್ಜುನ್
ಸರ್ಜಾ
'ಅಭಿಮನ್ಯು'
ಚಿತ್ರದಲ್ಲಿ
ಕಾಣಿಸಿಕೊಂಡಿದ್ದಾರೆ.
ರೀಲ್
ನಲ್ಲಿ
ಮಕ್ಕಳಿಗಾಗಿ
ಹೋರಾಡೋ
ಅರ್ಜುನ್,
ರಿಯಲ್
ನಲ್ಲೂ
ಅತ್ಯಾಚಾರ
ಪ್ರಕರಣಗಳ
ವಿರುದ್ಧ
ಕೆಂಡಕಾರಿದ್ದಾರೆ.
'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ಅರ್ಜುನ್ ಸರ್ಜಾ, ''ಅತ್ಯಾಚಾರ ಪ್ರಕರಣಗಳ ಸುದ್ದಿ ಕೇಳಿದ್ರೆ ನನಗೆ ಕೆಂಡದಷ್ಟು ಕೋಪ ಬರುತ್ತೆ. 4-5 ವರ್ಷದ ಪುಟ್ಟ ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗ್ತಿರುವುದು ತುಂಬಾ ದುಃಖದ ಸಂಗತಿ. ಅಂತಹ ಕೃತ್ಯ ಎಸಗುವ ನೀಚರು ನನ್ನ ಕೈಗೆ ಸಿಕ್ಕರೆ, ಅವ್ರ ಮೈ ಮೂಳೆ ಮುರಿದು ಹಾಕ್ತೀನಿ'' ಅಂತ ತಮ್ಮ ಸಿಟ್ಟನ್ನು ಹೊರಹಾಕಿದರು.
''ಒಬ್ಬ ವ್ಯಕ್ತಿಯಿಂದ ಇಂತಹ ಪ್ರಕರಣಗಳು ನಿಲ್ಲೋದು ಸಾಧ್ಯವಿಲ್ಲ. ಕಾನೂನು ಪರಿಣಾಮಕಾರಿಯಾಗಿರಬೇಕು. ಅರಬ್ ದೇಶಗಳಲ್ಲಿರುವಂತೆ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆದ್ರೆ ಭಾರತದಲ್ಲಿ ಅಂತ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ'' ಅಂತ ಅರ್ಜುನ್ ಸರ್ಜಾ ಬೇಸರ ವ್ಯಕ್ತಪಡಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ ಎಕ್ಸ್ ಕ್ಲೂಸಿವ್)