Don't Miss!
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ಯದಲ್ಲೇ ಚೇತನ್ ಚಂದ್ರ 'ಕುಂಭರಾಶಿ'ಯ ದರ್ಶನ!
'ಕುಂಭರಾಶಿ' ಚಿತ್ರಕ್ಕಾಗಿ ತಮ್ಮ ಬಾಡಿಯನ್ನು ಕಷ್ಟಪಟ್ಟು ಹಾಗೂ ಇಷ್ಟಪಟ್ಟು ಏಯ್ಟ್ ಪ್ಯಾಕ್ ಮಾಡಿಕೊಂಡಿರುವ ಚೇತನ್ ಚಂದ್ರ ಅವರಿಗೆ ಇಲ್ಲಿಯವರೆಗೂ ನಡೆದ ಚಿತ್ರೀಕರಣ ಖುಷಿ ನೀಡಿದೆಯಂತೆ. "ಹೊಸಬರ ತಂಡವಾದರೂ ಚಿತ್ರವನ್ನು ಅಂದುಕೊಂಡಂತೆ ಮಾಡಿದ್ದಾರೆ, ನನಗೆ ಈ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಯಿದೆ ಎಂದಿದ್ದಾರೆ ನಟ, 'ಕುಂಭರಾಶಿ' ನಾಯಕ ಚೇತನ್ ಚಂದ್ರ. ಅಂದಹಾಗೆ, ನವ ನಿರ್ದೇಶಕ ಚಂದ್ರಹಾಸ ನಿರ್ದೇಶನದ ಈ ಚಿತ್ರದ ನಾಯಕಿ ರೂಪಿಕಾ.
ಈ ಚಿತ್ರದ ಉಳಿದೆರಡು ಹಾಡುಗಳ ಚಿತ್ರೀಕರಣವನ್ನು ರಾಜರಾಜೇಶ್ವರಿ ನಗರದ ಭೂತ ಬಂಗಲೆಯೊಂದರಲ್ಲಿ ಹಾಗೂ ನಂದಿನಿ ಲೇಔಟ್ ನ ಸುತ್ತಮತ್ತ ಚಿತ್ರೀಕರಿಸಲು ನಿರ್ದೇರಿಸಿದೆ ಚಿತ್ರತಂಡ. ಆ ಬಳಿಕ ಅಂತಿಮ ಹಂತದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ ಚಿತ್ರವನ್ನು ತೆರೆಗೆ ತರುವ ತರಾತರಿ ನಡೆಸಲಾಗಿದೆ. ಅಂದುಕೊಂಡಂತೆ ನಡೆದರೆ ಇನ್ನೊಂದು ತಿಂಗಳಲ್ಲಿ ಚಿತ್ರ ಬಿಡುಗಡೆಗೆ ರೆಡಿ.
ಚಿತ್ರದಲ್ಲಿ ಗುರುರಾಜ್ ಹೊಸಕೋಟೆ ಪ್ರಮುಖವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ ಎಂಬುದು ಚೇತನ್ ಚಂದ್ರರ ಮತ್ತೊಂದು ವಿಶೇಷ ಹೇಳಿಕೆ. ಚೇತನ್ ಚಂದ್ರ ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದವರು ಚಿತ್ರದ ಸಂಕಲನಕಾರ ನಾಗೇಂದ್ರ ಅರಸ್. ಇನ್ನು ಚೇತನ್ ಚಂದ್ರರ ಏಯ್ಟ್ ಪ್ಯಾಕ್ ತರಬೇತುದಾರ ಪಾನಿಪುರಿ ಕಿಟ್ಟಿ ಚಿತ್ರದ "ಅಗತ್ಯಕ್ಕೆ ತಕ್ಕಂತೆ ಚೇತನ್ ರನ್ನು ತರಬೇತಿಗೊಳಿಸಿದ ಖುಷಿ ನನಗಿದೆ. ಚೇತನ್ ತುಂಬಾ ಒಳ್ಳೆಯ ವಿದ್ಯಾರ್ಥಿ" ಎಂದರು.
ಈ ಚಿತ್ರದಲ್ಲಿ ಪತ್ರಕರ್ತ ಹಾಗೂ ನಟ ಯತಿರಾಜ್ ಅವರು ಮಹತ್ವದ ಪಾತ್ರವೊಂದನ್ನು ಪೋಷಿಸಿದ್ದಾರೆ. ಚಿತ್ರದ ಕೆಲವು ಕ್ಲಿಪ್ಸ್ ಹಾಗೂ ಒಂದು ಹಾಡನ್ನು ಪತ್ರಕರ್ತರಿಗೆ ತೋರಿಸಲಾಯಿತು. "ಹಾಡುಗಳು ಹಾಗೂ ದೃಶ್ಯಗಳು ಬಹಳ ಚೆನ್ನಾಗಿವೆ. ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲೇಬೇಕು" ಎಂಬ ಅಭಿಪ್ರಾಯ ಅಲ್ಲಿ ವ್ಯಕ್ತವಾಯ್ತು. ಅದೇನೇ ಇರಲಿ, ಹೊಸಬರ ಚಿತ್ರಗಳೇ ಗೆಲ್ಲುತ್ತಿರುವ ಈ ವೇಳೆಯಲ್ಲಿ ಇಂಥ ಹೊಸ ಪ್ರಯತ್ನದ ಬಗ್ಗೆ ನಿರೀಕ್ಷೆ ಮೂಡುವುದರಲ್ಲೂ ಅರ್ಥವಿದೆ. (ಒನ್ ಇಂಡಿಯಾ ಕನ್ನಡ)