Don't Miss!
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- News Heavy Rain: ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಬ್ಭಾಗ: ಭೂಕುಸಿತದಿಂದ ರಸ್ತೆ ಸಂಪರ್ಕ ಬಂದ್-ಎಲ್ಲಿ?
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಕನ್ನಡ 4: ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ 'ಮಸ್ತಾನ್' ಔಟ್
'ಬಿಗ್ ಬಾಸ್ ಕನ್ನಡ-4' ಆಟದ 9ನೇ ವಾರ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ 'ಮಸ್ತಾನ್' ಹೊರ ಬಿದ್ದಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಒಂಭತ್ತನೇ ವಾರ ಯಾರು ಹೊರಗೆ ಹೋಗುತ್ತಾರೆ ಎಂಬ ಕುತೂಹಲ ವೀಕ್ಷಕರನ್ನ ಕಾಡಿತ್ತು.
ವೀಕ್ಷಕರ ಈ ಕುತೂಹಲಕ್ಕೆ ತೆರೆ ಎಳೆದ ಕಿಚ್ಚ ಸುದೀಪ್, ''ವಾರದ ಕಥೆ ಕಿಚ್ಚನ ಜೊತೆ'' ಎಪಿಸೋಡ್ ನಲ್ಲಿ ನಿರ್ದೇಶಕ 'ಮಸ್ತಾನ್' ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂದು ಘೋಷಿಸಿದರು.[ವೈಲ್ಡ್ ಕಾರ್ಡ್ ಎಂಟ್ರಿ ಪಡೆದ 'ಮಸ್ತಾನ್' ಕಾರ್ ಡೀಲರ್ ಅಲ್ಲ, ಮತ್ಯಾರು? ]
6 ಜನ ನಾಮಿನೇಟ್ ಆಗಿದ್ದವರು ?
9ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು 6 ಜನ ನಾಮಿನೇಟ್ ಆಗಿದ್ದರು.[ಪ್ರಥಮ್ ಸೇಫ್ ಆದ್ರು, ಶೀತಲ್-ಶಾಲಿನಿ ಎಲ್ರ ಕೆಂಗಣ್ಣಿಗೆ ಗುರಿಯಾದ್ರು.! ]
ಯಾರು ಯಾರು ನಾಮಿನೆಟ್ ಆಗಿದ್ದರು?
ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ಸಂಜನಾ, ಶಾಲಿನಿ, ಭುವನ್ ಪೊನ್ನಣ್ಣ ಮತ್ತು ಮಸ್ತಾನ್ ಚಂದ್ರ ರೇಸ್ ನಲ್ಲಿದ್ದರು
'ಮಸ್ತಾನ್' ಔಟ್
ವೀಕ್ಷರಿಂದ ಕಡಿಮೆ ಎಸ್ ಎಂ ಎಸ್ ಪಡೆದಿದ್ದ ನಿರ್ದೇಶಕ ಮಸ್ತಾನ್ ಚಂದ್ರ 'ಬಿಗ್ ಬಾಸ್' ಮನೆಯಿಂದ ಹೊರ ಬಿದ್ದಿದ್ದಾರೆ.['ಬಿಗ್ ಬಾಸ್' ಮನೆಯಲ್ಲಿ ಒಮ್ಮೆಲೆ 3 ವೈಲ್ಡ್ ಕಾರ್ಡ್ ಎಂಟ್ರಿ.! ]
ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ 'ಮಸ್ತಾನ್'
ಮಸ್ತಾನ್, 'ಬಿಗ್ ಬಾಸ್' ಕನ್ನಡ 4 ಗೆ ಎಂಟ್ರಿ ಪಡೆದಿದ್ದು, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ. ಬಿಗ್ ಬಾಸ್ ಶುರುವಾಗಿ 8ನೇ ವಾರದಲ್ಲಿ ಮಸ್ತಾನ್ ಮನೆಗೆ ಪ್ರವೇಶ ಪಡೆದಿದ್ದರು. ಆದ್ರೆ, ದುರಾದೃಷ್ಟವಶಾತ್ ಒಂದೇ ವಾರದಲ್ಲಿ ಮನೆಯಿಂದ ಹೊರಬಂದಿದ್ದಾರೆ.
ಕಾರುಣ್ಯಗೆ ಶಿಕ್ಷೆ ಕೊಟ್ಟು ಹೋದ 'ಮಸ್ತಾನ್'
ಮನೆಯಿಂದ ಹೋರ ಹೋದ ಮಸ್ತಾನ್ ಗೆ 'ಬಿಗ್ ಬಾಸ್' ಅಧಿಕಾರವೊಂದನ್ನ ನೀಡಿದ್ದರು. ಇದರ ಅನುಸಾರ, ಮನೆಯ ಒಬ್ಬ ಸದಸ್ಯರು ಈ ವಾರ ಮನೆಯ ಕೆಲಸದವರಾಗಿ ಕಾರ್ಯನಿರ್ವಹಿಸಬೇಕು. ಹೀಗಾಗಿ ಮನೆ ಕೆಲಸಕ್ಕೆ ಕಾರುಣ್ಯ ರಾಮ್ ಅವರ ಹೆಸರನ್ನ ಮಸ್ತಾನ್ ಸೂಚಿಸಿದರು.