Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎನ್ ಎಂ ಸುರೇಶ್ ವಿರುದ್ಧ ವಂಚನೆ ದೂರು ದಾಖಲು
'ಅದ್ವೈತ' ಸಿನಿಮಾದ ಆಡಿಯೋ ರೈಟ್ಸು ತನಗೆ ಕೊಡುವುದಾಗಿ ಹೇಳಿ, ಕೊನೆಗೆ ಬೇರೆಯವರಿಗೆ ಮಾರಲಾಗಿದೆ ಎಂದು ಆರೋಪಿಸಿ ಸ್ವರ್ಣಾ ಆಡಿಯೋದ ಮಾಲೀಕ ನವೀನ್ ಯಜಮಾನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅವರ ದೂರಿನಲ್ಲಿ 'ಗಾಂಧಿಸ್ಮೈಲ್ಸ್' ನಿರ್ದೇಶಕ ರಾಘವೇಂದ್ರ ಕಾಮತ್ ಹೆಸರು ಕೂಡಾ ಇರುವುದು ವಿಶೇಷ.
ರಾಘವೇಂದ್ರ ಕಾಮತ್ ಪ್ರಕಾರ ಎನ್ ಎಮ್ ಸುರೇಶ್ ಎರಡೂವರೆ ವರ್ಷಗಳ ಹಿಂದೆ ಅವರ ಬಳಿಯಿಂದ ಇಪ್ಪತ್ತೆರಡು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದಕ್ಕೆ ಪ್ರತಿಯಾಗಿ 'ಅದ್ವೈತ' ಚಿತ್ರದ ಆಡಿಯೋ- ವೀಡಿಯೋ ಹಕ್ಕುಗಳನ್ನ ಕಾಮತ್ಗೆ ಕೊಡುವುದಾಗಿ ಸುರೇಶ್ ಬರೆದುಕೊಟ್ಟಿದ್ದರಂತೆ. ಅದ್ನನೇ ನಂಬಿಕೊಂಡು ಕಾಮತ್ 'ಅದ್ವೈತ' ಚಿತ್ರದ ಆಡಿಯೋ ಹಕ್ಕನ್ನ ಸ್ವರ್ಣಾ ಸಂಸ್ಥೆಗೆ ಮಾರಿಕೊಂಡಿದ್ದರು. ಆದರೆ ಪ್ರಸ್ತುತ ಏನಾಗಿದೆ ಎಂದರೆ, ಸುರೇಶ್ ತಮ್ಮ ಚಿತ್ರದ ಆಡಿಯೋ ಹಕ್ಕನ್ನ ಅಶ್ವಿನಿ ಮೀಡಿಯಾ ನೆಟ್ವರ್ಕ್ಸ್ಗೆ ಮಾರಿಕೊಂಡಿದ್ದಾರೆ.
ಅಶ್ವಿನಿ ಮೀಡಿಯಾ ಬ್ಯಾನರ್ನಲ್ಲೇ ಮೊನ್ನೆ ಚಿತ್ರದ ಧ್ವನಿಸುರುಳಿ ಸಮಾರಂಭ ಕೂಡಾ ನಡೆದುಹೋಗಿದೆ. ಹಾಗಾಗಿ ರಾಘವೇಂದ್ರ ಕಾಮತ್ ಮತ್ತು ಎನ್ ಎಂ ಸುರೇಶ್ ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಸ್ವರ್ಣಾ ಆಡಿಯೋ ಮಾಲೀಕ ನವೀನ್ ದೂರು ದಾಖಲಿಸಿದ್ದಾರೆ. ಎನ್ ಎಂ ಸುರೇಶ್ ಮಾತು ತಪ್ಪಿದ್ದಾರೆ ಅನ್ನೋದು ಈಗ ಕಾಮತ್ ಕೊಡುತ್ತಿರುವ ಹೇಳಿಕೆ. ಆದರೆ ಸುರೇಶ್ ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ.
ಕಾಮತ್ ನನ್ನ ಸಹಿ, ಲೆಟರ್ ಹೆಡ್ನ್ನ ಫೋರ್ಜರಿ ಮಾಡಿ ದಾಖಲೆಗಳನ್ನ ಸೃಷ್ಟಿಸಿಕೊಂಡಿದ್ದಾರೆ. ಅದನ್ನೇ ಸ್ವರ್ಣಾ ಆಡಿಯೋಗೆ ಮಾರಿ ಅವರನ್ನೂ ಮೋಸ ಮಾಡಿದ್ದಾರೆ. ಇದಕ್ಕೆಲ್ಲ ಕಾಮತ್ರೇ ಕಾರಣ. ಸ್ವರ್ಣಾ ಆಡಿಯೋದವರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಸುರೇಶ್. ಸತ್ಯ ಇನ್ನಷ್ಟೇ ಬಯಲಿಗೆ ಬರಬೇಕು. (ಒನ್ಇಂಡಿಯಾ ಕನ್ನಡ)