Don't Miss!
- News ಕನಕಪುರಕ್ಕೆ ಕಾಲಿಡಲು ಭಯ; ಕೋರ್ಟ್ಗೆ ಯತ್ನಾಳ್ ಹೇಳಿಕೆ!
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Finance ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭ, ದಿನಾಂಕ ವಿವರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬುಲ್ಲೆಟ್ ಪ್ರಕಾಶ್ ನಿರ್ಮಾಣದಲ್ಲಿ ದರ್ಶನ್ ಚಿತ್ರ
'ಕರಿ ಇಡ್ಲಿ'ಯಾಗಿ ಅನೇಕ ಸಿನಿಮಾಗಳಲ್ಲಿ ಕಾಮಿಡಿ ಕಚಗುಳಿ ಇಟ್ಟು ಎಲ್ಲರನ್ನ ನಗೆಗಡಲಲ್ಲಿ ತೇಲಿಸುವ ನಟ 'ಬುಲ್ಲೆಟ್' ಪ್ರಕಾಶ್. ಕಾಮಿಡಿ ಖಿಲಾಡಿಯಾಗಿ ಇಲ್ಲಿವರೆಗೂ ಗುರುತಿಸಿಕೊಂಡಿರುವ ಬುಲ್ಲೆಟ್ ಪ್ರಕಾಶ್ ಈಗ ಹೊಸ ಸಾಹಸಕ್ಕೆ ಕೈಹಾಕುತ್ತಿದ್ದಾರೆ.
ಅಂತಹ ಸಾಹಸ ಏನಪ್ಪಾ ಅಂದ್ರೆ, ಚಿತ್ರ ನಿರ್ಮಾಣಕ್ಕೆ ಬುಲ್ಲೆಟ್ ಪ್ರಕಾಶ್ ಕೈಹಾಕಿದ್ದಾರೆ. ಹೌದು, ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗಿನಿಂದಲೂ ನಿರ್ಮಾಪಕನಾಗುವ ಹುಮ್ಮಸ್ಸು ಹೊಂದಿದ್ದ ಬುಲ್ಲೆಟ್ ಪ್ರಕಾಶ್, ಈಗ ತಮ್ಮ ಆಸೆಯನ್ನ ಈಡೇರಿಸಿಕೊಳ್ಳುತ್ತಿದ್ದಾರೆ.
ಅಂದ್ಹಾಗೆ, ಬುಲ್ಲೆಟ್ ಪ್ರಕಾಶ್ ಚಿತ್ರ ನಿರ್ಮಾಣ ಮಾಡುತ್ತಿರುವುದು ಯಾರಿಗೆ ಗೊತ್ತಾ? ಬೇರಾರಿಗೂ ಅಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಗಿ. ವರ್ಷಗಳಿಂದಲೂ ದರ್ಶನ್ ಮತ್ತು ಬುಲ್ಲೆಟ್ ಪ್ರಕಾಶ್ ಆಪ್ತ ಸ್ನೇಹಿತರು. [ನೋಡಿ ಸ್ವಾಮಿ ಸ್ಯಾಂಡಲ್ ವುಡ್ ಅಪೂರ್ವ ಜೋಡಿ]
ದರ್ಶನ್ ಜೊತೆ 'ಕಲಾಸಿಪಾಳ್ಯ', 'ಸುಂಟರಗಾಳಿ' ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ದರ್ಶನ್ ಜೊತೆಯಾಗಿ ಬುಲ್ಲೆಟ್ ಪ್ರಕಾಶ್ ನಟಿಸಿದ್ದಾರೆ. ಈಗ ನಿರ್ಮಾಪಕನಾಗುವ ಬಯಕೆಯನ್ನ ಬುಲ್ಲೆಟ್ ಪ್ರಕಾಶ್ ವ್ಯಕ್ತಪಡಿಸಿದ ತಕ್ಷಣ, ಸ್ನೇಹಕ್ಕಾಗಿ ದರ್ಶನ್ ಓಗೊಟ್ಟು, ಕುಚ್ಚಿಕ್ಕು ಗೆಳೆಯನಿಗೆ ಕಾಲ್ ಶೀಟ್ ನೀಡಿದ್ದಾರೆ. [ದರ್ಶನ್ ಮಾರ್ಕೆಟ್ ಡೌನ್ ಅಂದೋರಿಗೆ ಇಲ್ಲಿದೆ ಉತ್ತರ]
ಸದ್ಯಕ್ಕೆ ದರ್ಶನ್ ಚಿತ್ರಕ್ಕೆ ಬುಲ್ಲೆಟ್ ಪ್ರಕಾಶ್ ಬಂಡವಾಳ ಹಾಕುತ್ತಿದ್ದಾರೆ ಅನ್ನೋದು ಬಿಟ್ಟರೆ, ಕಥೆ-ಚಿತ್ರಕಥೆ-ನಿರ್ದೇಶನ ಮತ್ತು ಬಾಕಿ ವಿಚಾರಗಳ ಬಗ್ಗೆ ನಿರ್ಧಾರವಾಗಿಲ್ಲ. ಅಷ್ಟಕ್ಕೂ, 'ಐರಾವತ' ಸಿನಿಮಾ ಮೊದಲು ಕಂಪ್ಲೀಟ್ ಆಗಿ ತೆರೆಗೆ ಬರಬೇಕು. ಅದು ಮುಗಿದ ಬಳಿಕ 'ಜಗ್ಗುದಾದಾ' ಮತ್ತು 'ವಿರಾಟ್' ಇದೆ. ಇವೆಲ್ಲಾ ಮುಗಿದ ಮೇಲೆ ಬುಲ್ಲೆಟ್ ಪ್ರಕಾಶ್-ದರ್ಶನ್ ಚಿತ್ರದ ಮಾತು.