Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ದರ್ಶನ್ ಡಿಸ್ಚಾರ್ಜ್, ಒಂದು ವಾರ ವಿಶ್ರಾಂತಿ
ಚಾಲೆಂಜಿಂಗ್
ಸ್ಟಾರ್
ದರ್ಶನ್
ಅವರನ್ನು
ಶನಿವಾರ
(ಆ.3)
ಮಧ್ಯಾಹ್ನ
12
ಗಂಟೆಗೆ
ಬಿಜಿಎಸ್
ಆಸ್ಪತ್ರೆಯಿಂದ
ಡಿಸ್ಚಾರ್ಜ್
ಮಾಡಲಾಯಿತು.
'ಬೃಂದಾವನ'
ಚಿತ್ರೀಕರಣ
ವೇಳೆ
ಕುದುರೆ
ಮೇಲಿಂದ
ಬಿದ್ದು
ಗಾಯಗೊಂಡಿದ್ದ
ಅವರನ್ನು
ಚಿಕಿತ್ಸೆಗಾಗಿ
ಕೆಂಗೇರಿ
ಬಳಿಯ
ಬಿಜಿಎಸ್
ಅಸ್ಪತ್ರೆಗೆ
ದಾಖಲಿಸಲಾಗಿತ್ತು.
ತಮ್ಮ ನೆಚ್ಚಿನ ನಟನನ್ನು ನೋಡಲು ಆಸ್ಪತ್ರೆ ಬಳಿ ದರ್ಶನ್ ಅವರ ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಅವರ ಕುತ್ತಿಗೆಗೆ ಪಟ್ಟಿ ಕಟ್ಟಲಾಗಿತ್ತು. ಕತ್ತನ್ನು ಅತ್ತ ಇತ್ತ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಅವರು ಮಾಧ್ಯಮಗಳೊಂದಿಗೆ ಹಸನ್ಮುಖಿಯಾಗಿ ಮಾತನಾಡಿದರು.
ಒಂದು ವಾರದ ನಂತರ ದರ್ಶನ್ ಮತ್ತೆ ಆಕ್ಷನ್, ಫೈಟಿಂಗ್ ಮಾಡಲು ಅಡ್ಡಿಯಿಲ್ಲ ಎಂದಿದ್ದಾರೆ ವೈದ್ಯರು. 'ಬೃಂದಾವನ' ಚಿತ್ರೀಕರಣ ವೇಳೆ ದರ್ಶನ್ ಎರಡು ಬಾರಿ ಗಾಯಗೊಂಡಿದ್ದರು. ಐಸ್ ಲ್ಯಾಂಡ್ ನಲ್ಲಿ ಹಾಡಿನ ಚಿತ್ರೀಕರಣ ವೇಳೆ ಕುದುರೆ ಮೇಲಿಂದ ಬಿದ್ದಿದ್ದರು.
ಬಳಿಕ ಮೈಸೂರಿನಲ್ಲಿ ನಡೆದ ಡಿಶುಂ ಡಿಶುಂ ಸನ್ನಿವೇಶಗಳಲ್ಲಿ ಅವರಿಗೆ ಕೆಲವು ಪೆಟ್ಟುಗಳಾಗಿದ್ದವು. ಆದರೆ ದರ್ಶನ್ ಈ ನೋವುಗಳನ್ನೂ ಲೆಕ್ಕಿಸದೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಕಾರಣ ನೋವು ಉಲ್ಬಣಿಸಿತ್ತು. ಕಡೆಗೆ ಅವರು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. (ಒನ್ಇಂಡಿಯಾ ಕನ್ನಡ)