Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಧ್ಯಕ್ಷ'ನಿಗೆ ಗುನ್ನ ಇಡಲು ಹೋಗಿ ಹಿಗ್ಗಾಮುಗ್ಗಾ ಗೂಸಾ
ಶರಣ್ ಅಭಿನಯದ 'ಅಧ್ಯಕ್ಷ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಕಲೆಕ್ಷನ್ ಸಹ ಚೆನ್ನಾಗಿದೆ. ಚಿತ್ರ ಒಂದೇ ದಿನದಲ್ಲಿ ರು.1.5 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಗೊತ್ತೇ ಇದೆ. ಇಂತಹ ಸಂದರ್ಭದಲ್ಲೇ ಇನ್ನೊಂದು ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು
ಕನಕಪುರ
ರಸ್ತೆಯ
ಅರ್ಕಾವತಿ
ಚಿತ್ರಮಂದಿರದ
ಮಾಲೀಕ
ರಂಗನಾಥ್
ಸಿನಿಮಾದ
ಕಲೆಕ್ಷನ್
ಕಡಿಮೆ
ತೋರಿಸಿದ
ಆರೋಪದ
ಹಿನ್ನೆಲೆಯಲ್ಲಿ
ಚಿತ್ರದ
ವಿತರಕ
ಸಮರ್ಥ
ಪ್ರಸಾದ್
ಜೊತೆ
ಮಾತಿನ
ಚಕಮಕಿ
ನಡೆದಿದೆ.
ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರಸಾದ್ ಅವರು ಥಿಯೇಟರ್ ಮಾಲೀಕ ರಂಗನಾಥ್ ಮೇಲೆ ಕೈ ಮಾಡಿದ ಘಟನೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ (ಆ.18) ನಡೆಯಿತು. ರಂಗನಾಥ್ ಅವರ ಕಪಾಳಕ್ಕೆ ಹೊಡೆದ ಪ್ರಸಾದ್ ಅವರು ಅವರನ್ನು ಅತ್ತಿಂದಿತ್ತ ನೂಕಾಡಿದ ಘಟನೆಗೆ ಫಿಲಂ ಚೇಂಬರ್ ಸಾಕ್ಷಿಯಾಯಿತು.
'ಅಧ್ಯಕ್ಷ' ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದರೂ ಅರ್ಕಾವತಿ ಥಿಯೇಟರ್ ಮಾಲೀಕ ರಂಗನಾಥ್ ಅವರು ಸುಮಾರು 80 ಟಿಕೆಟ್ ಕಲೆಕ್ಷನ್ ಕಡಿಮೆ ತೋರಿಸಿದ್ದಾರೆ ಎಂಬುದು ಪ್ರಸಾದ್ ಆರೋಪ. ಈ ಹಿನ್ನೆಲೆಯಲ್ಲಿ ನಡೆದ ಮಾತಿನ ಚಕಮಕಿ ಕೈಕೈ ಮಿಲಾಯಿಸುವಂತೆ ಮಾಡಿತು.