Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಬ್ಬಿಂಗ್, ರೀಮೇಕ್ ಎರಡೂ ಬೇಡ: ಕ್ರೇಜಿ ಸ್ಟಾರ್
ಕ್ರೇಜಿಸ್ಟಾರ್ ಮುಹೂರ್ತದ ವೇಳೆ, ರವಿಚಂದ್ರನ್ ಹೇಳಿದ ಮಾತುಗಳು ಹೀಗಿವೆ..."ಡಬ್ಬಿಂಗ್ ಬರುವುದು ಬೇಡ, ಜೊತೆಗೆ ರೀಮೇಕ್ ಮಾಡುವುದನ್ನೂ ಕೂಡ ನಿಲ್ಸಿ. ಕನ್ನಡ ಚಿತ್ರರಂಗವೇನೂ ಕೈಲಾಗದ ಸ್ಥಿತಿಯಲ್ಲಿಲ್ಲ. ಡಬ್ಬಿಂಗ್ ಬಂದ್ರೆ ಇಡೀ ಕನ್ನಡ ಪರಿಸರ ನಾಶವಾಗುತ್ತೆ. ವೈಯಕ್ತಿಕವಾಗಿ ನನಗೇನೂ ನಷ್ಟವಿಲ್ಲ. ಅದನ್ನು ಎದುರಿಸೋ ಶಕ್ತಿ ನನಗಿದೆ. ಅದಕ್ಕಿಂತ ಒಳ್ಳೆ ಸಿನಿಮಾ ಮಾಡಿ ತೋರಿಸ್ತೀನಿ".
ಟಿವಿ ಚಾನಲ್ ಗಳು ದುಡ್ಡಿಗೋಸ್ಕರ ಯಾವ್ಯಾವುದೋ ಭಾಷೆಯ ಕಾರ್ಯಕ್ರಮಗಳನ್ನು ತಂದು ಡಬ್ ಮಾಡಿ ಪ್ರಸಾರ ಮಾಡುತ್ತಿವೆ. ಅಷ್ಟೇ ಅಲ್ಲ, ಸಿನಿಮಾ ಸೆಟಲೈಟ್ ಹಕ್ಕು ಖರೀದಿಸುವುದನ್ನು ಮೊದಲು ನಿಲ್ಲಿಸಲಿ. ಸಿನಿಮಾ ಗೆದ್ದ ಮೇಲೆ ತಗೊಳ್ಳಿ. ನನ್ನ ಸಿನಿಮಾ ಕೂಡ ಗೆದ್ರೆ ಮಾತ್ರ ಸೆಟಲೈಟ್ ಖರೀದಿಸಲಿ.
ಅದು ಬಿಟ್ಟು, ಟಿವಿಗಳು ಸಿಕ್ಕ ಸಿಕ್ಕ ಸಿನಿಮಾ ಖರೀದಿಸುವುದರಿಂದ ಸಿನಿಮಾ ಅನುಭವ, ಪ್ರೀತಿ ಇಲ್ಲದವರೂ ಸಿನಿಮಾ ಮಾಡುತ್ತಿದ್ದಾರೆ. ನಿಜವಾಗಿಯೂ ಸಿನಿಮಾ ಪ್ರೀತಿಸುವ ನಿರ್ಮಾಪಕರು ನಮ್ಮಲ್ಲಿ ಎಷ್ಟಿದ್ದಾರೆ? ಎಂಬುದು ಕ್ರೇಜಿಸ್ಟಾರ್ ಪ್ರಶ್ನೆ. ಡಬ್ಬಿಂಗ್ ಹಾಗೂ ರೀಮೇಕ್ ಎರಡೂ ಸಂಸ್ಕೃತಿ ಕನ್ನಡ ಚಿತ್ರರಂಗದಿಂದ ದೂರವಾಗಬೇಕೆಂಬುದು ರವಿಮಾಮನ ಕಳಕಳಿ.
ಆದರೆ, ಪ್ರೇಮಲೋಕದಂತ ಸ್ವಮೇಕ್ ಮಾಡಿ ಗೆದ್ದ ರವಿಚಂದ್ರನ್, ಅಣ್ಣಯ್ಯದಂತ ರೀಮೇಕ್ ಚಿತ್ರಗಳಲ್ಲೂ ನಟಿಸಿ ಗೆದ್ದಿದ್ದಾರೆ. ಇತ್ತೀಚಿಗಂತೂ ರವಿಚಂದ್ರನ್ ಸಾಕಷ್ಟು ರೀಮೇಕ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈಗ್ಯಾಕೆ ಈ ವರಸೆ ತಿಳಿಯುತ್ತಿಲ್ಲ!
ಚಿತ್ರರಂಗದಲ್ಲಿ ಒಬ್ಬೊಬ್ಬರು ಒಂದೊಂದು ಅಭಿಪ್ರಾಯಕ್ಕೆ ಬದ್ಧರಾಗಿ ನಿಲ್ಲುವುದನ್ನು ಮೊದಲು ನಿಲ್ಲಿಸಲಿ. ಎಲ್ಲರೂ ಒಗ್ಗಟ್ಟಾಗಿ ಎಲ್ಲರಿಗೂ ಅನುಕೂಲವಾಗುವಂತಿದ್ದು, ಜೊತೆಗೆ ಪ್ರೇಕ್ಷಕರಿಗೂ ಅನ್ಯಾಯವಾಗದಂತೆ ಕನ್ನಡ ಚಿತ್ರರಂಗ ಒಂದಾಗಿ ನಿಲ್ಲುವುದು ಎಂದು ಎಂಬುದು ಸದ್ಯದ ಬಹುದೊಡ್ಡ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)