Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಗೆ ಸಿಎಂ ರಿಂದ ಸನ್ಮಾನ
ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ನಟ ಸಂಚಾರಿ ವಿಜಯ್ ಗೆ ಇಂದು ಸಿ.ಎಂ.ಸಿದ್ಧರಾಮಯ್ಯ ಸನ್ಮಾನ ಮಾಡಿದರು. ಇವತ್ತು ಮಧ್ಯಾಹ್ನ ವಿಧಾನಸೌಧದಲ್ಲಿ ನಟ ಸಂಚಾರಿ ವಿಜಯ್ ಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು.
ಅಸಲಿಗೆ ನಟ ಸಂಚಾರಿ ವಿಜಯ್ ಗೆ ಮುಖ್ಯಮಂತ್ರಿಗಳಿಂದ ಆಹ್ವಾನ ಇರ್ಲಿಲ್ಲ. ತಮಗೆ ರಾಷ್ಟ್ರ ಪ್ರಶಸ್ತಿ ನೀಡಿದ 'ನಾನು ಅವನಲ್ಲ ಅವಳು' ಚಿತ್ರವನ್ನ ಸಿ.ಎಂ ವೀಕ್ಷಿಸಬೇಕು ಅನ್ನುವ ಆಶಯ ಸಂಚಾರಿ ವಿಜಯ್ ಗಿದೆ. ಈ ಬಗ್ಗೆ ಮನವಿ ಮಾಡುವುದಕ್ಕೆ ಆಪ್ತರ ಮುಖಾಂತರ ಮುಖ್ಯಮಂತ್ರಿಗಳನ್ನ ಸಂಚಾರಿ ವಿಜಯ್ ಇಂದು ಭೇಟಿ ಮಾಡಿದರು.
ಸಂಚಾರಿ ವಿಜಯ್ ಅವರ ಮನವಿ ಮೇರೆಗೆ 'ನಾನು ಅವನಲ್ಲ ಅವಳು' ಚಿತ್ರವನ್ನ ವೀಕ್ಷಿಸುವುದಾಗಿ ಸಿ.ಎಂ ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ತಮ್ಮ ಅತ್ತ್ಯುತ್ತಮ ನಟನೆಗೆ ಸಂದ ಪುರಸ್ಕಾರಕ್ಕೆ ಸಿ.ಎಂ, ತಮ್ಮ ಚೇಂಬರ್ ನಲ್ಲೇ ಸನ್ಮಾನಿಸಿದರು. ಸಚಿವ ಆಂಜನೇಯ ಉಪಸ್ಥಿತರಿದ್ದರು. [ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!]
ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡಿದ ಸಂಚಾರಿ ವಿಜಯ್, ''ಸಮಾಜಕ್ಕೆ ಉತ್ತಮ ಸಂದೇಶ ಸಾರುವ 'ನಾನು ಅವನಲ್ಲ ಅವಳು' ಚಿತ್ರವನ್ನ ಮುಖ್ಯಮಂತ್ರಿಗಳು ನೋಡಲಿ ಅನ್ನೋದು ನನ್ನ ಆಶಯವಾಗಿತ್ತು. ಅವರನ್ನ ಕೇಳಿದ್ದೀನಿ. ನೋಡುತ್ತೇನೆ ಅಂದಿದ್ದಾರೆ. ಸನ್ಮಾನ ಮಾಡಿದ್ದು ಖುಷಿಯಾಯ್ತು'' ಅಂದರು.