Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾವ್ರ ಪಾದದ ಧೂಳಿಗೆ ನಾ ಸಮನಲ್ಲ, ದರ್ಶನ್
'ಅಂದು ರಾಜಣ್ಣ, ಇಂದು ರಾಯಣ್ಣ' ಎನ್ನುವ ಅಭಿಮಾನಿಗಳ ಘೋಷಣೆಯ ಬಗ್ಗೆ ಪಬ್ಲಿಕ್ ಟಿವಿ ವರದಿಗಾರರ ಜೊತೆ ಮಾತನಾಡುತ್ತಿದ್ದ ದರ್ಶನ್, ಅಂಥಹಾ ಮಹಾನ್ ನಟನ ಜೊತೆ ನನ್ನ ಹೋಲಿಕೆ ಬೇಡ. ಬಾಲ್ಯದಿಂದ ಅವರ ಚಿತ್ರ ನೋಡಿ ಬೆಳೆದವನು ನಾನು. ಅವರೆಲ್ಲಿ, ನಾನೆಲ್ಲಿ. ಅವರ ಪಾದದ ಧೂಳಿಗೆ ನಾನು ಸಮನಲ್ಲ ಎಂದು ಹೇಳಿದ್ದಾರೆ.
ಡಾ.ರಾಜ್ ಜೊತೆ ನನ್ನ ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಇಂದು ನಾವು ಏನು ಗಳಿಸಿದ್ದೇವೋ, ಪಡೆದಿದ್ದೇವೋ ಅದೆಲ್ಲಾ ನಮ್ಮ ಅಭಿಮಾನಿಗಳಿಂದ. ಅಭಿಮಾನಿಗಳು ನನಗೆ ತಂದೆ ತಾಯಿಗಿಂತಲೂ ಜಾಸ್ತಿ ಎಂದು ದರ್ಶನ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ದರ್ಶನ್ ಅವರ ಮನೆ ಮುಂದೆ ಭಾರೀ ಕಟೌಟ್ ಗಳು ರಾರಾಜಿಸುತ್ತಿವೆ. ಸರತಿಯಲ್ಲಿ ಬಂದು ಅಭಿಮಾನಿಗಳು ದರ್ಶನ್ ಗೆ ಹುಟ್ಟುಹಬ್ಬದ ಶುಭಾಷಯ ತಿಳಿಸುತ್ತಿದ್ದಾರೆ. ಮೆಚ್ಚಿನ ನಟನ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದಾರೆ.
ದರ್ಶನ್ ಹುಟ್ಟುಹಬ್ಬದ ದಿನವಾದ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ' ಬೃಂದಾವನ ' ಚಿತ್ರ ಸೆಟ್ಟೇರಲಿದೆ. ಸುರೇಶ್ ಗೌಡ, ಶ್ರೀನಿವಾಸ ಮೂರ್ತಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಕೆ ಮಾದೇಶ್ ನಿರ್ದೇಶಿಸುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಮ್ಮ ಕಡೆಯಿಂದ ಮತ್ತು ನಮ್ಮ ಓದುಗರ ಕಡೆಯಿಂದ 'ಜನ್ಮ ದಿನದ ಹಾರ್ಥಿಕ ಶುಭಾಷಯಗಳು". ಇನ್ನೂ ಎತ್ತರಕ್ಕೆ ಬೆಳೆಯಿರಿ, ಕನ್ನಡ ಚಿತ್ರರಂಗವನ್ನೂ ಬೆಳಿಸಿರಿ.