Don't Miss!
- Automobiles 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪ್ಪಿ ಶಿಷ್ಯನ ಸಿನಿಮಾದಲ್ಲಿ ನಟಿಸುವ ಗೋಲ್ಡನ್ ಚಾನ್ಸ್ ನಿಮಗಾಗಿ...
ಉಪೇಂದ್ರ ರವರ ಬಳಿ ಶಿಷ್ಯರಾಗಿದ್ದ ನಿರ್ದೇಶಕ ದೀಪಕ್ ಮಧುವನಹಳ್ಳಿ ಈ ಹಿಂದೆ 'ಭಾಗ್ಯರಾಜ್' ಎಂಬ ಸಿನಿಮಾ ಮಾಡಿದ್ದು ನಿಮಗೆ ನೆನಪಿರಬಹುದು.'ಭಾಗ್ಯರಾಜ್' ನಂತರ ಭರವಸೆ ಮೂಡಿಸಿದ್ದ ದೀಪಕ್ ಈಗ ಹೊಸ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರವೇ 'ಕಳ್ ಬೆಟ್ಟದ ದರೋಡೆಕೋರರು'.
'ಕಳ್ ಬೆಟ್ಟದ ದರೋಡೆಕೋರರು' ಚಿತ್ರದ ಪ್ರಮುಖ ಪಾತ್ರಧಾರಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ ನಿರ್ದೇಶಕ ದೀಪಕ್ ಮಧುವನಹಳ್ಳಿ.
ಹೊಸ ಪ್ರತಿಭೆಗಳ ತಲಾಶ್ ನಲ್ಲಿ ತೊಡಗಿರುವ ನಿರ್ದೇಶಕರು, ಇದೇ ತಿಂಗಳು ಆಡಿಷನ್ ಕರೆದಿದ್ದಾರೆ. ಈ ಕುರಿತು ಒಂದು ವಿಡಿಯೋ ಕೂಡ ಬಿಡುಗಡೆ ಮಾಡಲಾಗಿದೆ.[ಉಪೇಂದ್ರ 50ನೇ ಚಿತ್ರದ ಬಗ್ಗೆ ಹಿಂದೆ ಕೇಳಿದ್ದೆಲ್ಲ ಸುಳ್ಳು, ಇದೇ ಸತ್ಯ!]
ಇದೊಂದು ಕ್ಯಾರೆಕ್ಟರ್ ಓರಿಯೆಂಟೆಡ್ ಸಿನಿಮಾವಾಗಿದ್ದು, ಚಿತ್ರದಲ್ಲಿ 35 ಪಾತ್ರಗಳು ಇರಲಿವೆಯಂತೆ. ಆ ಪಾತ್ರಗಳಿಗಾಗಿ ಆಡಿಷನ್ ಮೂಲಕ ಯುವ ಪ್ರತಿಭಾನ್ವಿತರನ್ನ ಸೆಲೆಕ್ಟ್ ಮಾಡ್ತಾರಂತೆ ಡೈರೆಕ್ಟರ್ ದೀಪಕ್.
ಅಂದಹಾಗೆ, ಮೇ 27 ರಂದು ಕತ್ರಿಗುಪ್ಪೆ ಸರ್ಕಲ್ ಬಳಿಯ ಗ್ರೀನ್ ಸ್ಟುಡಿಯೋದಲ್ಲಿ ಚಿತ್ರದ ಆಡಿಷನ್ ನಡೆಯಲಿದೆ.
'ಕಳ್ ಬೆಟ್ಟದ ದರೋಡೆಕೊರರು' ಒಂದು ಕಾದಂಬರಿ ಆಧಾರಿತ ಸಿನಿಮಾವಾಗಿದ್ದು, ಸಸ್ಪೆನ್ಸ್, ಥ್ರಿಲರ್ ಅಂಶಗಳು ಚಿತ್ರದಲ್ಲಿ ಇರಲಿವೆ. ಬ್ರಿಡ್ಜ್ ಫಿಲ್ಮ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ಚಿತ್ರಕ್ಕೆ ನಾಯಕಿಯಾಗಿ ಈಗಾಗಲೇ 'ರಾಧ ರಮಣ' ಧಾರಾವಾಹಿ ಖ್ಯಾತಿಯ ನಟಿ ಶ್ವೇತ.ಆರ್.ಪ್ರಸಾದ್ ಕಾಣಿಸಿಕೊಳ್ಳಲಿದ್ದಾರೆ. ಉಳಿದ ಪಾತ್ರಗಳ ಆಯ್ಕೆ ಆಗಬೇಕಿದೆ. ನಿಮ್ಮಲ್ಲಿ ಟ್ಯಾಲೆಂಟ್ ಇದ್ದು, ಸಿನಿಮಾದಲ್ಲಿ ಮಿಂಚುವ ಆಸಕ್ತಿ ಇದ್ದರೆ 'ಕಳ್ ಬೆಟ್ಟದ ದರೋಡೆಕೊರರು' ಚಿತ್ರದ ಆಡಿಷನ್ ನಲ್ಲಿ ಪಾಲ್ಗೊಳ್ಳಿ. ಯಾರಿಗೊತ್ತು... ನೀವೇ ನಾಳೆ ಬೆಳ್ಳಿಪರದೆ ಮೇಲೆ ಮಿಂಚಬಹುದು.