Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾಲೆಂಜಿಂಗ್ ಸ್ಟಾರ್ 'ವಿರಾಟ್' ದರ್ಶನ ಯಾವಾಗ?
ವಿರಾಟ್ ಅನ್ನೋ ಸಿನಿಮಾ ಸಾರಥಿಯ ನಂತ್ರ ಶುರುವಾದ ಅದ್ಧೂರಿ ಬಜೆಟ್ ನ ಸಿನಿಮಾ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕಿಂತ ಮೊದಲೇ 'ವಿರಾಟ್' ರಿಲೀಸ್ ಆಗ್ಬೇಕಿತ್ತು. ಚಿತ್ರದಲ್ಲಿ ಬಾಂಬೆಯ ವಿಧಿಷಾ, ಬೆಂಗಳೂರು ಬ್ಯೂಟಿ ಚೈತ್ರಾ ಸೇರಿದಂತೆ ದರ್ಶನ್ ಗೆ ಮೂವರು ಬೆಡಗಿಯರು ಜೋಡಿಯಾಗಿದ್ದ ಚಿತ್ರ.
ಹೀರೋಯಿನ್ ಒಬ್ಬರಿಗೆ ಹುಷಾರಿಲ್ಲದೆ ಒಂದಷ್ಟು ದಿನ ಚಿತ್ರೀಕರಣ ನಿಂತುಹೋಯ್ತು ಅಂತ ಸುದ್ದಿಯಾಯ್ತು. ಸಾರಥಿ ಸಕ್ಸಸ್ ನಿಂದ ಆಮೇಲೆ ದರ್ಶನ್ ಬ್ಯಾಕ್ ಟು ಬ್ಯಾಕ್ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬಿಜಿಯಾದ್ರು. ಈಗ ಮತ್ತೆ ವಿರಾಟ್ ಚಿತ್ರ ಶುರುವಾಗುವ ಸುದ್ದಿ ಬರ್ತಿದೆ. ಅದಕ್ಕೆ ಕೆಲವು ಅಡೆತಡೆಗಳು ಇವೆ.
ದರ್ಶನ್ ಓಕೆ ಅಂದ್ರೆ ಸಿನಿಮಾ ಶುರುವಾಗುತ್ತೆ. ಎಚ್ ವಾಸು ನಿರ್ದೇಶನದ ಚಿತ್ರವನ್ನು ಸಂದೇಶ್ ನಾಗರಾಜ್ ಹಾಗೂ ಟಾಲಿವುಡ್ ನಿರ್ಮಾಪಕ ರತ್ನಕುಮಾರ್ ನಿರ್ಮಿಸುತ್ತಿದ್ದಾರೆ. ಹಾಗಾದ್ರೆ ವಿರಾಟ್ ಕಥೆ ಏನು ಈ ಸ್ಲೈಡ್ ನಲ್ಲಿ ವಿವರಗಳಿವೆ ನೋಡ್ತಾ ಸಾಗಿ.
ವಿರಾಟ್ ಚಿತ್ರದ ಬಗ್ಗೆ ದರ್ಶನ್ ಬೇಸರ
ವಿರಾಟ್ ಚಿತ್ರತಂಡ ಎರಡು ವರ್ಷ ಕಾಯಿಸಿದ ಬಗ್ಗೆ ದರ್ಶನ್ ಗೆ ಬೇಸರವಿದೆ. ದರ್ಶನ್ ಮನಸ್ಸು ಮಾಡಿದ್ರೆ ಚಿತ್ರದ ಶೂಟಿಂಗ್ ಗೆ ಚಿತ್ರತಂಡ ರೆಡಿಯಿದೆ.
ಬಾಬಾಬುಡನ್ ಗಿರಿಯಲ್ಲಿ ರು.55 ಲಕ್ಷದ ಸೆಟ್
ವಿರಾಟ್ ಚಿತ್ರತಂಡ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ರು.55 ಲಕ್ಷ ವೆಚ್ಚದ ಅದ್ಧೂರಿ ಸೆಟ್ ಹಾಕಿ ಶೂಟ್ ಮಾಡಿತ್ತು.
ಸ್ಟೈಲಿಷ್ ಇಮೇಜ್ ಕೊಡೋ ಚಿತ್ರ
ದರ್ಶನ್ ಗೆ ಸ್ಟೈಲಿಷ್ ಇಮೇಜ್ ಕೊಡೋ ಚಿತ್ರ ವಿರಾಟ್.
ಚಿಂಗಾರಿಗಿಂತಲೂ ಮೊದಲೇ ಬರಬೇಕಿತ್ತು
ಅಂದುಕೊಂಡಂತೆ ಆಗಿದ್ರೆ ಹರ್ಷ ಡೈರೆಕ್ಷನ್ ನ 'ಚಿಂಗಾರಿ'ಗಿಂತ ಮೊದಲು ವಿರಾಟ್ ರಿಲೀಸ್ ಆಗ್ಬೇಕಿತ್ತು.
ವಿರಾಟ್ ಗೂ ಮುಂಚೆ ಬಂದು ಯಶಸ್ವಿಯಾದ ಚಿತ್ರಗಳು
ಚಿಂಗಾರಿಯ ನಂತರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬುಲ್ ಬುಲ್ ಯಶಸ್ವಿಯಾದ್ವು.
ಬೃಂದಾವನವೂ ರಿಲೀಸ್ ಆಯ್ತು
ಈಗ ಬೃಂದಾವನ ಕೂಡ ರಿಲೀಸಾಗಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಈಗ ಅಂಬರೀಷ ಚಿತ್ರ ಸೆಟ್ಟೇರುತ್ತಿದೆ
ದರ್ಶನ್ ಈಗ ಮಹೇಶ್ ಸುಖಧರೆ ನಿರ್ದೇಶನದ ಅಂಬರೀಷ ಚಿತ್ರದಲ್ಲಿ ಬಿಜಿ.
ಅಂಬರೀಷನ ಬಳಿಕ ಐರಾವತ
ಅಂಬರೀಷ ನಂತರ ಅರ್ಜುನ್ ನಿರ್ದೇಶನದ ಐರಾವತ ಚಿತ್ರ ಶೂಟಿಂಗ್ ಶುರು ಮಾಡಲಿದೆ.
ಹಾಗಾದ್ರೆ ವಿರಾಟ್ ದರ್ಶನ ಯಾವಾಗ?
ಇವೆಲ್ಲದ್ರ ನಡುವೆ ದರ್ಶನ್ ಮನಸ್ಸು ಮಾಡಿ ಬಿಡುವು ಮಾಡ್ಕೊಂಡ್ರೆ ದರ್ಶನ್ ರ 'ವಿರಾಟ್' ರೂಪ ನೋಡಬಹುದು.