Don't Miss!
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿ ರಾಜೇಂದ್ರ ಬಾಬು ನಿಧನ: ಶಿವಣ್ಣ ಚಿತ್ರಕ್ಕೆ ಹೊಸ ಸಾರಥಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸಂಸದೆ ರಮ್ಯಾ ಪ್ರಮುಖ ಭೂಮಿಕೆಯಲ್ಲಿರುವ ಆರ್ಯನ್ ಚಿತ್ರ ಸೆಟ್ಟೇರಿದಾಗಿನಿಂದ ಸದಾ ಸುದ್ದಿಯಲ್ಲಿರುವ ಚಿತ್ರ. ಅಕ್ಟೋಬರ್ 2012ರಿಂದ ಚಿತ್ರೀಕರಣ ಆರಂಭವಾಗಿದ್ದ ಈ ಚಿತ್ರಕ್ಕೆ ನಂತರದ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗಿ ಚಿತ್ರೀಕರಣ ಅರ್ಧದಲ್ಲೇ ನಿಂತಿತ್ತು.
ಈ ತೊಂದರೆಯಿಂದ ಹೊರಬಂದ ನಂತರ ನಿರ್ಮಾಪಕರಿಗೆ ರಮ್ಯಾ ಕಾಲ್ ಶೀಟ್ ಸಿಕ್ಕಿರಲಿಲ್ಲ. ರಮ್ಯಾ, ಶಿವಣ್ಣ ಕಾಲ್ ಶೀಟ್ ಸಿಕ್ಕಿದ ಮೇಲೆ ನವೆಂಬರ್ ಐದರಿಂದ ಹಾಡಿನ ಚಿತ್ರೀಕರಣ ಬೆಂಗಳೂರಿನ ಮಾರತಹಳ್ಳಿಯಲ್ಲಿ ನಿಗದಿಯಾಗಿತ್ತು.
ಆದರೆ ಚಿತ್ರತಂಡಕ್ಕೆ ಮತ್ತೊಂದು ಆಘಾತ ಕಾದಿತ್ತು. ಅದು ಚಿತ್ರದ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಅಕಾಲಿಕ ಮರಣ. ಬಾಬು ನಿಧನದಿಂದ ಇಡೀ ಚಿತ್ರತಂಡ ತಬ್ಬಿಬ್ಬಾಗಿತ್ತು. (ನಿರ್ದೇಶಕ ಡಿ. ರಾಜೇಂದ್ರ ಬಾಬು ವಿಧಿವಶ)
ಚಿತ್ರದ ಶೂಟಿಂಗ್ ಬಹುಪಾಲು ಮುಗಿದಿತ್ತು. ಹಾಡಿನ ಚಿತ್ರೀಕರಣವೊಂದೇ ಬಾಕಿ ಇತ್ತು. ನಾಯಕ ಮತ್ತು ನಾಯಕಿಯ ಕಾಲ್ ಶೀಟ್ ಕೂಡಾ ಸಿಕ್ಕಿತ್ತು. ಆದರೆ ಬಾಬು ನಿಧನದಿಂದ ಚಿತ್ರೀಕರಣ ನಿಲ್ಲಿಸಿದ್ಡೇವೆ. ರಾಜೇಂದ್ರ ಬಾಬು ಅವರು ಬಹಳಷ್ಟು ಇಷ್ಟಪಟ್ಟು ಮಾಡುತ್ತಿದ್ದ ಸಿನಿಮಾವಿದು. ಅವರ ಜಾಗಕ್ಕೀಗ ಸೂಕ್ತ ನಿರ್ದೇಶಕರ ಹುಡುಕಾಟದಲ್ಲಿದ್ದೇವೆ, ಶಿವಣ್ಣ ಕೂಡಾ ಇದಕ್ಕೆ ಸಹಕರಿಸುತ್ತಿದ್ದಾರೆಂದು ನಿರ್ಮಾಪಕ ಡಿ ಕಮರ್ ಹೇಳಿದ್ದರು.
ಯಾರು ಆರ್ಯನ್ ಚಿತ್ರಕ್ಕೆ ಹೊಸ ಸಾರಥಿ? ಸ್ಲೈಡಿನಲ್ಲಿ..
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್, ರಮ್ಯಾ, ಶರತ್ ಕುಮಾರ್, ಬುಲೆಟ್ ಪ್ರಕಾಶ್, ವಿನಯ್ ಪ್ರಸಾದ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಡಿ ಕಮರ್ ಮತ್ತು ನರ್ಗೀಸ್ ಬಾಬು ಚಿತ್ರದ ನಿರ್ಮಾಪಕರು.
ಹೊಸ ನಿರ್ದೇಶಕ
ಡಿ ರಾಜೇಂದ್ರ ಬಾಬು ಜಾಗಕ್ಕೆ, ನಿರ್ಮಾಪಕರು ಚಿ. ಗುರುದತ್ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ. ಗುರುದತ್ ಈ ಹಿಂದೆ ಮೂರು ಚಿತ್ರವನ್ನು ನಿರ್ದೇಶಿಸಿದ್ದರು. ನಿರ್ದೇಶಕನ ಆಯ್ಕೆಗೆ ಬಹಳ ಕಸರತ್ತು ನಡೆಸಿದ ನಂತರ ನಿರ್ಮಾಪಕರು ಗುರುದತ್ ಹೆಸರನ್ನು ಅಂತಿಮಗೊಳಿಸಿದ್ದಾರೆ.
ಗುರುದತ್
ಚಿ ಉದಯಶಂಕರ್ ಅವರ ಪುತ್ರ ಚಿ ಗುರುದತ್ 1995ರಲ್ಲಿ ಸಮರ ಚಿತ್ರವನ್ನು ನಿರ್ದೇಶಿಸಿದ್ದರು. ಶಿವರಾಜ್ ಕುಮಾರ್, ದೇವರಾಜ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. ಇದು ಗುರುದತ್ ಅವರ ಚೊಚ್ಚಲ ನಿರ್ದೇಶನದ ಚಿತ್ರ.
ದತ್ತ
ಚಾಲೆಂಜಿಂಗ್ ಸ್ಟಾರ್ ದರ್ಶನ್, ರಮ್ಯಾ, ಕೋಮಲ್, ಶ್ರೀನಾಥ್, ವಿನಯಾ ಪ್ರಸಾದ್, ಅವಿನಾಶ್ ಪ್ರಮುಖ ತಾರಾಗಣದಲ್ಲಿದ್ದ ದತ್ತ ಚಿತ್ರವನ್ನು ಗುರುದತ್ ನಿರ್ದೇಶಿಸಿ, ನಿರ್ಮಿಸಿದ್ದರು. ಜನಾರ್ಧನ ಮಹರ್ಷಿ ಕಥಾದಾರಿತ ಈ ಚಿತ್ರಕ್ಕೆ ಆರ್ ಪಿ ಪಟ್ನಾಯಕ್ ಸಂಗೀತ ನೀಡಿದ್ದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತ್ತು.
ಕಾಮಣ್ಣನ ಮಕ್ಕಳು
2008ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನೂ ಗುರುದತ್ ನಿರ್ದೇಶಿಸಿದ್ದರು. ಸುದೀಪ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ದೀಪು, ಸಾಧು ಕೋಕಿಲ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಮಲಯಾಳಂ ಚಿತ್ರದ ರಿಮೇಕ್.